Monday, October 17, 2011

ಸುಧಾರಿಸಬೇಕಾದ ಭಾರತದ ವಿದೇಶಾಂಗ ನೀತಿ

ಹಾಯ್,

ಯಾವುದೇ ದೇಶಕ್ಕೆ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು, ಶತ್ರುಗಳನ್ನು ಮಟ್ಟ ಹಾಕಲು ನಮ್ಮ ರಕ್ಷಣಾ ಪಡೆಗಳಷ್ಟೇ ಅಲ್ಲ ಸಮರ್ಥ ವಿದೇಶಾಂಗ ನೀತಿಯ ಅವಶ್ಯಕತೆಯಿದೆ.  ನಮ್ಮ ರಾಷ್ಟ್ರದ ಸುತ್ತಲೂ ಶತ್ರುಗಳೂ ಸನ್ನದ್ದರಗುತ್ತಿರುವುದು ಹಗರಣಗಳಲ್ಲಿ ಮುಳುಗಿರುವ ನಮ್ಮ ರಾಜಕಾರಣಿಗಳಿಗೆ ಕಾಣಿಸುತ್ತಿಲ್ಲ. 

ನಾವಂದುಕೊಂಡಂತೆ ವಿದೇಶಾಂಗ ನೀತಿಯಲ್ಲಿ ಕಣ್ಣಿಗೆ-ಕಣ್ಣು ಎನ್ನುವ ನಿಯಮವನ್ನು ಅನುಸರಿಸಲಾಗುವುದಿಲ್ಲ ನಿಜ, ಆದರೆ ನಮ್ಮ ವಿದೇಶಾಂಗ ನೀತಿ ನೋಡಿದರೆ ಅದರಲ್ಲಿ ಒಂದು ಗತ್ತು,  agression ಇಲ್ಲ ಎನಿಸುತ್ತದೆ.  ಬನ್ನಿ ನೋಡೋಣ.

ಪಾಕಿಸ್ತಾನ:
ಮೊದಲು, ಭಾರತ ಎನ್ನುವ ಪದಗಳನ್ನೇ ಭೂಮಿಯಿಂದ ಅಳಿಸಲು ಪ್ರಯತ್ನಿಸುತ್ತಿರವ ಪಾಕಿಸ್ತಾನದ ಬಗ್ಗೆ ಗಮನಿಸೋಣ. ಪಾಕಿಸ್ತಾನ ನಮ್ಮ ದೇಶದಲ್ಲಿ ಮಾಡುತ್ತಿರುವ ಕಿತಾಪತಿ ಎಲ್ಲರಿಗೂ ಗೊತ್ತಿದೆ. ಕಾಶ್ಮೀರ ಇರಬಹುದು, ಬಾಂಬ್ ಸ್ಪೋಟಗಳು, ಕೋಟಾ ನೋಟುಗಳಿರಬಹುದು ಎಲ್ಲದರಲ್ಲೂ ಆದ ಕೈವಾಡವಿದೆ.  ಆದರೆ ನಮ್ಮ ದೇಶವವರು ಕಡ್ಲೆ ಪುರಿ ತಿನ್ನುತ್ತಿದರೆಯೇ ಗೊತ್ತಾಗುತ್ತಿಲ್ಲ.

೧. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಒಂದು ದೊಡ್ಡ ಸ್ವಾತಂತ್ರ್ಯ ಹೋರಾಟವೆ ನಡೆಯುತ್ತಿದೆ.  ಅದಕ್ಕೆ ನಮ್ಮ ದೇಶದವರ ಕುಮ್ಮಕ್ಕು ಇದೆಯಂದು ಪಾಕಿಸ್ತಾನಕ್ಕು ಸಹ ಸಾಕ್ಷ್ಯ ಕೊಡಲಾಗುತ್ತಿಲ್ಲ. ಅಮೆರಿಕ ಕೂಡ ಅಲ್ಲಿ ಭಾರತದ ಕೈವಾಡವಿಲ್ಲ ಎಂದು ಹೇಳುತ್ತಿದೆ. ಬಲೂಚಿ ಹೋರಾಟಗಾರರೂ ಕೂಡ ನಮಗೆ ಭಾರತದಿಂದ ಸಹಾಯ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ.  ಶತ್ರು ದೇಶದಲ್ಲಿ ಇಂತಹ ಒಂದು ಅವಕಾಶವನ್ನು ಕೈ ಬಿಡುವ ಮೂರ್ಖತನ ಇನ್ನೊಂದಿಲ್ಲ.

೨ . ನಿರಂತರವಾಗಿ ಉಗ್ರರೂ ನುಸುಳಿ ಇಲ್ಲಿ ದಾಂದಲೆ ಮಾಡುತ್ತಿದ್ದರೂ, ಪಾಕಿಸ್ತಾನಕ್ಕೆ ಪಾಟ ಕಲಿಸುವ ದಮ್ಮಿಲ್ಲ. ಅವರಿಗಿಂತ ದೂಡ್ಡ ಸೇನೆ, ಹೆಚ್ಚು ಯುದ್ದ ವಿಮಾನಗಳು, ನೌಕಾಪಡೆ , ಮಿಸೈಲ್ ಗಳು ಇದ್ದು ಯಾವ ಉಪಯೋಗ. ಬಹುಶಃ ಆಯುಧ ಪೂಜೆಯೆಂದು ಪೂಜಿಸಲು ಇರಬೇಕು.

೩ . ತೊಂಬತ್ತಾರ ದಶಕದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಯುದ್ಧ ವಿಮಾನ ಪೂರೈಕೆ ನಿಲ್ಲಿಸಿತು. ಆಗ ಪಾಕಿಸ್ತಾನಕ್ಕೆ ಕಾಣಿದ್ದು ಚೀನ. ಚೈನ ಇಂದು ಪಾಕಿಸ್ತಾನಕ್ಕೆ ತಾನು ತಯಾರಿಸುವ ಅತ್ಯಾದುನಿಕ ಜೆ‌ಎಫ್-17 ಪೂರೈಸುತ್ತಿದೆ. (ಈ ವಿಮಾನ ಕೂಡ ನಮ್ಮ ತೇಜಸ್ ನಂತೆ ದೇಶಿಯವಾಗಿ ತಯಾರಿಸಿದ್ದು) . ಆದರೆ ಇದರಲ್ಲಿ ಬಳಕೆಯಾಗುವುದು ರಷ್ಯಾದ RD-93 ಇಂಜಿನ್ ಗಳು(ನಮ್ಮ ತೇಜಸ್ ನಲ್ಲಿ ಬಳಕೆಯಾಗುವುದು ಅಮೆರಿಕದ GE ಇಂಜಿನ್ ಗಳು ;-) ). ರಷ್ಯಾ ನಮ್ಮ ಪರಮಾಪ್ತ ರಾಷ್ಟ್ರವಾದರೂ ಕೂಡ (ಅವರಿಗೆ ನಾವೇ ಅತೀ ಹೆಚ್ಚು ಮಿಲಿಟರಿ ವ್ಯಾಪಾರ ಮಾಡುವುದು) ನಮ್ಮಿಂದ ಏನು ಮಾಡಲಾಗಿಲ್ಲ.

೪ . ಪಾಕಿಸ್ತಾನಕ್ಕೆ ಉಗ್ರರ ವಿರುಧ್ಧ ಹೊರಡಲೂ ಅಮೆರಿಕ ಪಾಕಿಸ್ತಾನಕ್ಕೆ ಬಿಲ್ಲಿಯಾಂತರ ಡಾಲರ್ ಕೊಡುತ್ತಿದೆ. ಇದೇನೋ ಸರಿ. ಗನ್ನು, ಬಾಂಬ್ ಗಳನ್ನು ಕೊಡಲಿ. ಆದರೆ ಅವರನ್ನು ಹೆಚ್ಚು ಓಲೈಸಲು ಅವರಿಗೆ ಅತ್ಯಾಧುನೀಕ PC-3 ಒರಿಯಾನ್ ವಿಮಾನಗಳನ್ನು, UAV (Unmanned Aircraft Vehicle) ಪೂರೈಸುತ್ತಿದೆ. ಖಂಡಿತವಾಗಿಯೂ ಇವುಗಳ ಉಪಯೋಗವಾಗುವುದು ಉಗ್ರರ ವಿರುದ್ದವಲ್ಲ, ಭಾರತದ ವಿರುದ್ದ.
ಅಮೆರಿಕದ ಮಾತು ಕೇಳಿ ಭಾರತ ಇರಾನ್ ನೊಂದಿಗಿನ ಸಂಬಂಧವನ್ನು ಕಡೆದುಕೊಳ್ಳುತ್ತದೆ. ಅಮೆರಿಕ ತನಗೆ ಭಾರತ ಅತ್ಯುತ್ತಮೆ ಸ್ನೇಹಿತ ಎಂದು ಬೊಗಳೆ ಹೊಡೆಯುತ್ತದೆ. ಆದರೆ ಅಮೆರಿಕ ಪಾಕಿಸ್ತಾನಕ್ಕೆ ಕೊಡುವ ಅತ್ಯಾಧುನೀಕ ಶಸ್ತ್ರಗಳನ್ನು ತಡೆಯುವ ತಾಕತ್ತಿಲ್ಲ ನಮಗೆ.

೫ .  ಪ್ರತಿ ಸಲ ನಡೆಯುವ Organization  of  Islamic Conference ಸಭೆಗಳಲ್ಲಿ - ಎಲ್ಲ ಮುಸಲ್ಮಾನ ರಾಷ್ಟ್ರಗಳು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರವಾದ ವಾದವನ್ನೇ ಬೆಂಬಲಿಸುತ್ತವೆ. ನಾವು ಇದನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತೇವೆ. ಇಷ್ಟೇ ಆದರೆ ಸಾಕಿತ್ತೇನೋ ? ಆದರೆ ನಮ್ಮ ಪ್ರತಿನಿಧಿಗಳು ಒಂದು ಹೆಜ್ಜೆ ಮುಂದೆ ಹೋಗಿ ಇಸ್ರೇಲ್ - ಪಾಲೆಸ್ತಿನ್ ವಿಚಾರದಲ್ಲಿ ಗಂಟಾ-ಘೋಷವಾಗಿ ಆ ಮುಸಲ್ಮಾನ ರಾಷ್ಟ್ರಗಳನ್ನೇ ಬೆಂಬಲಿಸುತ್ತೇವೆ.

 ೬  . ಲಿಬ್ಯಾದ ಮಾಜಿ ಸರ್ವಾಧಿಕಾರಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಕಟ್ಟಾ ಬೆಂಬಲಿಗ. ಅವನ ಹೆಸರಿನಲ್ಲಿ ಪಾಕ್ ನಲ್ಲಿ "ಗಡಾಫಿ" ಕ್ರಿಕೆಟ್ ಸ್ಟೇಡಿಯಂ ಇದೆ.  ಮೊನ್ನೆ ಅಮೆರಿಕ ಮಿಲಿಟರಿ ಕಾರ್ಯಚರಣೆಯಲ್ಲಿ ಇವನ್ನನ್ನು ಒದ್ದೋಡಿಸುವಾಗ, ಅವರನ್ನು ಬಾಯಿ ಮಾತಿನಲ್ಲಾದರೂ ಬೆಂಬಲಿಸುವ ಬದಲು ಏನು ನಡೆದೇ ಇಲ್ಲವೆಂಬಂತೆ ಇದ್ದರು ನಮ್ಮ ವಿದೇಶಾಂಗ ಸಚಿವರು.

ಚೀನಾ:
ಈ ಚೀನಿ ಕುಳ್ಳರ ಕಿತಾಪತಿ ಪಾಕಿಸ್ತಾನಕ್ಕಿಂತ ಜಾಸ್ತಿ.

೧.  ಅರುಣಾಚಲ ಪ್ರದೇಶ ಬೇಕು ಅಂತ ಯುದ್ಧ ಮಾಡಿದ ಚೀನಾ ನಮ್ಮ ಜಮ್ಮು ಕಾಶ್ಮೀರದ ೧/೩ ಭಾಗ ಆಕ್ರಮಿಸಿಕೊಂಡಿದೆ.
 ಅವಕಾಶ ಸಿಕ್ಕಾಗಲೆಲ್ಲ ತನಗೆ ಅರುಣಾಚಲ ಪ್ರದೇಶ ಬೇಕು ಅಂತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬೊಬ್ಬೆ ಹಿಡಿಯುತ್ತದೆ.

ಅಲ್ಲ ಗುರುವೇ, ಚೀನಾ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು   (aksai - ಚೀನಾ ) ತನಗೆ ವಾಪಾಸ್ ಬಿಟ್ಟುಕೊಡು ಎಂದು ಭಾರತ ಕೇಳಿದ ನಿದರ್ಶನವೇ ಇಲ್ಲ.

೨. ಹಿಂದೂಗಳಿಗೆ ಪವಿತ್ರವಾದ ಕೈಲಾಸ ಪರ್ವತ ಚೀನಾದ ಹಿಡಿತದಲ್ಲಿದೆ. ಇದರ ಮೇಲೆ ಚೀನಾ ಹೇಗೆ ಹಕ್ಕನ್ನು ಸಾದಿಸುತ್ತದೆಯೋ ಗೊತ್ತಿಲ್ಲ, ಆದರೆ ರಾಜಕಾರಾಣಿಗಳಿಗೆ ಇದು ತಿಳಿದಂತೆ ತೋರುವುದಿಲ್ಲ.

೩. ನಮ್ಮ ಈಶಾನ್ಯ ರಾಜ್ಯಗಳಲ್ಲಿ - ULFA , NSCN ಭಯೋತ್ಪಾದಕರಿಗೆ ಚೀನಾದ ಸಂಪೂರ್ಣ ಕುಮ್ಮಕ್ಕಿದೆ.   ಹೀಗೆಯೇ ಚೀನಾಗೆ ಕೂಡ ಸಿನ್ಕಿಯಂಗ್ ರಾಜ್ಯದಲ್ಲಿ ಮುಸ್ಲಿಂ ಉಗ್ರರ ಉಪಟಳವಿದೆ.  ಇದರಲ್ಲಿ ಭಾರತ ಕೈವಾಡವಿದೆ ಎಂದು ಭಾವಿಸಿದರೆ ನೀವು ಮತ್ತೆ ತಪ್ಪಿದ್ದಿರ.  ಇನ್ನೊಂದು ಆಶ್ಚರ್ಯದ ವಿಷಯವೆಂದರೆ ಇವರಿಗೆ ಕುಮ್ಮಕ್ಕು ಸಿಗುತ್ತಿರುವುದು - ಪಾಕಿಸ್ತಾನದ ಮುಸ್ಲಿಂ ಉಗ್ರರಿಂದ ;-) . ಆದರೆ ಪಾಕಿಸ್ತಾನ ಸರಕಾರ ಏನೋ ಇದರಿಂದ ದೂರ ಉಳಿದಿದೆ.

೪. ನಮ್ಮಲ್ಲಿ ಟಿಬೆಟ್ಟಿನ ಜನರು ದಂಡಿಯಾಗಿ ಬಿದ್ದಿದ್ದರೆ. ಇವರಿಗೆ ಸರಿಯಾಗಿ ತರಬೇತಿ, ಮಾರ್ಗದರ್ಶನ ಕೊಟ್ಟು ಚೀನಾದ ವಿರುದ್ಧ ಸ್ವಾತಂತ್ರ್ಯಕ್ಕೆ ದಂಗೆ ಏಳಲು ಹುರಿದುಂಬಿಸುವುದು ಭಾರತಕ್ಕೆ ಕಷ್ಟವಲ್ಲ.  ಇವರು ಚೀನಾದ ವಿರುದ್ದ ಭಾರತದ ಅತ್ಯುತ್ತಮ ಅಯುಧವಾಗಬಲ್ಲರು.

೫. ಚೀನಾ ಕ್ಯಾತೆ ತೆಗೆಯದೆ ಇರುವ ನೆರೆ ರಾಷ್ಟ್ರಗಳು ತುಂಬಾ ಕಡಿಮೆ. ಭಾರತದಂತೆಯೇ ವಿಯೆಟ್ನಾಂ ಕೂಡ ಚೀನಾದ ಬದ್ದ ವೈರಿ. ಇದರೊಂದಿಗೆ ಭಾರತದ ಸಂಬಂದ ಸುಧಾರಿಸುತ್ತಿದೆ .  ಮೊನ್ನೆ ಭಾರತ ನೌಕಪದೆ ವಿಯೆಟ್ನಾಂಗೆ ಭೇಟಿ ಕೊಟ್ಟಾಗ - ಚೀನಾದ ಯುಧ ನೌಕೆಯೊಂದಿಗೆ ತಕರಾರು ನಡೆಯಿತು (ಇದು ನಮ್ಮನ್ನು ಹೆದರಿಸಲು ಚೀನಾ ನಡೆಸಿದ ಕುತಂತ್ರ).  ವಿಯೆಟ್ನಾಂ  ಏನೋ ಚೀನಾಗೆ ಚೆನ್ನಾಗಿ ಬೆದರಿಸಿತು, ಆದರೆ ನಮ್ಮ ಪುಕ್ಕಲು ವಿದೇಶಾಂಗ ಸಚಿವಾಲಯ ಏನು ದೊಡ್ಡ  ಘಟನೆ ನಡೆದೇ ಇಲ್ಲ ಎಂಬಂತೆ ಹೇಳಿಕೆ ಕೊಟ್ಟಿತು.

೬. ಚೀನಾ ನಮ್ಮ ಸುತ್ತಲು ಶತ್ರುಗಳನ್ನು ಎತ್ತಿ ಕಟ್ಟುತ್ತಿದೆ - ಪಾಕಿಸ್ತಾನ , ಬರ್ಮಾ.  ಶ್ರೀಲಂಕಾಗೆ ಸ್ನೇಹ ಹಸ್ತ ಚಾಚುತ್ತಿದೆ. ಮೊನ್ನೆ ಶ್ರೀಲಂಕಾದ ಪ್ರಧಾನಿ ಚೀನಾವನ್ನು ಹೊಗಳುತ್ತಿದರು. ಇತ್ತ  ಚೀನಾ ನಮ್ಮನ್ನು ಸುತ್ತುವರೆಯುತ್ತಿರಬೇಕಾದರೆ ಅತ್ತ ಅದರ ತೊಂದರೆ ಎದುರಿಸುತ್ತಿರುವ - ದಕ್ಷಿಣ ಕೊರಿಯ, ಜಪಾನ್ ನೊಂದಿಗೆ ಯಾವುದೇ ರಕ್ಷಣಾ ಒಪ್ಪಂದ ಮಾಡಿಕೊಂಡಿಲ್ಲ.  ಚೀನಾಗೆ ನಾವು ಹೆದರಿಕೊಂಡು - ತೈವಾನ್ ದೇಶವನ್ನು ಗುರುತಿಸಿಯೇ ಇಲ್ಲ.  ನಮ್ಮ ಪುಕ್ಕಳು ತನಕ್ಕೆ ಎಲ್ಲೇ ಇಲ್ಲ ಎನಿಸುತ್ತದೆ.

ನೇಪಾಳ:
ಇದು ಭಾರತದ ಉತ್ಯುತ್ತಮ ಸ್ನೇಹಿತವಾಗಿತ್ತು . ಅಲ್ಲಿನ ರಾಜರು ಭಾರತ ಪರವಾಗಿದ್ದರು. ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿತ್ತು.

ಅಲ್ಲಿನ ಕಮ್ಯುನಿಸ್ಟರು, ಚೀನಾದ ಸಹಾಯದೊಂದಿಗೆ  ದಂಗೆ ಎದ್ದು  ತಮ್ಮ ಸರಕಾರವನ್ನು ಸ್ಥಾಪಿಸಿಕೊಂಡಿದ್ದಾರೆ.  ಇವರುಗಳು ಭಾರತಕ್ಕೆ ಶತ್ರುಗಳಲ್ಲ್ದಿದ್ದರು ಚೀನಾಕ್ಕೆ ಹೆಚ್ಚು ಆಪ್ತ.  ಭಾರತ ನೇಪಾಳಕ್ಕೆ ಗುಪ್ತವಾಗಿಯೋ, ಬಹಿರಂಗವಾಗಿಯೂ ಸಹಾಯ ಕೊಟ್ಟು ಅಲ್ಲಿನ ಕಮ್ಯುನಿಸ್ಟರನ್ನು ದೂರ ಇಡುವುದು ಕಷ್ಟವಾಗುತ್ತಿರಲಿಲ್ಲ. (ಪಕ್ಕದಲ್ಲಿರು ಸಣ್ಣ ದೇಶಗಳಲ್ಲಿ ತಮ್ಮ ಸರಕಾರವನ್ನು ಸ್ಥಾಪಿಸುವ ಕೆಲಸವನ್ನು ಎಲ್ಲ ಶಕ್ತ ರಾಷ್ಟ್ರಗಳು ಮಾಡುತ್ತಿರುತ್ತವೆ ) ಇದು ನಮ್ಮ ವಿದೇಶಾಂಗ ನೀತಿಯ ದಿವಾಳಿತನ ತೋರಿಸುತ್ತದೆ.

ಬಾಂಗ್ಲಾದೇಶ:
ನಾವು ಇದಕ್ಕೆ ನಮ್ಮ ರಕ್ತ ನೀಡಿ ಸ್ವಾತಂತ್ಯ್ರ ಕೊಟ್ಟರು - ನಮಗೆ ಸಿಕ್ಕ ಗೌರವ ಅಷ್ಟಕಷ್ಟೇ.  ಇಸ್ಲಾಂ  ಮೂಲಭೋತವಾದ ಹೆಚ್ಚ್ಗಿದ್ದರು ನಮ್ಮ ಸರಕಾರ ಕಣ್ಣು ಮುಚ್ಚಿಕೊಂಡು ಬಿದ್ದಿದೆ.

ಅಲ್ಲಿನ ವಿರೋಧಿ ಪಕ್ಷ - ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಭಾರತ ವಿರೋಧಿ ದೋರಣೆ ಇದೆ. ಅದು ಅಧಿಕಾರಕ್ಕೆ ಬರದಿರುವಂತೆ ಮಾಡಲು ಭಾರತಕ್ಕೆ ಕಷ್ಟವೇನಲ್ಲ (ದುಡ್ಡು ಮತ್ತು ಗೂಡಾಚಾರಿಕೆ ಉಪಯೋಗಿಸಿ ). 

ಬಾಂಗ್ಲಾದೇಶದೊಂದಿಗೆ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಅದರೊಂದಿಗೆ ಗಡಿ ಭಾಗದ ಭೂಮಿ ಬದಲಾವಣೆ ಮಾಡಲು ಒಪ್ಪಿದ್ದೇವೆ. ಇದರಲ್ಲಿ ಭಾರತ ಬಾಂಗ್ಲಾದೇಶಕ್ಕೆ 10,000 (ಹತ್ತು ಸಾವಿರ ) ಎಕರೆ ಹೆಚ್ಚಿಗೆ ಭೂಮಿಯನ್ನು ಕಡಲು ಒಪ್ಪಿದೆ . ಇದನ್ನು ನೋಡಿ ಏನನ್ನಬೇಕೂ ಗೊತ್ತಾಗುತ್ತಿಲ್ಲ

ಬರ್ಮಾ:
ಬರ್ಮದಲ್ಲಿ ಮಿಲಿಟರಿ ಆಡಳಿತ ಬಂದ ಮೇಲೆ, ಅದನ್ನು ವಿರೋಧಿಸಿ ಭಾರತ ಅದರೊಂದಿಗೆ ಸಂಬಂಧ ಕಡಿಮೆ ಮಾಡಿತು.
ಬರ್ಮದಲ್ಲಿ ಮಿಲಿಟರಿ ಆಡಳಿತ ಇದ್ದರೆ ನಮಗೆ ಏನಪ್ಪಾ ಆಗಬೇಕು, ನಮ್ಮ ಅವಶ್ಯಕತೆ ಮೊದಲು ನೋಡಬೇಕು ತಾನೇ ?  ಇಲ್ಲಿ ಚೀನಾಕ್ಕೆ ಒಂದು ಒಳ್ಳೆಯ ಅವಕಾಶ ದೊರೆಯಿತು.

ಆದರೆ 1990 ರ ದಶಕದಲ್ಲಿ ಭಾರತ ತನ್ನ ನಡುವಳಿಕೆಯನ್ನು ಬದಲಾಯಿಸಿ ಅದರೊಂದಿಗೆ ಸ್ನೇಹ ಮಾಡಿತು.  ಈಗ ಪರಿಸ್ಥಿತಿ  ಸುದಾರಿಸಿದೆ. ಮೊನ್ನೆ ಮೊನ್ನೆ ನಮ್ಮ ವಿದೇಶಾಂಗ ಸಚಿವರ ಒಂದು ಹೇಳಿಕೆ ಕೊಟ್ಟರು -" ಬರ್ಮಾದ ಜನರೇ ಅಲ್ಲಿನ ಪ್ರಜಾತಂತ್ರ ವ್ಯವಸ್ಥೆಗೆ ಹೋರಾಡಬೇಕು., ಭಾರತ ಮಧ್ಯೆ ಪ್ರವೇಶಿಸುವುದಿಲ್ಲ."

ಆದರೂ ಚೀನಿ ಪ್ರಭಾವ  ತಗ್ಗುವ ಲಕ್ಷಣಗಲಿಲ್ಲ.

ತ್ರಿನಿದಾದ್, ಫಿಜಿ, ಗುಯನ, ಮಾರಿಷಸ್:
ಇಲ್ಲೆಲ್ಲೇ ಭಾರತೀಯರು ಬಹುಸಂಖ್ಯೆಯಲ್ಲಿ ಇದ್ದಾರೆ. ಆದರೆ ಭಾರತ ಈ ದೇಶಗಳನ್ನು ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿ ಕೊಳ್ಳಲು ಯಾವುದೇ ಪ್ರಯತ್ನ ಮಾಡಿದಂತಿಲ್ಲ.

ಕೊನೆ ಹನಿ: ಇನ್ನೂ ಖಾಯಂ ಸದಸ್ಯತ್ವ ಬೇಕೆ?
ಭಾರತ ವಿಶ್ವ ಸಂಸ್ಥೆಯಲ್ಲಿ ಕಾಯಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.  ಆ ಸ್ಥಾನ ಇರುವುದು - ತಾಕತ್ತು ಇರುವವರಿಗೆ,  ಜಗತ್ತಿನಲ್ಲಿ ಬೇರೆ ದೇಶಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುವವರಿಗೆ - ಜನ ಸಂಖ್ಯೆ ತೋರಿಸಿ ಗಳಿಸುವ ಸ್ಥಾನವಲ್ಲ.

Saturday, October 15, 2011

ಒಂದು ಶಿಶು ಗೀತೆ

ನಾನು ಮಗಳಿಗೆ ಬರೆದೆ ಗೀತೆ

ಜೋ ಜೋ ಬಂಗಾರಿ
ಮಲಗು ಮುದ್ದು ಸಿಂಗಾರಿ

ಹಾರು ಕುದುರೆ ಬೆನ್ನೇರಿ
ಆಡು ಕನಸಿನ್ ಲೋಕದಲ್ಲಿ

ಬಂದರೆ ಆಗ ಗುಮ್ಮ
ಅಡುಗು ನೀನು ಚಿನ್ನ

ನಗುತಾ ಇರು ರನ್ನ
ಮಲಗು ನೀನು ಚೆನ್ನ


 :-)

Saturday, September 10, 2011

ಧರ್ಮ, ನಾಸ್ತಿಕತೆ ಹಾಗೂ ಮನುಷ್ಯ

ಗೆಳೆಯರೇ,

ನೀವು ಮೇಲಿನ ಎರಡು ಪದಗಳನ್ನೂ, ಅದರ ಬಗ್ಗೆ ಹಲವಾರು ಚರ್ಚೆಗಳನ್ನು ಕೇಳಿರಬಹುದು.
ಇಲ್ಲಿ ನಾನು ಯಾವುದು ಸರಿ, ಯಾವುದು ತಪ್ಪು ಎಂಬ ವಾದವಿರುವುದಿಲ್ಲ;  ವಿಭಿನ್ನ ರೀತಿಯ ಚರ್ಚೆ.

ನನ್ನ ಅಭಿಪ್ರಾಯ: ಮನುಷ್ಯ ಅವನ "logic" ಅನುಸರಿಸಿ, ಸುಖವನ್ನು ಹುಡುಕಿಕೊಂಡು ಹೋಗುತ್ತಾನೆ.  ನಿಜ ಇಷ್ಟೇ  !!!

ಆಸ್ತಿಕತೆ ಬೇರೆ ಅಲ್ಲ, ನಾಸ್ತಿಕತೆ ಬೇರೆ ಅಲ್ಲ ; ವೈಜ್ಞಾನಿಕತೆ ಬೇರೆ ಅಲ್ಲ, ಧಾರ್ಮಿಕತೆ ಬೇರೆ ಅಲ್ಲ . ಇವೆಲ್ಲ ಸತ್ಯವನ್ನು ಹುಡುಕುವ ಬೇರೆ ಬೇರೆ ದಾರಿಗಳು. ಆ ಸತ್ಯ - ಮನುಷ್ಯನ ಉನ್ನತಿ.

ನೀವು ಯಾವುದೇ ಧಾರ್ಮಿಕ ಚಾನಲ್ ಗಳನ್ನು ನೋಡಿ - ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಇರಿ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ,  ಒಟ್ಟಾಗಿ ಪ್ರಾರ್ಥನೆ (ಅಥವಾ ಸತ್ಸಂಗ) ಮಾಡಿ ಎನ್ನುತ್ತಾರೆ. (ಮೇಲಿನ ಎಲ್ಲದ್ದನ್ನು - ದೇವರು ಹೇಳಿದ್ದಾನೆ, ಬಯಸುತ್ತಾನೆ ಎನ್ನುತ್ತಾರೆ)

ಮನುಷ್ಯನು ಜೀವನದಲ್ಲಿ / ಕೆಲಸದಲ್ಲಿ ಮುಂದೆ ಬರಬೇಕಾದರೆ - ಜನರ ಸಂಪರ್ಕವಿರಬೇಕು.  ಆದಿಲ್ಲದೆ ಏನು ಸಾಧ್ಯವಿಲ್ಲ . ಹೊಸ ಕಂಪನಿ ತೆರೆಯಬೇಕಾದರೆ, ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಎಲ್ಲಕ್ಕೂ ಜನ ಬೇಕು. ರಾಜಕಾರಣಿಗಳನ್ನು ಕೇಳಿ; ಇದನ್ನು ಸರಿಯಾಗಿ ವಿವರಿಸುತ್ತಾರೆ.

ಇನ್ನೂ ಒಟ್ಟಿಗೆ ಕಡ್ಡಾಯ ಪ್ರಾರ್ಥನೆಯ ಮಾಡುವುದರ ಫಲ ಏನಪ್ಪಾ ? - ಅಲ್ಲಿ ಎಷ್ಟು ಜನರಿಗೆ ದೇವರು ಒಲಿದು ಮೋಕ್ಷ ಸಿಗುತ್ತದೋ ಗೊತ್ತಿಲ್ಲಾ, ಎಷ್ಟು ಜನರ ಆಸೆ ಈಡೇರುತ್ತೋ ತಿಳಿದಿಲ್ಲ; ಆದರೆ ಎಲ್ಲ ಜನರು ಅಲ್ಲಿ ಸೇರುವುದರಿಂದ ಅಲ್ಲಿ ಸಮಾಜ ಒಗಟ್ಟಗುತ್ತದೆ. ಇದರಿಂದ ಆ ಸಮಾಜದ ಎಲ್ಲರೂ ಅನುಕೂಲವಾಗುತ್ತದೆ, ಒಗ್ಗಟ್ಟಿನಿಂದ ಪ್ರತಿಕೂಲ ಸನ್ನಿವೇಶದಲ್ಲೂ ಬದುಕೂವ, ಬೆಳೆಯುವ ತಾಕತ್ತು ಬರುತ್ತದೆ  - ಕಡ್ಡಾಯ ಭಾನುವಾರದ ಚರ್ಚ್ ಮತ್ತು ಶುಕ್ರವಾರದ ನಾಮಜ್ ನಿಂದಾದ ಉಪಯೋಗ ಅವು ಜಗತ್ತಿನಲ್ಲೆಡೆ ಹರಡಿದೆ. ನಮ್ಮ ದೇಶದ ಜೈನರು/ಮಾರ್ವಾಡಿಗಳು ಕೂಡ (ಬೆಂಗಳೂರಿನಲ್ಲೇ )ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ತಮ್ಮವರಿಗೆ ವ್ಯಾಪಾರ/ಉದ್ದಿಮೆ ಮಾಡುಲು ಪರಸ್ಪರ ಸಹಾಯ ಮಾಡುತ್ತಾರೆ ( ಇವತ್ತು SP ರೋಡ್ ನಲ್ಲಿ ಅವರ ವ್ಯಾಪಾರವನ್ನು ನೋಡಿ, ಒಂದು sample ತಿಳಿಯುತ್ತದೆ.)

ಒಮ್ಮೆ GOD ಚಾನಲ್ ನೋಡುತ್ತಾ ಇದ್ದೇ. ಅದರಲ್ಲಿ ಕುಡಿತವನ್ನು ಬಿಡಿ, ಡ್ರಗ್ಸ್ ಬಿಡಿ, ಸಿಗರೇಟು ಬಿಡಿ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಅಂತ ಲೆಕ್ಚರ್ ಕೊಡುತ್ತಾ ಇದ್ದ . ದೇವರ ಪ್ರೀತಿ ಬಗ್ಗೆ ನನಗೆ ಗೊತ್ತಿಲ್ಲ- ಆದರೆ ಆ ಕೆಟ್ಟ ಚಾಟಗಳನ್ನು ಬಿಟ್ಟರೆ ಅವರಿಗೆ ಒಳ್ಳೆಯದಲ್ಲವೇ (ಆರೋಗ್ಯಕ್ಕೆ ಹಾಗೂ ಜೇಬಿಗೆ ;-))

ಇನ್ನೂ ದಾನ/ ಬೇರೆಯವರಿಗೆ ಸಹಾಯ ಮಾಡಿ ಎನ್ನುತ್ತಾರೆ.  ನಿಮ್ಮಾನ್ನು ದೇವರು ಮೆಚ್ಚುತ್ತಾನೆ ಅಂತ ಆಸ್ತಿಕರು ಹೇಳುತ್ತಾರೆ. ಆದರೆ ಈ ನಡುವಳಿಕೆಗೆ ಕಾರಣವನ್ನು ವಿಜ್ಞಾನಿಗಳು ಹೀಗೆ ವಿವರಿಸುತ್ತಾರೆ: ನೀವು ಒಂದು ನಾಯಿಯನ್ನು ಪ್ರೀತಿಯಿಂದ ನಾಲ್ಕು ತುತ್ತು ಹಾಕಿದರೆ, ಅದು ನಿಮ್ಮನ್ನು ನೋಡಿಕೊಳ್ಳುವಿದಿಲ್ಲವೇ? (ಹಕ್ಕಿ ಎಮ್ಮೆಯ ತಲೆಯಿಂದ, ಹುಳ ತಿನ್ನುವುದರಿಂದ ಇಬ್ಬರಿಗೂ ಲಾಭವಿದೆ) ಹಾಗೆಯೇ ನಿಮಾಗೂ ಮುಂದೊಂದು ದಿನ ಸಹಾಯ  ಬೇಕಾದ ಸಮಯದಲ್ಲಿ ಸಿಗಬಹುದು.

ನೀವು ಯಾವುದೇ ಸ್ವಾಮೀಜಿಯ ಭಾಷಣವನ್ನೊ? ಧಾರ್ಮಿಕ ಲೇಖನವನ್ನೊ ನೋಡಿ - "ವಸುಧೈವ ಕುಟುಂಬಕಮ್" . ಎಲ್ಲರಲ್ಲೂ ಒಂದೇ ದೇವರ ಅಂಶವಿದೆ ಎನ್ನುತ್ತಾರೆ.  ನೀವು ಒಬ್ಬ "biologist"ನ ವಿಚಾರಿಸಿ ಅವನು ಹೇಳುತ್ತಾನೆ: ಪ್ರತಿಯೊಂದು ಜೀವಿಯಲ್ಲಿರುವುದು (ಮೀನು, ಪಕ್ಷಿಗಳು, ಪ್ರಾಣಿಗಳು) ಒಂದೇ ಮೂಲ ತತ್ವ - ಅದೇ "DNA", "RNA".
"RNA" ಕಂಡುಹಿಡಿದ ಹೇಳಿದ ನಂತರ ವಿಜ್ಞಾನಿ ಹೇಳಿದ್ದು ಇಷ್ಟೇ  - 'ನನ್ನ ಸಂಶೋಧನೆಯ ನಂತರ ಹೊರಗೆ ಬಂದೆ - ಪ್ರತಿಯೊಂದು ಜೀವಿ ಗುಬ್ಬಿ, ಮರ ಎಲ್ಲರಲ್ಲೂ ಒಂದೇ  ಅಂಶವನ್ನು ಕಾಣುತ್ತಿರುವೆ' ;-)

ಯಾವುದೇ ಧಾರ್ಮಿಕ ಗುರುಗಳು ಹೇಳುವ ಉಪದೇಶವನ್ನು ಕೇಳಿ - ಆ ಎಲ್ಲ ಉಪ್ದೇಶಗಳನ್ನು ಆದ್ಯತ್ಮಿಕತೆ ಇಲ್ಲದ ಹಾಗೆ ಜನರಿಗೆ ತಿಳಿಯುವ ಹಾಗೆ ಹೇಳಬಹುದು.  ಅತ್ಯಂತ ಪ್ರಸಿದ್ದವಿರುವ "DALE CARNIGE" ಅವರ "How to win friends and influence people" ಓದಿ. ಅಲ್ಲಿ ಧಾರ್ಮಿಕ ಪ್ರವಚನಗಳಲ್ಲಿ ಇರುವುದನ್ನೇ ಬಟ್ಟಿ ಇಳಿಸಿ, ಆಧ್ಯಾತ್ಮಿಕತೆ ತೆಗೆದು ಹೇಳಿದ್ದಾನೆ.

ಹೆಚ್ಚು ಕೊರೆಯಲಿಕ್ಕೆ ಹೋಗುವುದಿಲ್ಲ - ನಾನು ಶ್ರೀ ಶ್ರೀ ರವಿಶಂಕರ್ ಹಾಗೋ "Richard Dawkins" ಅವರ ವೀಡಿಯೋಗಳನ್ನು ನೋಡಿದ್ದೇನೆ. ಅದರ ಸಾರ ಇಷ್ಟೇ (ನನ್ನದೊಂದು ಹಳೆಯ ಪೋಸ್ಟ್ )

When Richard Dawkins talks, you notice that he emphasizes "importance and joy" of living in present moment and exploring the mystery of world. (also stressing dont think about god)

If you listen to Sri Sri Ravishankar, he too emphasizes importance and joy of being in present moment. (also stressing love of god)

Saturday, September 3, 2011

ಹಂಪೆಯಲ್ಲಿ ನಾನು ಕಲಿತ ಪಾಠ, ನನ್ನ ಆಲೋಚನೆಗಳು

ನಾನು ಹಂಪೆಯಿಂದ ಹಿಂತಿರುಗಿದರು, ಇನ್ನೂ ನನ್ನ ತಲೆಯಿಂದ ಹೋಗಿಲ್ಲ.  ನಮ್ಮ ಮನೆಯ ಸಮೀಪವಿರುವ ಹನುಮಂತನ ದೇವಸ್ಥಾನದ ಸುತ್ತಲೂ ಹಂಪೆಯ ವಿವಿಧ ಸ್ಮಾರಕಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಅದರಲ್ಲಿರುವ ಹಲವಾರು ಚಿತ್ರಗಳನ್ನು ನಾನು ಗುರುತಿಸಬಲ್ಲೆ. ಪತ್ರಿಕೆಯಲ್ಲೂ ಹಲವಾರು ಬಾರಿ ಹಂಪೆಯ ಬಗ್ಗೆ ಓದಿದ್ದೆ .

ಕಮಲಪುರದಲ್ಲಿ ನಾನು ಒಂದು ದೊಡ್ಡ ಬಂಗಲೆಯನ್ನು (ರಾಜಪುತ ಕೋಟೆ ಎಂಬ ಹೆಸರು) ನೋಡಿದ್ದೆ .  ಹಿಂತಿರುಗಿ ಬಂದ ಮೇಲೆ ಪತ್ರಿಕೆಯಲ್ಲಿ ಅದರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು . MLA ಆನಂದ್ ಸಿಂಗ್ ಅವರ ತಮ್ಮ (ಅಥವಾ ಮೈದುನ ), ಅದನ್ನು ಕಟ್ಟಿಸಿದ್ದಂತೆ ....  ಹಂಪೆಗೆ ವಿಶ್ವ ಪರಂಪರೆ ಪಟ್ಟಿ ಕೊಡಬೇಕಾದರೆ - ಅಲ್ಲಿನ ಕಟ್ಟಡಗಳ, ಹಂಪೆಯ ಪರಿಸರದ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಿಯಮವಿದೆ.  ಅದನ್ನು ಉಲ್ಲಂಘಿಸಿ ಮಹಲನ್ನು ಕಟ್ಟಿದ್ದಾರೆ.  (ಎಲ್ಲಿಂದಲೋ ಮುಸ್ಲಮನರಿಗೆ ಹೆದರಿಕೊಂಡು ಓಡಿ ಬಂದವರಿಗೆ, ಈ ನಾಡಿನ ಪರಂಪರೆಯ ಮಹತ್ವ ಹೇಗೆ ತಿಳಿಯಬೇಕು ಎಂದುಕೊಂಡೆ ?  ಯೋಚನೇ ಮಾಡಿದಾಗ ಯಾವನೋ ಒಬ್ಬ ಮಾಡಿದ ತಪ್ಪಿಗೆ ಕರ್ನಾಟಕದಲ್ಲಿರುವ ಎಲ್ಲ ರಾಜಪುತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಅನ್ನಿಸಿತು)

ಹಂಪೆಗೆ ರೈಲಿನಲ್ಲಿ ಹೋಗುವಾಗ ದಾರಿಯಲ್ಲಿ  ಬೆಳಗ್ಗೆ ಆದ ಕೂಡಲೇ ಅದಿರಿನ ಕಾರ್ಖಾನೆಗಳು ಉಗುಳುತ್ತಿರುವ ಹೊಗೆ ನಿಮ್ಮನ್ನು ಸ್ವಾಗತಿಸುತ್ತವೆ. ಹಂಪೆಯಲ್ಲಿ ಹತ್ತಿರ ಹೆದ್ದಾರಿಗಳಲ್ಲಿ ಓಡಾಡಿದರೆ - ಅದಿರಿನ ಕೆಂಪಗಿನ ದೂಳು ನಿಮ್ಮನ್ನು ಅವರಿಸುತ್ತದೆ. ಇಷ್ಟು ಲೂಟಿ ಮಾಡುತ್ತಿರುವುದು ಆನಂದ್ ಸಿಂಗ್ ಅವರಿಗೆ ಸಾಕಾಗಲಿಲ್ಲ ಎನಿಸುತ್ತದೆ.  ಮೊನ್ನೆ ಪತ್ರಿಕೆಯಲ್ಲಿ ಅವರು ಹಂಪೆಯ ಸುತ್ತುಮುತ್ತಲು ಕಲ್ಲಿನ ಗಣಿಗಾರಿಕೆಗೆ ಅನುಮತಿ ಬೇಕೆಂದು - ಹೋರಾಟ ಮಾಡುವುದಾಗಿ ಬಂದಿತ್ತು .

ಈ ಸಿಂಗ್ ಕುಟುಂಬವನ್ನು ಎತ್ತಂಗಡಿ ಮಾಡದಿದ್ದರೆ, ಹಂಪೆಯ ಸ್ಮಾರಕಗಳಿಗೆ ಉಳಿಗಾಲವಿಲ್ಲ ಎನಿಸುತ್ತದೆ.

ಹಂಪೆಯಲ್ಲಿ ನಾನು ಓಡಾಡುವಾಗ, ವಿರೂಪಾಕ್ಷ ದೇವಾಲಯದ ಮುಂದಿರುವ ರಾಜ ಬಿದಿಯ ಎರಡು ಕಡೆಗಳಲ್ಲಿ ಬಹಳ ಹಳೆಯದಾದ ಕಲ್ಲಿನ ಮಂಟಪಗಳಿವೆ. ಅದರಲ್ಲಿ ಕೆಲವು ಅಂಗಡಿಗಳಿದ್ದರೆ, ಇನ್ನೂ ಕೆಲವು ಮನೆಗಳನ್ನು ಮಾಡಿಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ ಅವೆಲ್ಲವನ್ನು ಎತ್ತಂಗಡಿ ಮಾಡಿಸಿದಾಗ, ಅಲ್ಲಿ ಕೆಲವು ಪುರಾತನ ವಸ್ತುಗಳು ಸಿಕ್ಕಿದ್ದನ್ನು ಓದಿ ಖುಷಿಯಾಯಿತು.


ಹಂಪೆಯ ಪ್ರವಾಸ ಮಾಡುವಾಗ ಹಲವಾರು ಯೋಚನೆಗಳು ತಲೆಗೆ ಬಂದವು.  ಮೊದಮೊದಲು ಹಂಪೆಯ ದುಸ್ಥಿತಿಯನ್ನು ನೋಡಿ ಬಹಳ ಬೇಸರವಾಯಿತು. ಕೃಷ್ಣದೇವರಾಯನ ದೊಡ್ಡಸ್ತಿಕೆಯನ್ನು ನೋಡಿ ಚೆನ್ನಾಗಿ ಅವನ್ನು ಬೈದುಕೊಂಡೆ. ಅವನು ಎಲ್ಲ ಬಹಮನಿ ರಾಜ್ಯಗಳನ್ನು ಗೆದ್ದಿದ್ದರು ಸಹ, ಅವಗಳನ್ನು ಅವನಿಗೆ ಹಿಂತಿರುಗಿಸಿ "ಯವನ ರಾಜ್ಯ ಸಂಸ್ಥಾಪಕ" ಎಂಬ ಬಿರುದನ್ನು ಪಡೆದುಕೊಂಡಿದ್ದ. ಅಲ್ಲಿ ವಜ್ರಗಳನ್ನು ಸೇರಿನಲ್ಲಿ ಮಾರುತ್ತಿದ್ದರು ಎಂದ ರಸ್ತೆಯನ್ನು ನೋಡಿದೆವು ... ಇಡೀ ನಗರದಲ್ಲಿ ಕಾಣುವ ಅದ್ಭುತವಾದ ಕಲ್ಲಿನ ಕೆತ್ತನೆಗಳು, ಕಟ್ಟಡಗಳು ನೋಡಿದೆವು  .  ಹಂಪೆಯಲ್ಲಿ ನೀವು ಎಲ್ಲೆ ನೋಡಿದರೂ ಹಾಳಾದ ದೇವಾಲಯವು ಕಾಣುತ್ತದೆ.

ನೀವು ಹಂಪೆಯನ್ನು ನೋಡಿದ ಯಾರನ್ನಾದರೂ ಕೇಳಿ, ಅದರ ಗತ ವೈಭವನ್ನು ನೆನೆಸಿಕೊಂಡು ಬೇಸರಪಡುತ್ತಾರೆ.  ನನಗೆ ಅನ್ನಿಸಿದ್ದು - ನಾವು ಇನ್ನೂ ಎಷ್ಟು ದಿವಸ ಗತ ವೈಭವವನ್ನು ನೆನೆಸಿಕೊಂಡು ಕೊರಗುವುದು ? ಕೊರಗಿದಷ್ಟೂ "ಡಿಪ್ರೆಷನ್" ಗೆ ಜಾರುತ್ತೇವೆ ಹೊರತು, ಉದ್ದರವಾಗುವುದಿಲ್ಲ. ಮತ್ತೆ ಅಂತಹ ರಾಷ್ಟ್ರ ಕಟ್ಟಲು ಕನ್ನಡಿಗರಿಗೆ ಸದ್ಯವಿಲ್ಲವೇ ? ಸಾಮರ್ಥ್ಯವಿಲ್ಲವೇ?  ಇಲ್ಲ ಖಂಡಿತ ಅದು ಸಾದ್ಯವಿದೆ. ಸಾಮರ್ಥ್ಯವಿದೆ . ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಕನ್ನಡಿಗರೂ ಹೆಸರು ಮಾಡಿದ್ದರೆ, ಆದರೆ ಇಂದು ಕೊರತೆಯಿರುವುದು ಅವರಲ್ಲಿ ಕನ್ನಡದ ಅಭಿಮಾನ :(.

ಹಂಪೆ ದ್ವಾಪರದಲ್ಲಿ ಸಾಕ್ಷಾತ್ ಹನುಮನಿದ್ದ ಸ್ಥಳ. ಅವನು ಶಕ್ತಿಯ ಪ್ರತೀಕ. ಹಂಪೆಯಲ್ಲಿ ಎಲ್ಲೆಲ್ಲಿ ನೋಡಿದರೂ ನಿಮಗೆ ಅದ್ಭುತ ದೇವಲಯಗಳು ಕಾಣುತ್ತವೆ. ಆದರೆ ಮುಸ್ಸಲ್ಮಾನ ಸೈನ್ಯ ಬರುವಾಗ ಎಲ್ಲ ದೇವರು, ದೇವಾಲಯಗಳನ್ನು ಬಿಟ್ಟು (ಸಂಪತ್ತನ್ನು ಮಾತ್ರ ತೆಗೆಕೊಂಡು) ತಿರುಮಲರಾಯ ಓಡಿಹೋದ. ಜನರೂ ಓಡಿ ಹೋದರೂ.  ಅಷ್ಟು ಪೂಜೆ ಮಾಡಿದರೂ, ಹಂಪೆಯ ರಕ್ಷಣೆ ಆಗಲಿಲ್ಲ. ಒಂದಂತು ನನಗೆ ಸ್ಪಷ್ಟವಾಯಿತು. ನಿಜವಾದ ಶಕ್ತಿಯಿರುವುದು ಮನುಷ್ಯನ ಸಾಮರ್ಥ್ಯದಲ್ಲಿ, ಪ್ರಯತ್ನದಲ್ಲಿ - ದೇವರಲ್ಲಿ, ವಿಗ್ರಹಗಳಲ್ಲಿ ಅಲ್ಲ.  ದೈವ ಶಕ್ತಿಯಿದ್ದರೂ ಸಹ ಅದು ಮನುಷ್ಯ ಪ್ರಯತ್ನದಲ್ಲಿ ವ್ಯಕ್ತವಾಗಬೇಕು ಹಾಗೂ ವ್ಯಕ್ತವಾಗುತ್ತದೆ ಕೂಡ. ಹರಕೆಯಿಂದ, ಬೇಡುವುದರಿಂದ,  ಸುತ್ತುವುದರಿಂದ, ಶಾಸ್ತ್ರ ಕೇಳುವುದರಿಂದ , ಭವಿಷ್ಯ ನೋಡುವುದರಿಂದ, ಹೆಸರು ಬದಲಾಯಿಸುವುದರಿಂದ  ಏನೂ ಸದ್ಯವಿಲ್ಲ.

ಇಲ್ಲಿಗೆ ನನ್ನ ಹಂಪೆಯ ಪುರಾಣ ಮುಕ್ತಾಯ  :)

Sunday, August 7, 2011

ವಿಜಯನಗರದ ಪ್ರವಾಸ - ೩

ಬಹಳ ದಿನಗಳಾದ ಮೇಲೆ ಮೂರನೇ ದಿನದ ಕಥೆಯನ್ನೂ ಬರೆಯುತ್ತಿದ್ದೇನೆ

ನಾವು ಬೆಳಗ್ಗೆ ತೋರಣಗಲ್ಲಿನಲ್ಲಿ ರೂಂ ಖಾಲಿ ಮಾಡಿ - ಹೊಸಪೇಟೆಯಲ್ಲಿ ಹೋಟೆಲ್ಲಿನಲ್ಲಿ ಲುಗ್ಗೆಜ್ಜನ್ನು ಇಟ್ಟೆವು. ಬಸ್ಸಿನಲ್ಲಿ ಹಂಪೆಗೆ ಹೋದೆವು .   ಇಳಿಯುತ್ತಲೇ ಆಟೋದವನೊಂದಿಗೆ ಮಾತನಾಡಿ ಹಂಪೆಯನ್ನು ತೋರಿಸಲು ೪೦೦ ರೂಪಾಯಿ ಮಾತನಾಡಿಕೊಂಡೆವು.  ಇವನು ಸಾಕಷ್ಟು ಜಾಗಗಳನ್ನು ತೋರಿಸಿದರು ಸಹ, ಅದರ ಇತಿಹಾಸದ ಅರಿವಿರಲಿಲ್ಲ.   ನನಗೇನೋ ಗೈಡ್ ಜೊತೆ ಹೋಗುವುದೇ ಉತ್ತಮ ಎನ್ನಿಸಿತು. ಇವನು ಆಟೋದಲ್ಲಿ ಕರೆದುಕೊಂದು ಹೋಗುವುದಕ್ಕಿಂತ ನಡೆಸಿದ್ದೆ ಹೆಚ್ಚು.

ಮೊದಲು ನೋಡಿದ್ದು ಚಕ್ರ ತೀರ್ಥ .  ಇಲ್ಲಿ ತುಂಗೆಯು ನೇರವಾಗಿ ಬಂದು, ತಕ್ಷಣ ಎಡಕ್ಕೆ ತಿರುಗುತ್ತಾಳೆ.  ಹಾಗೆ ತಿರುಗುವಾಗ ಒಂದು ಸುಳಿ ಮೂಡುತ್ತದೆ. ಮಳೆಗಾಲದಲ್ಲಿ ಬಹುಶಃ ಇದು ಭಯಂಕರವಾಗಿ ಕಾಣುತ್ತದೆ.


ಚಕ್ರ ತೀರ್ಥ

ನಂತರ ಮೇಲೆ ಹೋಗಿ ಯಂತ್ರೋದ್ಧರಕನ (ಹನುಮನ) ದರುಶನ ಪಡೆದೆವು . ವ್ಯಾಸರಾಯರು ಹನುಮಂತನನ್ನು (ಭಕ್ತಿಯಿಂದ) ಯಂತ್ರದಲ್ಲಿ ಬಂದಿಸಿದ್ದರೆಂದು ಜನರು ತಿಳಿದಿದ್ದರೆ. ಇಲ್ಲಿಂದ ನಡೆದುಕೊಂಡು ನದಿಯ ದಂಡೆಯಲ್ಲಿ ವಿಜಯ ವಿಠ್ಠಲ ದೇವಸ್ತಾನಕ್ಕೆ ಹೊರಟೆವು .

ನದಿಯ ದಂಡೆಯಲ್ಲಿ ಕಂಡ ಕೆಲವು ಸುಂದರ ಚಿತ್ರಗಳು

                                    







ಮುಂದೆ ನಡೆಯುವಾಗ ಪುರಂದರ ಮಂಟಪ ಸಿಗುತ್ತದೆ.  ಒಂದು ಪ್ರಶಾಂತವಾದ ಜಾಗ.  ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತದೆ ಎಂದು ಅನಿಸುತ್ತದೆ. ಪಕ್ಕದಲ್ಲಿ ಕಟ್ಟಿದ್ದ ದರ್ಗಾ ತೆಗೆದು ಹಾಕಿದ್ದಾರೆ .





ಇಲ್ಲಿಂದ ಇನ್ನು ಸ್ವಲ್ಪ ಮುಂದೆ ನಡೆದರೆ ನಾವು ಮೊದಲ ದಿನ ನೋಡಿದ ವಿಜಯ ವಿಠ್ಠಲ ದೇವಸ್ಥಾನಕ್ಕೆ ಹಿಂದಿನಿಂದ ಸೇರುತ್ತೇವೆ.
ಅಲ್ಲಿ ಕೃಷ್ಣ ದೇವರಾಯ ತುಲಾಭಾರ ಮಾಡುತ್ತಿದ್ದ ಸ್ಥಳ.  ಈ ತುಲಾಭಾರ  ಮಂಟಪದ ಕೆಳಗೆ, ಬಲ ಭಾಗದಲ್ಲಿ - ಕೃಷ್ಣದೇವ ರಾಯ ಮತ್ತು ಅವನ ಇಬ್ಬರು ಪತ್ನಿಯರ ಕೆತ್ತನೆಯಿದೆ.

ಇದರ ಸುತ್ತಲು ಕಣ್ಣು ಹಾಯಿಸಿದರೆ - ಸುತ್ತಲು ಪಾಳು ಬಿದ್ದ ದೇವಾಲಯಗಳು ಕಾಣುತ್ತವೆ.







ಇಲ್ಲಿಂದ  ಮತ್ತೆ ನಾವು ವಿರೂಪಾಕ್ಷ ದೇವಾಲಯಕ್ಕೆ ಇನ್ನೊಂದು ದಾರಿಯಿಂದ ವಾಪಾಸ್ ಹೊರಟೆವು .

ದಾರಿಯಲ್ಲಿ ಬರುವಾಗ ಸುಗ್ರೀವನ ಗುಹೆ ಕಾಣುತ್ತದೆ.  ಇದೆ ಸುಗ್ರೀವನ ವಾಸಸ್ಥಳ ಎಂದು ಹೇಳುತ್ತಾರೆ .




ಸುಗ್ರೀವನ  ಗುಹೆಯ ಮುಂದೆ ಗುಡ್ಡವಿದೆ.  ಆ ಗುಡ್ಡದ ಮೇಲೆ ಹಲವಾರು ಪಾಳು ಬಿದ್ದಿರುವ ವೈಷ್ಣವ ದೇವಾಲಯಗಳನ್ನು ಕಾಣಬಹುದು.




ಮುಂದೆ ನಡೆದಾಗ ಕುಸಿದಿರುವ ವರಾಹ ದೇವಸ್ತಾನ ಕಾಣುತ್ತದೆ.  ದುರಸ್ತಿಯಲ್ಲಿರುವುದರಿಂದ ನಮಗೆ ಒಳಗೆ ಬಿಡಲಿಲ್ಲ
ಇದರ ದ್ರುಷ್ಯವನ್ನು ಇಲ್ಲಿ ನೋಡಬಹುದು (ಯು ಟೂಬ್ ವೀಡಿಯೊ). 



ಈ ಕಟ್ಟಡವು ನಾವು ನೋಡುವಾಗಲೇ ಕುಸಿದಿದ್ದರು (ವೀಡಿಯೊ ದಲ್ಲಿ ಇನ್ನು ಚೆನ್ನಾಗಿದೆ) , ನಾವು ಬಂದ ಸುಮಾರು ೧ ವರದ ನಂತರ ಕುಸಿದಿದೆ ಎಂದು ಪತ್ರಿಕೆಯಲ್ಲಿ ಬಂತು !!!


ಮುಂದೆ ನಡೆದಾಗ ಅಚುತ್ಯ ದೇವರಾಯನ (ವಿಷ್ಣು) ಗುಡಿ ಸಿಗುತ್ತದೆ. ಇದು ವಿಜಯವಿತ್ತಲ ದೇವಸ್ಥಾನ ದಂತೆಯೇ ದೊಡ್ಡದಾಗಿದೆ . ದೇವಾಲಯ ಮುಂದಿನ ಸುಂದರ ನೋಟ. ಇಲ್ಲಿ ಕಾಣುವ ರಸ್ತೆಯನ್ನು ಸೂಳೆಯರ ಬಿಡಿ ಎಂದು ಬೋರ್ಡ್ ಹಾಕಿದ್ದರು .  ದೇವಾಲಯದ ಇದು ನಿಜವಾಗಿ ಇರಲಿಕ್ಕೆ ಸಾಧ್ಯನೇ ಅಂತ ನನಗೆ ಅನ್ನಿಸಿತು



ರಸ್ತೆಯ ಪಕ್ಕದಲ್ಲಿ



 ದೇವಾಲಯದ ಒಳಗಿನ ನೋಟ







ಅಚ್ಯುತ ದೇವರಾಯನ ದೇವಾಲಯದ ಹಿಂಬದಿಯಲ್ಲಿ ಮಾತಂಗಿ ಗುಡ್ಡವಿದೆ.ಸಮಯದ ಅಭಾವದಿಂದ ಇದನ್ನು ಹತ್ತಲಿಲ್ಲ .
ಕೆಳಗಿನಿದ ಕಾಣುವ ಮಾತಂಗಿ ಗುಡ್ಡ


ಇಲ್ಲಿಂದ ಹೊರಗೆ ಸೀದಾ  ಬಂದರೆ - ವಿರೂಪಾಕ್ಷ ದೇವಾಲಯದ ಮುಂದಿರುವ ಬೃಹತ್ ನಂದಿಗೆ ಬರುತ್ತೇವೆ .
ನಂದಿಯ ಎದುರಿನಿಂದ ಕಾಣುವ ವಿರೂಪಾಕ್ಷ ದೇವಾಲಯ
ನಂದಿಯ ಮಂಟಪದಿಂದ ಕಾಣುವ ವಿರೂಪಾಕ್ಷ ದೇವಾಲಯದ ನೋಟ

ನಂತರ ನಾವು ಕಮಲಾಪುರದಲ್ಲಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ಗೆ ಹೊರಟೆವು.  ದಾರಿಯಲ್ಲಿ ಅರಮನೆ ಪಕ್ಕದ ರಸ್ತೆಯಲ್ಲಿ ಕಲ್ಲಿನಲ್ಲಿ ಊಟದ ತಟ್ಟೆಗಳನ್ನೂ ಕೆತ್ತಿದ್ದಾರೆ. ವಿವಿಧ ರೀತಿಯ ಕಲ್ಲುಗಳಲ್ಲಿ ತಟ್ಟೆಗಳನ್ನು ಕಾಣಬಹುದು.

ನಂತರ ನಾವು ಮುಂದೆ ಹೋಗಿ ರಾಣಿ ಸ್ನಾನದ ಹತ್ತಿರವಿದ್ದ ಚಂದ್ರಶೇಕರ ದೇವಸ್ಥನಕ್ಕೆ ಹೋದೆವು


ನಂತರ ಊಟ ಮುಗಿಸಿ,  ಹಂಪೆಯ ಹೊರಗೆ ಗುಡ್ಡದ ಮೇಲಿರುವ ವೆಂಕಟೇಶ್ವರ ದೇವಾಲಯಕ್ಕೆ ಹೊರಟೆವು. ಅಲ್ಲಿ ವಿಷ್ಣುವು ಮೀನಿನ ಆಕರದಲ್ಲಿ ಇದ್ದಾನೆ. ಅಲ್ಲಿ ಒಂದು ಗುಜುರಾತಿ ಕುಟುಂಬವು ನೋಡಿಕೊಳ್ಳುತ್ತಲಿತ್ತು .  ಅವರು ಎಲ್ಲವನ್ನೂ ಬಿಟ್ಟು ಇಲ್ಲಿ ಬಂದಾಗ ಏನು ಇರಲಿಲ್ಲವಂತೆ .  ಕನ್ನಡವನ್ನೂ ಕಲಿತು ದೇವಲಯವನ್ನು ನೋಡಿಕೊಳ್ಳುತ್ತಿದ್ದಾರೆ.

ನಂತರ ಮಾಲ್ಯವಂತ ರಘುನಾಥ ದೇವಸ್ಥಾನಕ್ಕೆ ಭೇಟಿ. ಇದನ್ನು ಸಹ ಉತ್ತರ ಭಾರತದವರೆ ನೋಡಿಕೊಳ್ಳುತ್ತಿದ್ದಾರೆ.  ಇದೊಂದು ದೊಡ್ಡ ದೇವಸ್ಥಾನ .  ಹಂಪೆಯ ಹೊರಗೆ  ನೀವು ಎಲ್ಲೇ ರಾಮನಿಗೆ, ಹನುಮನಿಗೆ ಸಂಬಂಧಪಟ್ಟ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಡೆಸುವವರು - ಉತ್ತರ ಭಾರತದವರೇ ...



ಇದನ್ನು ಮುಗಿಸಿ, ನಾವು ಪಟ್ಟಾಭಿ ರಾಮ ದೇವಸ್ಥಾನಕ್ಕೆ ಹೊರಟೆವು . ಇದೊಂದು ಸುಂದರವಾದ ಬೃಹತ್ ದೇವಸ್ಥಾನ
ಹೊರಗೆ ಸುಂದರವಾದ ಉದ್ಯಾನವನ್ನು ಬೆಳೆಸಿದ್ದಾರೆ


 


ನಂತರ  ಕೊನೆಯದಾಗಿ ನೋಡಿದ್ದು ಹಂಪಿ ಮುಸಿಯಂ 

ಮುಸಿಯಂ
ಮುಸಿಯಂ ಚೆನ್ನಾಗಿ ನಡೆಸುತ್ತಿದ್ದಾರೆ.  ಇದನ್ನು ಮೊದಲ ದಿನವೇ  ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಒಳಗೆ ಹಂಪೆಯ ಒಂದು ದೊಡ್ಡ  ಮಾಡೆಲ್ ಇಟ್ಟಿದ್ದಾರೆ . ಇಲ್ಲಿ ಮೊದಲೇ ಬಂದರೆ, ಯಾವ್ಯಾವ ಜಾಗಗಳನ್ನು ನೋಡಬೇಕೆಂಬುದು ಸ್ಪಷ್ಟವಾಗುತ್ತದೆ.

ಕೃಷ್ಣ ದೇವರಾಯನ ಭಗ್ನ ವಿಗ್ರಹ
ಅರೇಬ ಕುದುರೆ ವ್ಯಾಪಾರಿಗಳು

ನಂತರ ಬಸ್ನಲ್ಲಿ ಹೊಸಪೇಟೆಯ ರೈಲ್ವೆ ನಿಲ್ದಾಣಕ್ಕೆ ಬಂದೆವು .   ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು.  ಒಂದು ಬಡವರಾಗಿ ಕಾಣಿಸುವ ಕುಟುಂಬ ಅಳುತ್ತಿರುವ ಮಗುವನ್ನು ಎತ್ತಿಕೊಂಡು ಪೋಲಿಸಿನ ಹತ್ತಿರ ಬಂದು "ನನಗೆ ಈ ಮಗುವನ್ನು ಒಬ್ಬ ಹೆಂಗಸು ಕೊಟ್ಟು ಹೋದಳು, ಇನ್ನು ಬಂದಿಲ್ಲ - ನಾವು ಈ ಮಗುವನ್ನು ಸಾಕಿಕೊಳ್ಳುತ್ತೇವೆ" .  ಅದಕ್ಕೆ ಆ ಪೋಲಿಸಿನವನು ಹೆಚ್ಚು ವಿಚಾರಿಸದೆ, ಅವರ ಫೋನ್ ನಂಬರ್ ಪಡೆದು ಕಳುಹಿಸಿಬಿಟ್ಟ . ಆ ಪೋಲಿಸ್ ತನ್ನ ಕರ್ತವ್ಯವನ್ನು ಮಾಡದೆ - ಸುಮ್ಮನಿದ್ದುದ್ದನು ನೋಡಿ ಅವನನ್ನು ಪ್ರಶ್ನಿಸಿದಾಗ ಅವನು ಉತ್ತರಿಸುವ ಗೋಜಿಗೆ ಹೋಗಲಿಲ್ಲ.  ಕೊನೆಗೆ ನಾನು ಅವನಿಗೆ - ಹೀಗೆ ಮಗು ಸಿಕ್ಕರೆ , ಯಾವುದಾದರು ಅನಾಥಾಶ್ರಮಕ್ಕೆ ಕಳುಹಿಸಿ; ಅಲ್ಲಿ ಯಾರದಾದರೂ ದತ್ತು ತೆಗೆದುಕೊಳ್ಳುತ್ತಾರೆ ಎಂದು ಹೇಳಿದೇ. 

ಹತ್ತು ನಿಮಿಷದ ನಂತರ ಬಂದ ರೈಲು ಹತ್ತಿ ಹಿಂದಿರುಗಿ ಬೆಂಗಳೂರಿನ ಕಡಗೆ ನಮ್ಮ ಪ್ರಯಾಣ ...

Sunday, June 19, 2011

ವಿಜಯನಗರದ ಪ್ರವಾಸ - ೨

ಮತ್ತೆ ಬಂದ್ರಾ, ಸರಿ ಹಾಗಾದ್ರೆ ಪ್ರಯಾಣ ಶುರು ಮಾಡೋಣ ...

 ಎರಡನೇ ದಿವಸ ನಾವು ಹಂಪೆಯ ಹೊರಗೆ ಸುತ್ತುಮುತ್ತಲಿನ ಜಾಗಗಳನ್ನು ನೋಡಲು ಹೊರಟ್ವಿ.  ಮತ್ತೆ ಬೈಕು ಗಳನ್ನ ಹಿಡಿದು ೯.೩೦ ಗೆ ತೋರಣಗಲ್ಲನ್ನು ಬಿಟ್ಟು ಕಮಲಪುರವನ್ನು ಸೇರಿದೆವು.  ಕಮಲಾಪುರದಲ್ಲಿ ಮ್ಯೂಸಿಯಂನ  ಹತ್ತಿರ ಒಳ್ಳ ಇಡ್ಲಿ-ಪುರಿ ತಿಂಡಿ ಮುಗಿಸಿದೆವು .  ನಂತರ ಆನೆಗುಂದಿಯ ಕಡೆಗೆ ನಮ್ಮ ಪ್ರಯಾಣ ಶುರು.

ನಂತರ ವಿಜಯ ವಿಠ್ಠಲ ದೇವಸ್ಥಾನದ ಮುಂದಿನ ದಾರಿಯಲ್ಲೇ ಹೊರಟರೆ ಹಾಳಾಗಿ ಕುಸಿದಿರುವ ಆನೆಗುಂದಿ ಸೇತುವೆ ಸಿಗುತ್ತದೆ. (ಈ ಚಿತ್ರವನ್ನೂ ನೋಡಿ,  ಇದು ಕೂಡ ಕೃಷ್ಣದೇವ ರಾಯನ ಕಾಲದ್ದು ಎಂದು  ಕೊಳ್ಳಬೇಡಿ ;)) 
ಸೇತುವೆಯ ಎಡಭಾಗದಲ್ಲಿ ನೋಡಿದರೆ, ಅಲ್ಲಿ ಒಂದು ಮಂಟಪ ಕಾಣುತ್ತದೆ

ಇದನ್ನು ಕೊಪ್ಪಳ ಹಾಗು ಬೆಳ್ಳಾರಿ ನಡುವಿನ ಸಂಪರ್ಕಕ್ಕಾಗಿ ಕಟ್ಟಲಾಗುತ್ತಿತ್ತು. (ಇದು ಹಂಪೆಯ ಮೂಲ ಸೌಂದರ್ಯಕ್ಕೆ ಧಕ್ಕೆ ತರುತ್ತದೆ ಎಂದು UNESCO ದ ತೀವ್ರ ವಿರೋಧವಿತ್ತು ). ಕೋರ್ಟ್ ನಲ್ಲಿ   ಪ್ರಕರಣ ನಡೆಯುತ್ತಿದ್ದರಿಂದ ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಂತರ ಇದರ ಕಬ್ಬಿಣಕ್ಕೆ ತುಕ್ಕು ಹಿಡಿದು ಬಿದ್ದುಹೋಗಿದೆ.



ನಡಿಯನ್ನು ದಾಟುವಾಗ ತುಂಗಾಭದ್ರೆಯ ಕೆಲವು ನೋಟಗಳು






ನದಿಯನ್ನು ದಾಟಿದ ತಕ್ಷಣ ನಮಗೆ ಸಿಗುವುದೇ ಆನೆಗುಂದಿ...

ಅನೆಗುಂದಿಗೆ  ವಿಜಯನಗರಕ್ಕಿಂತಲೂ ಹಳೆಯದಾದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಹಕ್ಕ ಬುಕ್ಕರು ಆನೆಗುಂದಿಯಲ್ಲಿ ತುಘಲಕನ ಸೈನ್ಯವನ್ನು ಹಿಮ್ಮೆಟ್ಟಿಸಿದರು.



ನದಿಯನ್ನು ಸ್ವಲ್ಪ ದಾಟಿ ಮುಂದೆ ಹೋಗುವಾಗ ಕಾಣುವ ಮಂಟಪ. ಗುಡ್ಡದ ಮೇಲೆ ಕೂಡ ಇನ್ನೊಂದು ಮಂಟಪವಿದೆ
  ಮುಂದೆ ಹೋಗುವಾಗ ದಾರಿಯಲ್ಲಿ ಒಂದು ಹಳ್ಳಿ ಸಿಗುತ್ತದೆ .  ಎಡಕ್ಕೆ ಮುಂದೆ ಹೋದಾಗ ಒಂದು ಮಠ ಸಿಗುತ್ತದೆ.

ಇಲ್ಲಿ ನೋಡುವಂತಹದ್ದು ಹೆಚ್ಚಿನದೇನು ಇಲ್ಲ. ಮತ್ತೆ ಹಳ್ಳಿಗೆ ಬರುವಾಗ ದಾರಿಯಲ್ಲಿ ಒಂದು ಸಣ್ಣ ಸ್ಮಾರಕವೊಂದು ಸಿಗುತ್ತದೆ .
ಸೂಚನೆಗಳು ಇದ್ದರು ಕೂಡ - ಅದನ್ನು ಜನರು ಕೊಟ್ಟಿಗೆಯಂತೆ ಉಪಯೋಗಿಸುತ್ತಿದರು
ಕೊಟ್ಟಿಗೆಯಾದ ಸ್ಮಾರಕ
 ಇದರಿಂದ ಈ ಜನರಿಗೆ ಪುರಾತನ ಸ್ಮಾರಕಗಳ ಬಗೆಗಿನ ನಿಷ್ಕಾಳಜಿ, ಅನಾದರ, ಅಜ್ಞಾನ ಸ್ಪಷ್ಟವಾಗುತ್ತದೆ

ನಂತರ ನವ ವೃಂದಾವನಕ್ಕೆ ಹೊರಟೆವು. ನವ ವೃಂದಾವನಕ್ಕೆ ಹೋಗಲು ತುಂಗಭಾದ್ರೆಯನ್ನು ಮತ್ತೆ ಸಣ್ಣ ದೋಣಿಯಲ್ಲಿ ದಾಟಬೇಕು. ದಡದಲ್ಲಿ ಇನ್ನು ಅನೇಕ ಸ್ಮರಕಗಳನ್ನು ನೋಡಬಹುದು .


ಇನ್ನೊಂದು ಸ್ಮಾರಕ + ಕೊಟ್ಟಿಗೆ

ವ್ಯಕ್ತಿ ಒರಗಿಕೊಂಡಿರುವ ಕಲ್ಲಿನ ಕೆತ್ತನೆಗಳನ್ನು ನೋಡಿ

ಹುಲ್ಲಿನ ಕಣಜವಾಗಿರು ಕಟ್ಟಡ


ನವ ಬೃಂದಾವನಕ್ಕೆ ಹೆಚ್ಚಿನ ತಮಿಳರು ಬರುತ್ತಾರೆಂದು ಕಾಣಿಸುತ್ತದೆ. ಇಲ್ಲಿನ ದೋಣಿಯವನು ಕೂಡ ತಮಿಳನ್ನು ಅಚ್ಚುಕಟ್ಟಾಗಿ ಕಲಿತಿದ್ದ . ಬೃಂದಾವನದಲ್ಲಿ ಒಂಬತ್ತು ಯತಿಗಳ ಸಮಾಧಿಯಿದೆ. ಅಲ್ಲಿ ಹೋದ ಕೂಡಲೇ ನಿಮ್ಮ ಕಣ್ಣಿಗೆ ರಾಚುವುದು ತಮಿಳೇ . ಅವರ ಭಾಷಾಭಿಮಾನ ನಮ್ಮ ಕನ್ನಡಿಗರಿಗೆ ಒಳ್ಳೆಯ ಪಾಠ. ನನ್ನಲ್ಲಿ ಪ್ರಶ್ನೆ ಬಂತು - ತಮಿಳುನಾಡಿನಿಂದ ಇಲ್ಲಗೆ ತಮಿಳರು ಬರುತ್ತಿರಬೇಕಾದರೆ - ತಮಿಳರಲ್ಲೂ ಕೂಡ ಮಧ್ವಾಚಾರ್ಯರ ಪ್ರಭಾವ ಅಷ್ಟು ಇತ್ತೇ? ಒಬ್ಬ ತಮಿಳು ಗುರು ಇಲ್ಲಿ  ಬೃಂದಾವನಸ್ಥರಗಿರಬಹುದೇ ?



ಬಲಕ್ಕೆ ಒಳಗೆ ಕಾಣುತ್ತಿರುವುದು ಕೂಡ ತಮಿಳೇ

ಬೃಂದಾವನದಲ್ಲಿ ನನಗೆ ಪೂಜೆ/ನಮಸ್ಕಾರ ಮಾಡುವ ರೀತಿ, ಮಂತ್ರ ತಿಳಿದಿಲ್ಲ . ಹೊರಗಿನಿಂದಲೇ ನಮಸ್ಕಾರ ಮಾಡಿ,
ಏಳನೀರಿನವನೊಂದಿಗೆ ಹರಟುತ್ತ ಕುಳಿತೆ. "ಆನೆಗುಂದಿಯ ಹಿರಿಯ ರಾಜ ಮನೆತನದವ - ಅಚ್ಯುತದೇವರಾಯ ಸ್ವಲ್ಪ ದಿನಗಳ ಹಿಂದೆ ತೀರಿಕೊಂಡರು . ಈಗ ಆನೆಗುಂಡಿ ಅರಮನೆಯಲ್ಲಿರುವುದು - ಅವರ ತಮ್ಮ ರಾಮದೇವರಾಯಣ್ಣ" ಎಂದ.


ತಿರುಗಿ  ಬಂದ ನನ್ನ ಸ್ನೇಹಿತರ,ಮಾತನಾಡುತ್ತಿದರು - ಒಬ್ಬ ಯತಿಗಳ ಬೃಂದಾವನದ ಪೂಜೆಗಾಗಿ ಎರಡು ಮಠಗಳ ನಡುವೆ ಕಲಹವಾಗಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದರಂತೆ. ಅಲ್ಲಿ ೩ ದಿವಸಗಳ ಪೂಜೆಯಲ್ಲ್ಲಿ ೧.೫ ದಿವಸ ಒಬ್ಬರಿಗೆ,  ಇನ್ನು ೧.೫ ದಿವಸ ಇನ್ನೊಬ್ಬರಿಗೆ ಅಂತ ನಿಶ್ಚಯವಾಯಿತು .  ಆಲ್ಲಿ ಸ್ವಾಮಿ ಈ ನಿರ್ಧಾರಕ್ಕೆ ಕೋರ್ಟ್ ಗೆ ಹೋಗಬೇಕಿತ್ತ?  ಸ್ವಲ್ಪ ಕಣ್ಣಗಲಿಸಿ ನೋಡಿ - ಇಡೀ ಹಂಪೆಯಲ್ಲಿ ಎಷ್ಟು ದೇವಾಲಯಗಳು ನಾಶವಾಗಿವೆ (ವೈಷ್ಣವ ದೇವಾಲಯಗಳನ್ನೇ ತೆಗೆದುಕೊಳ್ಳಿ) ? ಒಗ್ಗಟ್ಟಿಲ್ಲದಿದ್ದರೆ ನಾಳೆ ಈ ಬೃಂದಾವನವು ಕೂಡ ಉಳಿಯುವುದಿಲ್ಲ . ಹಜಾರ ರಾಮ ಮಂದಿರದಲ್ಲಿ ನಮಾಜ್ ನಡೆಯುತ್ತಿರುವಾಗ, ಪುರಂದರ ಮಂಟಪದ ಸಮೀಪ ದರ್ಗಾ ಕಟ್ಟಿದಾಗ ಇವರುಗಳು ಎಲ್ಲಿದ್ದರು ಅಂತ ಯೋಚನೆ ಬಂತು ?

ಇಲ್ಲಿಂದ ನಾವು ಅರಮನೆ ಕಡೆ ಹೊರಟೆವು .





ಒಳಗಡೆ ಹೋದರೆ ನಿಮಗೆ ದೊಡ್ಡ ವರಾಂಡ ಕಾಣಿಸುತ್ತದೆ . ಎಡದಲ್ಲಿ ಮತ್ತು ಬಲದಲ್ಲಿ ಎರಡು ಕಡೆ ಕಟ್ಟಡವು ಪೂರ್ಣವಾಗಿ ಕಾಲನ  ಪ್ರಕೋಪಕ್ಕೆ ಸಿಲುಕಿ ಕುಸಿದು ಹೋಗಿದೆ. ನೋಡುತ್ತಿದರೆ ಯಾವುದೋ ಒಂದು ಪಾಳು ಬಂಗಲೆಗೆ ಬಂದಂತೆ ಅನಿಸುತ್ತದೆ . ಮುಂದೆ ಹೋದರೆ ಎಡಗಡೆ ಹಾಗು ಬಲಗಡೆ ಒಂದೊಂದು ಮನೆ ಕಾಣಿಸುತ್ತದೆ. ಬಲಗಡೆ  ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು ಅನಿಸುತ್ತದೆ . ಎಡಗಡೆ ಮನೆಯಲ್ಲಿ ರಾಮದೇವರಾಯರು ಸಿಕ್ಕಿದರು. ಅವರು ಎತ್ತರವಾಗಿ, ಬೆಳ್ಳಗೆ ಇದ್ದು ವಯಸ್ಸಾದರೂ ಕೂಡ ರಾಜ ಪರಿವಾರದವರಂತೆ ಕಾಣಿಸುತ್ತಿದ್ದರು .

 ಹಾಗೆಯೆ ಸುಮಾರು ೧೫-೨೦ ನಿಮಿಷ ಅವರೊಂದಿಗೆ ಮಾತನಾಡಿದೆವು . ಅವರ ಮಾತಿನಲ್ಲಿ ವಿಷಾದವಿತ್ತು . - "ಹಂಪೆಯ ಬಗ್ಗೆ ಸರಿಯಾಗಿ ಸಂಶೋಧನೆಗುತ್ತಿಲ್ಲ .... ನಮ್ಮ ದೇಶದ ಯಾವ ಒಬ್ಬ ಸಂಶೋಧಕ ಕೂಡ ಬಂದಿಲ್ಲ (ಒಬ್ಬ ಮೇಲೆಯಾಳಿ ಬಿಟ್ಟು) ಪರದೆಶಗಳಿಂದ ಬಹಳಷ್ಟು ಜನರು ಬರುತ್ತಾರೆ.  ಕೃಷ್ಣದೇವರಾಯನ ವಿಗ್ರಹವನ್ನು ಎಲ್ಲಿ ನೋಡಿದರು ರಾಜಕುಮರನಂತೆ ಕಾಣಿಸುತ್ತದೆ ,  ಅವನ ಒಂದು ಸರಿಯಾದ ಚಿತ್ರವಿಲ್ಲ. ಕೃಷ್ಣದೇವರಾಯನನ್ನು ಬಿಟ್ಟು ಸುಮರ ೨೦ ಮಹಾರಾಜರುಗಲಿದ್ದರು . ಅವರ ಬಗ್ಗೆ ಯಾರಿಗೂ ಗೊತ್ತಿಲ್ಲ." ವಿಜಯನಗರದ ಅರಸರು ಬೆಂಗಳೂರಿನ ಕೆಂಪೇಗೌಡನನ್ನು ಹೊಸ ರೀತಿಯ ನಾಣ್ಯಗಳನ್ನು ಟಂಕಿಸಿದಕ್ಕಾಗಿ  ಬಂದಿಸಿಟ್ಟದ್ದ ತಿಳಿಸಿದರು.  ಆ ಬಿಸಿಲಲ್ಲಿ ಹಂಪೆಯನ್ನು ನೋಡಲು ಬಂದ ನಮ್ಮನ್ನು ಕಂಡು ಆಶ್ಚರ್ಯಗೊಂಡರು . ಇಷ್ಟು ಮಾತನಾಡಿ ಹೊರಟೆವು. ಅರಮನೆಯಾ ಒಬ್ಬರು ಗಂಗಾವತಿಯಲ್ಲಿ ಶಾಸಕರಗಿದ್ದರಂತೆ .
ಸರಕಾರವನ್ನು ಬಿಡಿ, ಇಷ್ಟು ಸೌಲಭ್ಯವಿದ್ದರೂ ಕೂಡ ಇವರುಗಳೇ ಇನ್ನು ಯಾಕೆ ಇನ್ನು ಅರಮನೆಯನ್ನು ರಿಪೇರಿ ಮಾಡಿಸಿಲ್ಲ ಎಂದು ತಿಳಿಯಲಿಲ್ಲ.


                                        

ಅರಮನೆಯ ವೀಡಿಯೊ.

ಅರಮನೆಯ ನಂತರ ನಾವು ಅಂಜನಾದ್ರಿ ಬೆಟ್ಟದ ಕಡೆಗೆ ಹೊರಟೆವು.  ದಾರಿಯಲ್ಲಿ ದುರ್ಗೆಯ ದೇವಸ್ಥಾನ ಕಾಣಿಸುತ್ತದೆ .


 ಅಂಜನಾದ್ರಿ ಬೆಟ್ಟದ ನೋಟ



ಆ ಬೆಟ್ಟದ ಮೆಟ್ಟಿಲನ್ನು ಹತ್ತುತ್ತಲೇ ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷನಲ್ಲಿ ಬರದ ರಾಮನ ಹೆಸರುಗಳು ಕಾಣುತ್ತವೆ. ಮೇಲೆ ಹೋದಾಗ ಅಂಜನೇಯನ ದೇವಸ್ಥಾನವಿದೆ. ಆ ದೇವಸ್ಥಾನವನ್ನು ಉತ್ತರ ಭಾರತೀಯರು ನಡೆಸುತ್ತಿದ್ದಾರೆ.  ನೀವು ಆನೆಗುಂಡಿಯಲ್ಲಿ ಎಲ್ಲೇ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವನ್ನೂ ನೋಡಿದರೆ - ಅಲ್ಲಿ ಉತ್ತರ ಭಾರತದವರು ದೇವಸ್ಥನವನ್ನು ನಡೆಸುತ್ತಾರೆ .

ನಂತರ ನಾವು ಪಂಪ ಸರೋವರಕ್ಕೆ ಹೋದೆವು  ಇಲ್ಲಿಯೇ ರಾಮನು ಸುಗ್ರೀವ, ಹನುಮಂತನನ್ನು ಸಂಧಿಸಿದ್ದು.




ಪಂಪ ಸರೋವರದ ಒಂದು ವೀಡಿಯೊ


ಇದಾದ ಮೇಲೆ - ಆನೆಗುಂಡಿಯ ಹತ್ತಿರ ಸುಮಾರು ೧೦-೨೦ ಸಾವಿರ ವರ್ಷಗಳು ಹಳೆಯದಾದ ಆದಿ ಮಾನವನ ಗುಹೆ ಹಾಗು ಚಿತ್ರ ರಚನೆಗಳಿವೆ . ಅಲ್ಲಿಗೆ ಹೊರಟೆವು.  ಹಂಪೆಯ ಸುತ್ತಮುತ್ತಲು ಬಂದೆ ಒಡೆಯುವುದು ನಿಷೆದವಿದ್ದರು - ಅದನ್ನು ಉಲ್ಲಂಘಿಸುತ್ತಿರುವ ದೃಶ್ಯ



ಇಲ್ಲಿಂದ ಸ್ವಲ್ಪ ಮುಂದೆ ಹೋಗಿ ರಸ್ತೆಯಲ್ಲಿ ಗಾಡಿ ನಿಲ್ಲಿಸಿದೇವು . ಹೊಲವನ್ನು ದಾಟಿ, ಬಂಡೆಗಳ ಹಿಂದಿನ ಕಿರಿದಾದ ದಾರಿಯಲ್ಲಿ  ಹೋದರೆ ಒಂದು ವಿಶಾಲವಾದ ಪ್ರದೇಶ ಕಾಣಿಸುತ್ತದೆ. ಸ್ವಲ್ಪ ಹುಡುಕಿದರೆ ಆದಿ ಮಾನವನ ಗುಹೆ ಸಿಗುತ್ತದೆ.



ಇದನ್ನು ಮುಗಿಸಿಕೊಂಡು, ಸಣಾಪುರದ ಕೆರೆಗೆ ಹೋಗಿ ಈಜಡಿದೆವು



ಇದಾದ ಮೇಲೆ ಗಂಗಾವತಿಗೆ ಹೋಗಿ ಹುಲಿಗೆಯಮ್ಮ ದೇವಸ್ಥಾನ ನೋಡಿ ತೋರಣಗಲ್ಲಿಗೆ ಹೋದೆವು . ದಾರಿಯಲ್ಲಿ ಹೋಗುವಾಗ ಒಂದು ಹಳ್ಳಿಯಲ್ಲಿ" ಸೂಪರ್ ಸ್ಟಾರ್ ಉಪೇಂದ್ರ " ಅಂತ ಹೋಟೆಲ್ ಸಿಕ್ತು  ;)

ಇಲ್ಲಿಗೆ ಎರಡನೆಯ ದಿನದ ಪ್ರವಾಸ ಮುಗಿಯಿತು. ಇಲ್ಲಿ ಬೇಸರ ತರುವ ಒಂದು ಸಂಗತಿ ಎಂದರೆ ನಾವು ಕೃಷ್ಣ ದೇವ ರಾಯನ ಸಮಾಧಿಯನ್ನು ನೋಡಲು ಮರೆತದ್ದು :(