Sunday, August 7, 2011

ವಿಜಯನಗರದ ಪ್ರವಾಸ - ೩

ಬಹಳ ದಿನಗಳಾದ ಮೇಲೆ ಮೂರನೇ ದಿನದ ಕಥೆಯನ್ನೂ ಬರೆಯುತ್ತಿದ್ದೇನೆ

ನಾವು ಬೆಳಗ್ಗೆ ತೋರಣಗಲ್ಲಿನಲ್ಲಿ ರೂಂ ಖಾಲಿ ಮಾಡಿ - ಹೊಸಪೇಟೆಯಲ್ಲಿ ಹೋಟೆಲ್ಲಿನಲ್ಲಿ ಲುಗ್ಗೆಜ್ಜನ್ನು ಇಟ್ಟೆವು. ಬಸ್ಸಿನಲ್ಲಿ ಹಂಪೆಗೆ ಹೋದೆವು .   ಇಳಿಯುತ್ತಲೇ ಆಟೋದವನೊಂದಿಗೆ ಮಾತನಾಡಿ ಹಂಪೆಯನ್ನು ತೋರಿಸಲು ೪೦೦ ರೂಪಾಯಿ ಮಾತನಾಡಿಕೊಂಡೆವು.  ಇವನು ಸಾಕಷ್ಟು ಜಾಗಗಳನ್ನು ತೋರಿಸಿದರು ಸಹ, ಅದರ ಇತಿಹಾಸದ ಅರಿವಿರಲಿಲ್ಲ.   ನನಗೇನೋ ಗೈಡ್ ಜೊತೆ ಹೋಗುವುದೇ ಉತ್ತಮ ಎನ್ನಿಸಿತು. ಇವನು ಆಟೋದಲ್ಲಿ ಕರೆದುಕೊಂದು ಹೋಗುವುದಕ್ಕಿಂತ ನಡೆಸಿದ್ದೆ ಹೆಚ್ಚು.

ಮೊದಲು ನೋಡಿದ್ದು ಚಕ್ರ ತೀರ್ಥ .  ಇಲ್ಲಿ ತುಂಗೆಯು ನೇರವಾಗಿ ಬಂದು, ತಕ್ಷಣ ಎಡಕ್ಕೆ ತಿರುಗುತ್ತಾಳೆ.  ಹಾಗೆ ತಿರುಗುವಾಗ ಒಂದು ಸುಳಿ ಮೂಡುತ್ತದೆ. ಮಳೆಗಾಲದಲ್ಲಿ ಬಹುಶಃ ಇದು ಭಯಂಕರವಾಗಿ ಕಾಣುತ್ತದೆ.


ಚಕ್ರ ತೀರ್ಥ

ನಂತರ ಮೇಲೆ ಹೋಗಿ ಯಂತ್ರೋದ್ಧರಕನ (ಹನುಮನ) ದರುಶನ ಪಡೆದೆವು . ವ್ಯಾಸರಾಯರು ಹನುಮಂತನನ್ನು (ಭಕ್ತಿಯಿಂದ) ಯಂತ್ರದಲ್ಲಿ ಬಂದಿಸಿದ್ದರೆಂದು ಜನರು ತಿಳಿದಿದ್ದರೆ. ಇಲ್ಲಿಂದ ನಡೆದುಕೊಂಡು ನದಿಯ ದಂಡೆಯಲ್ಲಿ ವಿಜಯ ವಿಠ್ಠಲ ದೇವಸ್ತಾನಕ್ಕೆ ಹೊರಟೆವು .

ನದಿಯ ದಂಡೆಯಲ್ಲಿ ಕಂಡ ಕೆಲವು ಸುಂದರ ಚಿತ್ರಗಳು

                                    







ಮುಂದೆ ನಡೆಯುವಾಗ ಪುರಂದರ ಮಂಟಪ ಸಿಗುತ್ತದೆ.  ಒಂದು ಪ್ರಶಾಂತವಾದ ಜಾಗ.  ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಿರುತ್ತದೆ ಎಂದು ಅನಿಸುತ್ತದೆ. ಪಕ್ಕದಲ್ಲಿ ಕಟ್ಟಿದ್ದ ದರ್ಗಾ ತೆಗೆದು ಹಾಕಿದ್ದಾರೆ .





ಇಲ್ಲಿಂದ ಇನ್ನು ಸ್ವಲ್ಪ ಮುಂದೆ ನಡೆದರೆ ನಾವು ಮೊದಲ ದಿನ ನೋಡಿದ ವಿಜಯ ವಿಠ್ಠಲ ದೇವಸ್ಥಾನಕ್ಕೆ ಹಿಂದಿನಿಂದ ಸೇರುತ್ತೇವೆ.
ಅಲ್ಲಿ ಕೃಷ್ಣ ದೇವರಾಯ ತುಲಾಭಾರ ಮಾಡುತ್ತಿದ್ದ ಸ್ಥಳ.  ಈ ತುಲಾಭಾರ  ಮಂಟಪದ ಕೆಳಗೆ, ಬಲ ಭಾಗದಲ್ಲಿ - ಕೃಷ್ಣದೇವ ರಾಯ ಮತ್ತು ಅವನ ಇಬ್ಬರು ಪತ್ನಿಯರ ಕೆತ್ತನೆಯಿದೆ.

ಇದರ ಸುತ್ತಲು ಕಣ್ಣು ಹಾಯಿಸಿದರೆ - ಸುತ್ತಲು ಪಾಳು ಬಿದ್ದ ದೇವಾಲಯಗಳು ಕಾಣುತ್ತವೆ.







ಇಲ್ಲಿಂದ  ಮತ್ತೆ ನಾವು ವಿರೂಪಾಕ್ಷ ದೇವಾಲಯಕ್ಕೆ ಇನ್ನೊಂದು ದಾರಿಯಿಂದ ವಾಪಾಸ್ ಹೊರಟೆವು .

ದಾರಿಯಲ್ಲಿ ಬರುವಾಗ ಸುಗ್ರೀವನ ಗುಹೆ ಕಾಣುತ್ತದೆ.  ಇದೆ ಸುಗ್ರೀವನ ವಾಸಸ್ಥಳ ಎಂದು ಹೇಳುತ್ತಾರೆ .




ಸುಗ್ರೀವನ  ಗುಹೆಯ ಮುಂದೆ ಗುಡ್ಡವಿದೆ.  ಆ ಗುಡ್ಡದ ಮೇಲೆ ಹಲವಾರು ಪಾಳು ಬಿದ್ದಿರುವ ವೈಷ್ಣವ ದೇವಾಲಯಗಳನ್ನು ಕಾಣಬಹುದು.




ಮುಂದೆ ನಡೆದಾಗ ಕುಸಿದಿರುವ ವರಾಹ ದೇವಸ್ತಾನ ಕಾಣುತ್ತದೆ.  ದುರಸ್ತಿಯಲ್ಲಿರುವುದರಿಂದ ನಮಗೆ ಒಳಗೆ ಬಿಡಲಿಲ್ಲ
ಇದರ ದ್ರುಷ್ಯವನ್ನು ಇಲ್ಲಿ ನೋಡಬಹುದು (ಯು ಟೂಬ್ ವೀಡಿಯೊ). 



ಈ ಕಟ್ಟಡವು ನಾವು ನೋಡುವಾಗಲೇ ಕುಸಿದಿದ್ದರು (ವೀಡಿಯೊ ದಲ್ಲಿ ಇನ್ನು ಚೆನ್ನಾಗಿದೆ) , ನಾವು ಬಂದ ಸುಮಾರು ೧ ವರದ ನಂತರ ಕುಸಿದಿದೆ ಎಂದು ಪತ್ರಿಕೆಯಲ್ಲಿ ಬಂತು !!!


ಮುಂದೆ ನಡೆದಾಗ ಅಚುತ್ಯ ದೇವರಾಯನ (ವಿಷ್ಣು) ಗುಡಿ ಸಿಗುತ್ತದೆ. ಇದು ವಿಜಯವಿತ್ತಲ ದೇವಸ್ಥಾನ ದಂತೆಯೇ ದೊಡ್ಡದಾಗಿದೆ . ದೇವಾಲಯ ಮುಂದಿನ ಸುಂದರ ನೋಟ. ಇಲ್ಲಿ ಕಾಣುವ ರಸ್ತೆಯನ್ನು ಸೂಳೆಯರ ಬಿಡಿ ಎಂದು ಬೋರ್ಡ್ ಹಾಕಿದ್ದರು .  ದೇವಾಲಯದ ಇದು ನಿಜವಾಗಿ ಇರಲಿಕ್ಕೆ ಸಾಧ್ಯನೇ ಅಂತ ನನಗೆ ಅನ್ನಿಸಿತು



ರಸ್ತೆಯ ಪಕ್ಕದಲ್ಲಿ



 ದೇವಾಲಯದ ಒಳಗಿನ ನೋಟ







ಅಚ್ಯುತ ದೇವರಾಯನ ದೇವಾಲಯದ ಹಿಂಬದಿಯಲ್ಲಿ ಮಾತಂಗಿ ಗುಡ್ಡವಿದೆ.ಸಮಯದ ಅಭಾವದಿಂದ ಇದನ್ನು ಹತ್ತಲಿಲ್ಲ .
ಕೆಳಗಿನಿದ ಕಾಣುವ ಮಾತಂಗಿ ಗುಡ್ಡ


ಇಲ್ಲಿಂದ ಹೊರಗೆ ಸೀದಾ  ಬಂದರೆ - ವಿರೂಪಾಕ್ಷ ದೇವಾಲಯದ ಮುಂದಿರುವ ಬೃಹತ್ ನಂದಿಗೆ ಬರುತ್ತೇವೆ .
ನಂದಿಯ ಎದುರಿನಿಂದ ಕಾಣುವ ವಿರೂಪಾಕ್ಷ ದೇವಾಲಯ
ನಂದಿಯ ಮಂಟಪದಿಂದ ಕಾಣುವ ವಿರೂಪಾಕ್ಷ ದೇವಾಲಯದ ನೋಟ

ನಂತರ ನಾವು ಕಮಲಾಪುರದಲ್ಲಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ಗೆ ಹೊರಟೆವು.  ದಾರಿಯಲ್ಲಿ ಅರಮನೆ ಪಕ್ಕದ ರಸ್ತೆಯಲ್ಲಿ ಕಲ್ಲಿನಲ್ಲಿ ಊಟದ ತಟ್ಟೆಗಳನ್ನೂ ಕೆತ್ತಿದ್ದಾರೆ. ವಿವಿಧ ರೀತಿಯ ಕಲ್ಲುಗಳಲ್ಲಿ ತಟ್ಟೆಗಳನ್ನು ಕಾಣಬಹುದು.

ನಂತರ ನಾವು ಮುಂದೆ ಹೋಗಿ ರಾಣಿ ಸ್ನಾನದ ಹತ್ತಿರವಿದ್ದ ಚಂದ್ರಶೇಕರ ದೇವಸ್ಥನಕ್ಕೆ ಹೋದೆವು


ನಂತರ ಊಟ ಮುಗಿಸಿ,  ಹಂಪೆಯ ಹೊರಗೆ ಗುಡ್ಡದ ಮೇಲಿರುವ ವೆಂಕಟೇಶ್ವರ ದೇವಾಲಯಕ್ಕೆ ಹೊರಟೆವು. ಅಲ್ಲಿ ವಿಷ್ಣುವು ಮೀನಿನ ಆಕರದಲ್ಲಿ ಇದ್ದಾನೆ. ಅಲ್ಲಿ ಒಂದು ಗುಜುರಾತಿ ಕುಟುಂಬವು ನೋಡಿಕೊಳ್ಳುತ್ತಲಿತ್ತು .  ಅವರು ಎಲ್ಲವನ್ನೂ ಬಿಟ್ಟು ಇಲ್ಲಿ ಬಂದಾಗ ಏನು ಇರಲಿಲ್ಲವಂತೆ .  ಕನ್ನಡವನ್ನೂ ಕಲಿತು ದೇವಲಯವನ್ನು ನೋಡಿಕೊಳ್ಳುತ್ತಿದ್ದಾರೆ.

ನಂತರ ಮಾಲ್ಯವಂತ ರಘುನಾಥ ದೇವಸ್ಥಾನಕ್ಕೆ ಭೇಟಿ. ಇದನ್ನು ಸಹ ಉತ್ತರ ಭಾರತದವರೆ ನೋಡಿಕೊಳ್ಳುತ್ತಿದ್ದಾರೆ.  ಇದೊಂದು ದೊಡ್ಡ ದೇವಸ್ಥಾನ .  ಹಂಪೆಯ ಹೊರಗೆ  ನೀವು ಎಲ್ಲೇ ರಾಮನಿಗೆ, ಹನುಮನಿಗೆ ಸಂಬಂಧಪಟ್ಟ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಡೆಸುವವರು - ಉತ್ತರ ಭಾರತದವರೇ ...



ಇದನ್ನು ಮುಗಿಸಿ, ನಾವು ಪಟ್ಟಾಭಿ ರಾಮ ದೇವಸ್ಥಾನಕ್ಕೆ ಹೊರಟೆವು . ಇದೊಂದು ಸುಂದರವಾದ ಬೃಹತ್ ದೇವಸ್ಥಾನ
ಹೊರಗೆ ಸುಂದರವಾದ ಉದ್ಯಾನವನ್ನು ಬೆಳೆಸಿದ್ದಾರೆ


 


ನಂತರ  ಕೊನೆಯದಾಗಿ ನೋಡಿದ್ದು ಹಂಪಿ ಮುಸಿಯಂ 

ಮುಸಿಯಂ
ಮುಸಿಯಂ ಚೆನ್ನಾಗಿ ನಡೆಸುತ್ತಿದ್ದಾರೆ.  ಇದನ್ನು ಮೊದಲ ದಿನವೇ  ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಒಳಗೆ ಹಂಪೆಯ ಒಂದು ದೊಡ್ಡ  ಮಾಡೆಲ್ ಇಟ್ಟಿದ್ದಾರೆ . ಇಲ್ಲಿ ಮೊದಲೇ ಬಂದರೆ, ಯಾವ್ಯಾವ ಜಾಗಗಳನ್ನು ನೋಡಬೇಕೆಂಬುದು ಸ್ಪಷ್ಟವಾಗುತ್ತದೆ.

ಕೃಷ್ಣ ದೇವರಾಯನ ಭಗ್ನ ವಿಗ್ರಹ
ಅರೇಬ ಕುದುರೆ ವ್ಯಾಪಾರಿಗಳು

ನಂತರ ಬಸ್ನಲ್ಲಿ ಹೊಸಪೇಟೆಯ ರೈಲ್ವೆ ನಿಲ್ದಾಣಕ್ಕೆ ಬಂದೆವು .   ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು.  ಒಂದು ಬಡವರಾಗಿ ಕಾಣಿಸುವ ಕುಟುಂಬ ಅಳುತ್ತಿರುವ ಮಗುವನ್ನು ಎತ್ತಿಕೊಂಡು ಪೋಲಿಸಿನ ಹತ್ತಿರ ಬಂದು "ನನಗೆ ಈ ಮಗುವನ್ನು ಒಬ್ಬ ಹೆಂಗಸು ಕೊಟ್ಟು ಹೋದಳು, ಇನ್ನು ಬಂದಿಲ್ಲ - ನಾವು ಈ ಮಗುವನ್ನು ಸಾಕಿಕೊಳ್ಳುತ್ತೇವೆ" .  ಅದಕ್ಕೆ ಆ ಪೋಲಿಸಿನವನು ಹೆಚ್ಚು ವಿಚಾರಿಸದೆ, ಅವರ ಫೋನ್ ನಂಬರ್ ಪಡೆದು ಕಳುಹಿಸಿಬಿಟ್ಟ . ಆ ಪೋಲಿಸ್ ತನ್ನ ಕರ್ತವ್ಯವನ್ನು ಮಾಡದೆ - ಸುಮ್ಮನಿದ್ದುದ್ದನು ನೋಡಿ ಅವನನ್ನು ಪ್ರಶ್ನಿಸಿದಾಗ ಅವನು ಉತ್ತರಿಸುವ ಗೋಜಿಗೆ ಹೋಗಲಿಲ್ಲ.  ಕೊನೆಗೆ ನಾನು ಅವನಿಗೆ - ಹೀಗೆ ಮಗು ಸಿಕ್ಕರೆ , ಯಾವುದಾದರು ಅನಾಥಾಶ್ರಮಕ್ಕೆ ಕಳುಹಿಸಿ; ಅಲ್ಲಿ ಯಾರದಾದರೂ ದತ್ತು ತೆಗೆದುಕೊಳ್ಳುತ್ತಾರೆ ಎಂದು ಹೇಳಿದೇ. 

ಹತ್ತು ನಿಮಿಷದ ನಂತರ ಬಂದ ರೈಲು ಹತ್ತಿ ಹಿಂದಿರುಗಿ ಬೆಂಗಳೂರಿನ ಕಡಗೆ ನಮ್ಮ ಪ್ರಯಾಣ ...