Wednesday, February 1, 2012

Reply: RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

 ಬಳಗದವರ ಮೇಲಿನ ಬ್ಲಾಗ್ ಓದಬೇಕಾದರೆ,  ನನ್ನ ಮನಸ್ಸಿನಲ್ಲಿ ಅನಿಸಿಕೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಸಂಘದವರು ಹಾಗೂ ಬಳಗದವರಿಬ್ಬರಿಗೂ ಬೇಕಾಗಿರುವುಧು ಅಭಿವೃಧ್ಧಿ, ನಾಡನ್ನು ವೈಭವಕ್ಕೆ ತೆಗೆದುಕೊಂಡು ಹೋಗುವ ಹಂಬಲ: ಆದರೆ ವ್ಯತ್ಯಾಸ ಇಷ್ಟೇ -

Sangh: India is a country of Hindus who speak different languages, customs.

Banavasi Balaga:  Indian is an Union where Countries speaking different languagues come together.


ಸಂಘದ ಬಗ್ಗೆ ಬರೆಯುವುದಕ್ಕೆ ಅಂತ ಒಂದು ಪುಸ್ತಕವನ್ನು ಓದಿ,  ಎಲ್ಲ ತಿಳಿದುಕೊಂಡಂತೆ ಬರೆಯುವುದು:
"ನೆಲೆದ ಮೇಲೆ ಈಜಿದಂತೆ, Glossery ಓದಿ ಪುಸ್ತಕ ಬಗ್ಗೆ ಮಾತನಾಡಿದಂತೆ "   ಹೇಗೆ ನೀರಿಗೆ ಇಳಿದ ಮೇಲೆಯೇ ಈಜುವುದನ್ನು ತಿಳಿಯಬಹುದೋ ಹಾಗೆಯೇ ಸಂಘದ ಬಗ್ಗೆ  ಕೂಡ ...

ಸಂಘ ಬಗ್ಗೆ  ಈ ವಿಷಯ ನಾವು ತಿಳಿದುಕೊಳ್ಳುವುದು ಮುಖ್ಯ; "ಇಲ್ಲಿ ಯಾವುದೇ ವ್ಯಕ್ತಿ, ಒಬ್ಬನ ಚಿಂತನೆ ಮುಖ್ಯವಲ್ಲ; ಅಲ್ಲಿ ಮುಖ್ಯ ಭಾರತದ ವೈಭವ, ಉದ್ದಾರ ಅಷ್ಟೇ" !!!   ಗುರೂಜಿಯವರ ಕೆಲವು ಆಲೋಚನೆಗಳೂ ದೇಶದ ಹಿತಕ್ಕೆ ಸಹಕಾರಿಯಲ್ಲ ಎಂದರೇ ಸಂಘವು ಅದನ್ನು ಕೂಡ ಕೈ ಬಿಡುತ್ತದೇ.

ಭಾಷೆಗಳ ಬಗ್ಗ:
ಇಂದು ಸಂಘವು ಬಾರಿ ಹಿಂದಿಯನ್ನೇ ನೆಚ್ಚಿಕೊಂಡಿದ್ದಾರೆ ಎಂಬುದು ನಿಜವಾಗಿದ್ದಾರೆ - ಅದು ಭಾರತದ ಎಲ್ಲ ರಾಜ್ಯಗಳಲ್ಲಿ ಇಂದು ಬೆಳೆಯುತ್ತಿರಲಿಲ್ಲ.  ಇಂದು ನಮ್ಮ ಬನವಾಸಿ  ಬಳಗದವರು  ಕನ್ನಡದಲ್ಲಿ ಸೇವೆಯನ್ನು , ಮಾಹಿತಿ ಪಡೆಯುವ ಹಕ್ಕನ್ನು ಎಲ್ಲರಿಗೂ ತಿಳಿಸುತ್ತಿದ್ದಾರೆ. ಈ ಕೆಲಸವನ್ನು ಸಂಘ 50 ವರ್ಷಗಳ ಹಿಂದೆಯೇ ಮಾಡಿದೆ.  ಇಲ್ಲಿ ಯಾವುದೇ ಶಾಖೆ ಹಿಂದಿಯಲ್ಲಿ ನಡೆಯುವುದಿಲ್ಲ - ಕರ್ನಾಟಕದಲ್ಲಿ ಅದು ಕನ್ನಡ.

ಕೇಶವ ಕೃಪಾದಲ್ಲಿ ಉತ್ತರದಿಂದ , ಮಣಿ ಪುರದಿಂದ ಬಂದೆ ಕಾರ್ಯಕರ್ತರೂ ಕನ್ನಡ ಕಲಿತಿದ್ದನ್ನು ನಾನು ಸ್ವತಃ ಬಲ್ಲೆ.  "ಇಂದು ಸಂಘ ಕನ್ನಡಲ್ಲಿ ಪ್ರಕಟಿಸಿರುವಷ್ಟು ಪುಸ್ತಕಗಳನ್ನು ಯಾವ ಕನ್ನಡ ಪರ ಹೋರಾಟಮಾಡುವ ಸಂಸ್ಥೆಯೂ ಪ್ರಕಟಿಸಿಲ್ಲ." ಬೆಂಗಳೂರಿನಲ್ಲಿರುವ ಅನೇಕ ಬೇರೆ ರಾಜ್ಯದ ಸ್ವಯಂ ಸೇವಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವದನ್ನು ನಾನು ಕಂಡಿದ್ದೇನೆ.

ಗುರೂಜಿಯವರು ಹಿಂದೂ ರಾಷ್ಟ್ರದ ಐಕ್ಯತೆಯ ದೃಷಿಯಿಂದ: ಆಂಗ್ಲ ಭಾಷೆಗೆ ಬದಲು ಹಿಂದಿ ಬಳಸಬಹುದು ಎಂದಿದ್ದಾರೆ ಅಷ್ಟೇ.  ಅವರ ಆಶಯ ಎಲ್ಲ ಭಾರತೀಯ ಭಾಷೆಗಳು ಬೆಳೆಯಬೇಕೆಂದು. ಆದರೆ ಇಂದು ಕೇಂದ್ರ ಸರಕಾರ ಮಾಡುವ ಹಿಂದಿ ತಾರತಮ್ಯಕ್ಕೆ ಗುರೂಜಿ ಕಾರಣವಲ್ಲ.

ಸಂಸ್ಕೃತ ಭರತದಲ್ಲಿ ಎಲ್ಲರೂ ಬಳಸುತ್ತಿದರು . ಮಹಾನ್ ಗಣಿತಗ್ನನಾಗಿದ್ದ ಕನ್ನಡದ ಭಾಸ್ಕರ ಕೂಡ ಸಂಸ್ಕೃತದಲ್ಲಿ "ಸಿದ್ಧಾಂತ ಶಿರೋಮಣಿ" ರಚಿಸಿದ್ದ. ಕೇರಳದಲ್ಲಿದ್ದ "ಶಂಕರಾಚಾರ್ಯ" ಕಾಶ್ಮೀರದಲ್ಲಿದ್ದ ಪಂಡಿತರನ್ನು ಸಂಸ್ಕೃತದಲ್ಲಿ ವಾದ ಮಾಡಿ ಸೋಲಿಸಿದ್ದ.  ಅದರ ಬಗ್ಗೆ ಅಭಿಮಾನ ವಿರಬೇಕು.  ನಮಗೆ ಕನ್ನಡಕ್ಕೆ ಹೆಚ್ಕು ಪ್ರಾಶ್ಯಸ್ತ ಕೊಡಬೇಕೆಂದರೆ ನಾವು ಕೊಡಬಹುದು. ಅವರ ಒಂದು ವಿಚಾರ ನಮಗೆ ಇಷ್ಟವಾಗಲಿಲ್ಲ ಅಂತ ಬೇರೆ ಎಲ್ಲ ವಿಚಾರಗಳನ್ನು ಪರಿಗಣಿಸದಿರುವುದು ಸರಿಯಲ್ಲ.

ಇಂದು ಸಂಘ್ ಐ‌ಟಿ ಶಾಖೆಗಳ ಮೂಖಾಂತರ "ಕನ್ನಡ ಪರಿಚಯ ವರ್ಗಗಳನ್ನು" ನಡೆಸುತ್ತಿದೆ. ಇದರಲ್ಲಿ ಭಾರತದ ಎಲ್ಲ ಭಾಷೆಯ ಜನರೂ ಕೂಡ ಆಯೋಜಿಸಲೂ ಸಹಾಯಮಾಡುತ್ತಿದ್ದಾರೆ" ; (kpv2012.blogspot.com). ಇದರಲ್ಲಿ ಸಂಘದ ಮಹಾರಾಷ್ಟ್ರ ಮೂಲದ, ಒರಿಸ್ಸ ಮೂಲದ , ಕನ್ನಡ ಬಾರದ ಎಲ್ಲ ಸ್ವಯಂಸೇವಕರೂ ದುಡಿಯುತ್ತಿದ್ದಾರೆ.

ಒಕ್ಕೂಟದ ಬಗ್ಗೆ!
ಇಲ್ಲಿ  ಸಂಘದವರ ಉದ್ದೇಶ ಇಷ್ಟೇ : ಭಾರತ ಧೇಶ ಒಡೆದು - ಮತ್ತೆ ಪರಕೀಯರ ದಾಸ್ಯದಲ್ಲಿರಬಾರದು. ನಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರಿಂದಲೇ - ತುರ್ಕಿಗಳು , ಪೆರ್ಸಿಯನ್ನಾರು ದಾಳಿ ಮಾಡಿ, ನಮ್ಮ ಸಂಸ್ಕೃತಿಯನ್ನು ನಾಶಮಾಡಿದರು. ಇದರ ಚರಿತ್ರೆಯನ್ನು - ಬೀದರ್, ಗುಲ್ಬರ್ಗಾ , ಬಿಜಾಪುರ್ ಎಲ್ಲ ಕಡೆ ಈಗಲೂ ನೋಡಬಹುದು .

ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಒಂದು ಶಾಖೆ ಹೇಗೆ ನಡೆಸಬೆಂಕೆಂದು - ಅಲ್ಲಿ ಯಾರು ಮೇಲಿನವರು ಹೇಳುವುದಿಲ್ಲ, ಕೇವಲ ಸಲಹೆ ಕೊಡುತ್ತಾರೆ .  ಒಂದೇ ಕೇಂದ್ರಿತ ವ್ಯವಸ್ಥೆ ಇದ್ದರೆ ಸಂಘ ಇಷ್ಟು ದೊಡ್ಡದಾಗಿ ಬೆಳೆಯಲು ಸದ್ಯವಾಗುತ್ತಿರಲಿಲ್ಲ.

ಕಾಶ್ಮೀರವನ್ನು ಭರತದಲ್ಲಿ ಮಿಲೀನಗೊಳಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಗುರೂಜಿಯವರು, ಹಿಂದೂ ಮಹಾರಾಜ ಹರಿಸಿಂಘ್ ನೊಂದಿಗ ಮಾತನಾಡಿದ್ದರು.  ಸುಮಾರು 1950 - 60 ರಲ್ಲಿ ಪ್ರತ್ಯೇಕತಾವಾದಿಗಳ ಹುಟ್ಟದಗಿಸುವ ನಿಟ್ಟಿನಲ್ಲಿ ಇದನ್ನು ಹೇಳಿದ್ದರು. ಇದರ ಉದ್ದೇಶ ಅಭಿವೃದ್ದಿಗಾಗಿ ತೆಗೆದುಕೊಳ್ಳುವ ಸ್ವತಂತ್ರ ನಿರ್ಣಯಗಳನ್ನು ಕಟ್ಟಿಹಾಕುವುದಲ್ಲ.

 ಸಮಾಜಿಕ ಸಮಸ್ಯೆಯ ಸರಳೀಕರಣ!

ದಲಿತರ ವಿಚಾರದಲ್ಲಿ ಸಂಘಕ್ಕೆ ಭೀಮ್ ರಾವ ಅಂಬೇಡ್ಕರ್ ಅವರಿಗಿಂತ ಬೇರೆ ಸರ್ಟಿಫಿಕೇಟ್ ಬೇಕಾಗಿಲ್ಲ. ಒಮ್ಮೆ "ಸಾಮಾಜಿಕ ಕ್ರಾಂತಿ ಸೂರ್ಯ - ಡಾ! ಅಂಬೇಡ್ಕರ್" ಪುಸ್ತಕ ಓದಿ.

ಗುರೂಜಿಯವರ ಚಿಂತನೆಯಲ್ಲಿ ಸತ್ಯ ಇದೆ:
ಇಂದು ಮಾಯಾವತಿ ದಲಿತರ ಹೆಸರಿನಲ್ಲಿ ಆಡಳಿತ ನಡೆಸುತ್ತಾ ಇದ್ದರೆ ... ಆದರೆ ಉತ್ತರ ಪ್ರದೇಶದ ಉದ್ಧಾರ - ಆ ದೇವರೇ ಬಲ್ಲ. 

ಅತ್ಯಂತ ಮಡಿವಂತ ಸಮಾಜವಾದ "ಮಧ್ವ ಪೀಠದ" ಗುರುಗಳಾದ ವಿಶ್ವೇಶ ತೀರ್ಥರೂ ನಮ್ಮ ಮೇಲೂ ಗುರೂಜಿಯವರ ಪ್ರಭಾವ ಇದೆ, ನಮ್ಮ ಬದಲಾವಣೆಗೆ ಅವರು ಸಹ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅವರು ದಲಿತರ ಕೆರಿಗೆ ಹೋಗಿದ್ದು.  ಮಡಿವಂತರಾದರೆ ದಳಿತರಿಗೂ ಸಹ ದೀಕ್ಷೆ ಕೊಡುವುದಾಗಿ ಘೋಷಿಸಿದ್ದರು !!!

ಉಡುಪಿಯಲ್ಲಿ ನಡೆನ "ಪ್ರಥಮ ವಿಶ್ವ ಹಿಂದೂ ಸಮ್ಮೇಳನದಲ್ಲಿ ' - "ಅಸ್ಪೃಶ್ಯತೆಗೆ ಧರ್ಮದಲ್ಲಿ ಜಾಗವಿಲ್ಲ" ಎಂದು ಘೋಷಿಸಿದ್ದರು.

ನಮ್ಮ ದ್ರಾವಿಡ ಚಳುವಳಿಯ ನಾಯಕರು ಕೆಳ ವರ್ಗದ ಜನರನ್ನೂ ಸೇರಿಸಿ, ಹಿಂದೂ ಸಂಸ್ಕೃತಿಯನ್ನೇ ಹೀಗೆಳೆದು ಆಡಳಿತ ನಡೆಸುತ್ತಾರೆ .  ಸರಕಾರ ಎಲ್ಲರನ್ನು ಸಮನಾಗಿ ನೋಡುವುದು ಎಂದರೆ ಇದೇನೇ?

ಇಂದು ಮದುವೆ ಎನ್ನುವ ಒಂದು ವಿಚಾರ ಬಿಟ್ಟರೆ ಎಲ್ಲ ವರ್ಣದವರು ಒಟ್ಟಾಗಿ ಇದ್ದರೆ.  ಆದರೂ ಸಹ ಸಮಾಜಘಾತಕ - "ಭಾರತೀಯ ಮೂಲನಿವಾಸಿ ಸಂಘಕ್ಕೆ" ಮಲ್ಲಿಖರ್ಜುನ ಖರ್ಗೆ ಯಂತಹವರು ಸಹಾಯ ನೀಡುತ್ತಾರೆ- ಗುಲ್ಬರ್ಗಾದಲ್ಲಿ ಸಮಾವೇಶ ನಡೆಸಿ ಮುಂದಿನ ಸರ್ತಿ ಸೀಟನ್ನು ಗಟ್ಟಿ ಮಾಡಿ ಕೊಂಡಿದ್ದಾರೆ

ಇಂದು ಮೀಸಲಾಥಿ ಅವಶ್ಯಕತೆಯಿರುವುದು ಎಲ್ಲ ವರ್ಗದ ಬಡವರಿಗೆ. ಕೆಲ ವರ್ಗದ ಶ್ರೀಮಂತರಿಂದ, ಮತಕ್ಕಾಗಿ ರಾಜಕಾರಣಿಗಳಿಂದ  ಅದರ ದುರುಪಯೋಗವಾಗುತ್ತಿದೆ.


ಸಂಘದ ಧರ್ಮದೃಷ್ಟಿ!

 ಹೌದು ಇಲ್ಲಿ ಗುರೂಜಿ ಹೇಳಿರುವುದು ಸತ್ಯ.  ಕೇರಳದಿಂದ ಹಿಡಿದು, ಕಾಶ್ಮೀರದವರೆಗೆ, ಗುಜುರಾತಿನಿಂದ - ಬಂಗಾಳ, ಅಸ್ಸಾಮ್ ವರೆಗೆ ಪಾಕಿಸ್ತಾನಿಗಳು  ನಮ್ಮ ಮುಸಲ್ಮಾನರಿಗೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ.

ಅವರ ಮೂಲಕವೇ ಕೋಟ ನೋಟು ಚಳವಣೆಯಾಗುತ್ತಿದೆ.   "ಲವ್ ಜೆಹಾದ್" ನಡುಯುತ್ತಿದೆ.  ಕೇರಳದ ಉಗ್ರರು ಪಾಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿದರೆ. ಕಾಶ್ಮೀರಿ ಮುಸ್ಲಮನರು ಪಾಕಿಸ್ತಾನದೊಂದಿಗೆ ಸೇರಬೇಕು ಅನ್ನುತ್ತಿದರೆ.

ಇಂದು ಚರ್ಚ್ನ ಕುಮ್ಮಕ್ಕಿಂದ ನಾಗಗಳು ಪ್ರತ್ಯಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿದರೆ.

ಆದರೂ ಸಹ ರಾಷ್ಟ್ರೀಯರೆಂದು ಗುರುತಿಸಿದ್ಕೊಂದ ಮುಸ್ಲಮನರನ್ನು ಒಗ್ಗೂಡಿಸಲು - "ರಾಷ್ಟ್ರೀಯ ಮುಸ್ಲಿಂ ಮುಂಚ್" ಸ್ಥಾಪಿಸಿದೆ.

ವಸ್ತು ಸ್ಥಿತಿಯನ್ನು ಮರೆತು ಮಾತನಾಡುವುದಕ್ಕಿಂತಲೂ, ಸತ್ಯವನ್ನು  ಅರಿತು ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ತುಂಬಾ ಮುಖ್ಯ.

ಸಂಘ ರಾಜಕೀಯಕ್ಕಿಳಿಯಲಿ!

ಸಂಘದ  ಎಷ್ಟೂ ಅಂಗ ಸಂಸ್ಥೆಗಳಿವೇ - ವನವಾಸಿ ಕಲ್ಯಾಣ, "YOUTH FOR SEVA", ABVP,  BMS, EKAL vidyalaya, Hindu Seva Prathisthana, NELE ....

BJP ಕೂಡ ಸಂಘದ ಒಂದು ಅಂಗ ಸಂಸ್ಥೆಯೇ ಹೌದು  . ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಸಲಹೆ ಕೊಡುವ ಅಧಿಕಾರ ಅವರಿಗೆ ಇದ್ದೇ ಇದೆ.  ಅತ್ಯುತಮ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ, ವಾಜಪೇಯಿ, ಅಡ್ವಾಣಿ - "ಸಂಘದ ಪ್ರಚಾರಕರಗಿದ್ದರು",


ಕೋನೇ ಮಾತು:
ಸಮುದ್ರದಷ್ಟೂ ವಿಶಾಲವಾದ ಸಂಘ ಕಾರ್ಯದಲ್ಲಿ ನಾನು ವಿವರಿಸಿರುವುದು  ಒಂದು ಹನಿಯಷ್ಟೂ ಅಲ್ಲ. ಅಷ್ಟು ಸಮಯವೂ ನನಗಿಲ್ಲ .

ಸಿಂಧಗಿಯಲ್ಲಿ ನಡೆದ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ.  ಯಾವುದೋ ಒಂದು ಘಟನೆ ಹಿಡಿದು ದೊಡ್ಡದಾಗಿ ಮಾಡವುದು , ಸಂಘವನ್ನು ತಪ್ಪು ಎನ್ನುವುದು ಸರಿಯಲ್ಲ.

ಸಂಘವೂ 80 ವರ್ಷಗಳಿಂದ ಇಂತಹ ಎಷ್ಟೂ ಪ್ರತಿರೋಧ ಎದುರಿಸಿ ಬೆಳೆದಿದೆ. ಮುಂದೆಯೂ ಬೆಳೆಯುತ್ತದೆ.

Monday, January 16, 2012

Bidar

ಮಧ್ಯ, ದಕ್ಷಿಣ, ಕರಾವಳಿ ಕರ್ನಾಟಕ ಕಂಡಿದ್ದ ನನಗೆ ಉತ್ತರ ಕರ್ನಾಟಕ ಒಂದು ಬಾಕಿ ಉಳಿದಿತ್ತು.

ಸರಿ ಬೀದರ್, ಗುಲ್ಬರ್ಗಾ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ಕೆಲವು ಜಾಗಗಳನ್ನು ರೈಲ್ವೇ ಟಿಕೆಟ್ ಬುಕ್ ಮಾಡಿದೆ

ಬೆಂಗಳೂರಿನಿಂದ ಬೀದರ್ ಗೆ ರೈಲಿನಲ್ಲಿ ಸುಮಾರು 15 ಗಂಟೆ ಪ್ರಯಾಣ. ರೈಲಿನಲ್ಲಿ ನನ್ನ ಒಂದು ಅನುಭವ. ಬೆಳಗ್ಗೆ 8 ಗಂಟೆ ಗೆ ಎದ್ದಾಗ  ನನಗೆ ಸಿಕ್ಕಿದ್ದು ಬಸವನಗುಡಿ ಯಲ್ಲಿ , ಹೋಮಿಯೋಪತಿ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ. ಅವನು ಮೂಲತಃ  ಬಿದರಿನವನು.  ಒಬ್ಬ ಕ್ರೈಸ್ತ. ಅವನೊಂದಿಗೆ ಸುಮಾರು 40 ಜನ  ಎಲ್ಲರೂ ಕ್ರಿಸ್ ಮಸ್ ಗೆ 2 ವಾರಗಳ ಕಾಲ ಹಿಂತಿರುಗುತ್ತಿದ್ದರು.  ಹಾಗೆ ಮಾತನಾಡುವಾಗ ಸ್ವಲ್ಪ ಕ್ರೈಸ್ತ ಧರ್ಮದ ಉಪದೇಶ ಮಾಡಿದ. ಮೂರ್ತಿ ಪೂಜೆ ಕೆಟ್ಟದ್ದು ಅಂತ ಹೇಳಿದ. ಈ ನನ್ನ ಪ್ರಯಾಣದಲ್ಲಿ ನಾನೇ ವಾದ ಮಾಡುವ ಇಷ್ಟವಿಲ್ಲದಿದ್ದರಿಂದ ಸುಮ್ಮನೆ ಎಲ್ಲ ಕೇಳಿದ. ಅತೀ ಬಡವ ಮನೆತನದಿಂದ ಬಂದಿದ್ದ ಅವರು, ಬೆಂಗಳೂರಿನಲ್ಲಿ ಈಗ ಅವರ ಕುಟುಂಬದವರು ಎಲ್ಲರೂ ಸರಿ  ಲಕ್ಷ - ಲಕ್ಷ ವ್ಯಾಪಾರ ಮಾಡುತ್ತರಂತೆ. ಎಷ್ಟೇ ದುಡಿದರೂ ಸಹ ಲಾಭದಲ್ಲಿ 10% ಅನ್ನು ಖಡ್ಡಾಯವಾಗಿ ತಮ್ಮೊರಿನ ಚರ್ಚ್ ಗೆ ಕೊಡುತ್ತರಂತೆ.   "ಸರಿ ನೀವು ಟಾಕ್ಸ್ ಕಟ್ಟುತೀರ ಅಂತ ಕೇಳಿದರೆ" ನಿರುತ್ತರನಾದ.   ನಮ್ಮ ದೇಶದ ಧರ್ಮ ಎಂಬುದು ಒಮ್ಮೊಮ್ಮೆ ಅಂಟಿದ ಶಾಪ ಎನಿಸುತ್ತದೆ ( ಗಾಲಿ  ರೆಡ್ಡಿ:  45 ಕೋಟಿ ಕಿರೀಟವನ್ನು ತಿರುಪತಿಗೆ ಕೊಡುತ್ತಾನೆ , ನೆಟ್ಟಿಗೆ ಕಂದಾಯ ಕಟ್ಟುವುದಿಲ್ಲ )

ಬಿಡರ್ನಲ್ಲಿ ಇಳಿದಾಗ 3 ಗಂಟೆ . ಅಲ್ಲಿಂದ ನಡೆದುಕೊಂಡು ಹೋಗಿ ಒಂದು ಹೊಟೇಲ್ ನಲ್ಲಿ ಉಳಿದುಕೊಂಡೆ.

ಹೋಟೆಲ್ನಲ್ಲಿ ಮಾತನಾಡಿ ಜಾಗಗಳ ದೊರವನ್ನು ತಿಳಿದು ಕೊಂಡು ಪ್ರಯಾಣ ಶುರು ಮಾಡಿದೆ .

ಮೊದಲು ಹೋಗಿದ್ದು - ಗುರುದ್ವಾರಕ್ಕೆ . ಇಲ್ಲಿಗೆ ಗುರು ನಾನಕ್ ಭೇಟಿ ನೀಡಿದ್ದರಂತೆ . ಇದನ್ನ ಸಿಖ್ಖರು ಮಿನಿ ಪಂಜಾಬ್ ಮಾಡಿಕೊಂಡಿದ್ದಾರೆ.


ಗುರುದ್ವಾರಕ್ಕೆ ಪ್ರವೇಶ ಮಾಡುವ ಮೊದಲು ತಲೆಗೆ ಬಟ್ಟೆ ಕಟ್ಟಿ ಕೊಳ್ಳುವುದು ಕಡ್ಡಾಯ . ಪಕ್ಕದಲ್ಲಿಯೇ ನಾನಕ ಜರಿ ಇದೆ. ಇಲ್ಲಿ ನಾನಕರು ನೀರು ಕುಡಿದ ಜಾಗ ಇದೆ.


ಒಳಗೆ ಗುರು ಗ್ರಂಥ ಸಾಹಿಬ ನ ಮುಂದೆ - ಎಲ್ಲ ರೀತಿಯ ಆಯುಧಗಳನ್ನು ಇಟ್ಟಿದ್ದಾರೆ.   ಈ ಶಸ್ತ್ರ ಪೂಜೆಯಿಂದಲೆ  ಇವರು ಮೊಘಲ್ ಸಾಮ್ರಾಜ್ಯ ಮುಗಿಸಿ, ಮತ್ತೆ ಹಿಂದೂ ರಾಷ್ಟ್ರ ಕಟ್ಟಲು ಶಕ್ತವಾದರೂ ಅಂತ ಸ್ಪಷ್ಟ.  ಪಕ್ಕದಲ್ಲಿರು ಒಂದು ಮಂದಿರದಲ್ಲಿ ಎಲ್ಲ ಸಿಖ್ ಮಹಾತ್ಮರ ಫೋಟೋ ಇಟ್ಟಿದ್ದಾರೆ.
  

                                    

ಗುರುದ್ವಾರ ಪಕ್ಕದಲ್ಲಿಯೇ ಹಜ್ರತ ಸಯೀದ್ ಅವರ ಸಮಾಧಿ ಇದೆ. ಇವರು ಬಹಮನಿ ರಾಜನೊಬ್ಬನ ರಾಜ ಗುರುವಾಗಿದ್ದಾರಂತೆ. ಇಲ್ಲಿ ಮುಸಲ್ಮಾನರಿಗೆ ಉರಸ್ ನಡೆಸುವುದಕ್ಕೆ ನಿಷೇಧವಿಧೆ.




ನಂತರ ಅಲ್ಲಿಂದ ಸುಮಾರು 1 ಕಿಲೋಮೀಟರ್ ಮುಂದೆ - ಬರೀದ್ ಶಾಹಿ ಉದ್ಯಾನ ಇದೆ. ಇಲ್ಲಿ ರಾಜ ವಂಶದವರ ಸಮಾಧಿಯಿದೆ. ಈ ರಾಜರುಗಳು ತುರ್ಕಿ (TURKEY) ಮೂಲದವರು. 

ಇಲ್ಲಿಂದ ಮುಂದೆ 2 ಕಿಲೋಮೀಟರ್ ನಡೆದು ಹೋದರೆ ಪಾಪನಾಶ ದೇವಸ್ಥಾನ ಸಿಗುತ್ತದೆ.  ಇದರ ಪಕ್ಕದಲ್ಲಿಯೂ ಸಹ ಒಂದು ನೀರಿನ ಜರಿ ಇದೆ.
 
                                       


ಸುಮಾರು 5-6 ಕಿಲೋಮೀಟರ್ ನಡೆದು ಸುಸ್ತಾಗಿತ್ತು. ಆಟೋ ಹಿಡಿದು ಹೋಟಲ್ಗೆ ಹೋದೆ.

ಬೆಳಗ್ಗೆ ಎದ್ದು ಬೀದರ್ ಕೋಟೆಗೆ ವಾಕಿಂಗ್ ಶುರು . ಬಿದರ್ನಲ್ಲಿ ಒಂದು ಭವ್ಯವಾದ ಕೋಟೆ ಇದೆ.  ಇದು ಹಿಂದೂ ರಾಜರಾದ ಕಲ್ಯಾಣಿ ಚಾಲುಕ್ಯರು,  ಕಾಕತಿಯರು ಕಟ್ಟಿದ ಈ ಕೋಟೆಯನ್ನು ದೂರದಿಂದ ಬಂದ ತುರ್ಕಿಗಳು (TURKEY) ಹಾಗೋ ಪೆರ್ಸಿಯನ್ನಾರು (persians) ಆಕ್ರಮಿಸಿ ಬಳಸಿಕೊಂಡರು. ಚಿತ್ರದುರ್ಗದ ಕೋಟೆಗೆ ಹೊಲಿಸಿದರೆ ಇದನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನು ನಿರ್ವಹಣೆ ಮಾಡುತ್ತಿದ್ದರೆ. ಕೋಟೆಯ ಸುತ್ತಲೂ ಕೊಳಚೆ ನೀರು ಹರಿಯುತ್ತದೆ. 



ಕೋಟೆಯ ಸುತ್ತಲೂ ನೀರು ಹರಿದಾಡಲೂ ದೊಡ್ಡ ಕಂದಕಗಳಿವೆ.  ಇದೇ ರೀತಿಯ ಕೋಟೆಗಳನ್ನು ನೀವು ಬಸವ ಕಲ್ಯಾಣ, ಗುಲ್ಬರ್ಗಾ ಇಲ್ಲೂ ಸಹ ನೋಡಬಹುದು





ಪ್ರಮುಖ ಬಾಗಿಲು
 ಮೇಲಿನ ಬಾಗಿಲಿನ ಮುಂದೆ ಈ ಕಲ್ಲನ್ನು ಪೂಜೆ ಮಾಡುತ್ತಾರೆ. ಕೇಳಿದಾರ ಒಬ್ಬ ದಾರಿ ಹೊಯ್ಕ ಇದನ್ನು ಪಾಂಡುರಂಗನ ವಿಗ್ರಹ ಎಂದ.  ವಿಭೂತಿಯನ್ನು ನೋಡಿದರೆ ಇದು ಶಿವಲಿಂಗದ ಭಾಗ ಎಂದು ತಿಳಿಯುತ್ತದೆ. (ಮುಹಮ್ಮದ್ ಘಜ್ನಿ ಕೂಡ ಸೋಮನಾಥ ದೇವಾಲಯದ ಶಿವಲಿಂಗವನ್ನು ಮೆಟ್ಟಿಲು ಮಾಡಿದ್ದು ಎಲ್ಲರಿಗೂ ತಿಳಿದಿದೆ)
                                    


ಕೋಟೆಯ ಒಳಗಡೆ ಇನ್ನೊಂದು ಹಳೆಯ ಕೋಟೆಯಿದೆ. ಅದರ ಚಿತ್ರ

 
ಹಳೆಯ ಕೋಟೆ
ಮುಂದೆ ಕೋಟೆಯಲ್ಲಿ ಒಂದು ಕೆರೆ ಕಾಣುತ್ತದೆ.
ಬೊಮ್ಮಗೊಂಡೈಯ್ಯ ಕೆರೆ
 ಸುಮಾರು 700 ವರ್ಷಗಳ ಕಾಲ ಇಸ್ಲಾಮಿಕ್ ಆಡಳಿತದಲ್ಲಿದ್ದರೂ ,ಕೋಟೆಯಲ್ಲಿರುವ ಈ ಕೆರೆಗೆ ಅಚ್ಚ ಕನ್ನಡ ಹೆಸರೇ ಉಳಿದುಕೊಂಡಿದೆ.





ಕನ್ನಡ ಶಾಸನ
 ಕೋಟೆಯಲ್ಲಿ ಓಡಾಡುವಾಗ ಒಂದು ಉಚ್ಚ್ಚೆ ಮಾಡುವ ಜಾಗ ಕಂಡಿತು. ಅಲ್ಲಿ ಸಿಕ್ಕ ಒಂದು ಕನ್ನಡ ಶಾಸನ. ನಾನು ಕಷ್ಟಪಟ್ಟು ತೆಗೆದ ಒಂದು ಫೋಟೋ

ಕೋಟೆಯಲ್ಲಿ ವಿಶಾಲವಾದ ಜಾಗ

ಕೋಟೆ ನೋಡಿದ ನಂತರ ಮುಸಿಯಮ್ ಗೆ ಭೇಟಿ ಕೊಟ್ಟೆ. ಒಳಗೆ ಕನ್ನಡದ ಕೆಲ್ವು ಶಾಸನಗಳು, ಗಣೇಶ, ದೇವತೆಯರ,  ಕಾಕತಿಯರ ವಿಗ್ರಹಗಳು ಕಾಣಿಸುತ್ತವೆ.
ಕೋಟೆಯ ಮುಸಿಯಮ್ ನಲ್ಲಿ ಇರುವ ಹಿಂದೂ ವಿಗ್ರಹಗಳು



ಮುಸಿಯಮ್ ಎದುರಿಗಿರುವ ಉದ್ಯಾನ ಮತ್ತು ಬಲದಲ್ಲಿ ಮಸೀದಿ 

ರಾಣಿಯ ಗೃಹಗಳು 

 ಕೋಟೆಯ ಒಳಗೆ ಇರುವ ಯಾವುದೇ ಸೆಕ್ಯೂರಿಟೀ ಗಾರ್ಡ್ ಗೆ ಕನ್ನಡ ಬರುವುದಿಲ್ಲ.  ಇಡೀ ಕೋಟೆಯಲ್ಲಿ ನಿಮಗೆ ಒಂದೇ ಒಂದು ಕನ್ನಡ ಬೋರ್ಡ್ ಸಿಕ್ಕರೆ ಪುಣ್ಯ.  ನನಗೆ ಇಬ್ಬರು ಬಾಲಕರು ಒಳಗೆಸಿಕ್ಕಿದರು. ಒಬ್ಬನೊಂದಿಗೆ ನಾನು ಕನ್ನಡಲ್ಲಿ ಮಾತನಾಡುತ್ತಿರುವಾಗ, ಇನ್ನೊಬ್ಬ ಅವನಿಗೆ - "ಹಿಂದಿ ಮೇ ಬಾತ್ ಕಾರ್" (ಅವನೂ ನಂತರ ಕನ್ನಡಲ್ಲಿ ಮಾತನಾಡಿದ) ಅಂತ ಉಪಾದೇಶ  ನೀಡಿದ. ಈ ಬಾಲಕನೇ ಹೀಗೆ ಮಾತನಾಡಿದರೆ, ಇಲ್ಲಿನ ಮುಸ್ಲಮನರೆ ಮನಸ್ಥಿತಿ ಹೇಗಿರಬೇಡ ಅಂದುಕೊಂಡೆ.


ಇಲ್ಲಿಂದ ಮುಂದೆ ಮಹಮ್ಮದ್ ಗವನ್ ಅರಬಿಕ್ ಯೂನಿವರ್ಸಿಟೀ (ಅಂತ ನಾನು ಓದಿದ್ದು) ನೋಡಲು ಹೋದೆ . ಇದು ಪೂರ್ಣ ಮುಸ್ಲಿಂ ಬಡವಣೆಯಲ್ಲಿದೆ. ಇಲ್ಲಿ ನೀವು ಮಾತನಾಡಿಸಿದರೂ ಕೂಡ ಯಾವುದೇ ಮುಸ್ಲಿಂ ಕನ್ನಡ ಮಾತನಾಡುವುದಿಲ್ಲ. ಸ್ಟೇಷನ್ ಹತ್ತಿರ ಸಿಕ್ಕ ಮತ್ತೊಬ್ಬ ಮುಸಲ್ಮಾನನು ಕನ್ನಡ ಮಾತನಾಡಲಿಲ್ಲ.

ಇಲ್ಲಿನ ಮುಸ್ಲಮನರಲ್ಲಿ ಇನ್ನೊ ಬಹಮನಿ, ನಿಜಾಮ್, ಗತ ಕಾಲದ ನೆನೆಪಿನಲ್ಲಿದ್ದಾರೆ ಅಂತ ಅನಿಸುತ್ತದೆ.  ನಿಜಮಾನ ಆಳ್ವಿಕೆಯಲ್ಲಿದ್ದ ತೆಲಂಗಾಣ ಪ್ರದೇಶವೇನಾದರೂ ಬೇರೆ ರಾಜ್ಯವಾದರೆ - ಇಲ್ಲಿನ ಮುಸಲ್ಮಾನರೂ ಕೂಡ ನಮ್ಮನೂ ತೆಲಂಗಣಕ್ಕೆ ಸೇರಿಸಿ ಅಂತ ಒತ್ತಾಯಿಸುವುದರಲ್ಲಿ ಆಶ್ಚರ್ಯವಿಲ್ಲ. (ತೆಲಂಗಾಣ ಪ್ರದೇಶ ನಿಜಮಾನ ಅಧಿಕಾರದಲ್ಲಿತ್ತು. ಅಲ್ಲಿ ಮುಸಲ್ಮಾನರೂ ಹೆಚ್ಚಿನ ಸಂಕ್ಯೆಯಲ್ಲಿದ್ದಾರೆ. ಆದಕ್ಕಾಗಿ ಮುಸಲ್ಮಾನರು ಹೋರಾಟ ಮಾಡುತ್ತಿರುವುದು, ಮುಸಲ್ಮಾನರು ಬಹುಸಂಕ್ಯತರಿರುವ ರಾಜ್ಯ ಸ್ಥಾಪಿಸುವುದಕ್ಕೆ)

ದಾರಿಯಲ್ಲಿ 3 ಗೋಮಾಂಸದ ಅಂಗಡಿಗಳನ್ನು ರಾಜ ರೋಷವಾಗಿ ನಡೆಸುಟ್ಟಿದುದು ಕಂಡು ಬಂತು.  ಮುಂದೆ ಕಟ್ಟಡವನ್ನು ನೋಡಿದ ಮೇಲೆಯೇ ನನಗೆ ತಿಳಿದಿದ್ದು - ಅದು ಯೂನಿವರ್ಸಿಟೀ ಅಲ್ಲ ಕೇವಲ ಮದ್ರಸ ಎಂದು . ಇಷ್ಟು ಸಣ್ಣ ಕಟ್ಟಡವನ್ನು ಹೇಗೆ ಯೂನಿವೇರ್ಸಿಟಿ ಅಂತ ಕರೆದರೋ ತಿಳಿದಿಲ್ಲ



 ಗವನ್ ಮದ್ರಸ ಮುಗಿಸಿ ನರಸಿಂಹ ಝರಿ ನೋಡಲು ಹೋದೆ . ಇದು ಜನ ನರಸಿಂಹ ಜರ್ನ ಅಂತ ಹಿಂದಿ ಹೆಸರು ಇತ್ತು ಕರೆಯುತ್ತಾರೆ.  ಇಲ್ಲಿ ಎದೆಯ ಮಟ್ಟದವರೆಗೂ ನೀರಿನಲ್ಲಿ ನಡೆದುಕೊಂಡು ನರಸಿಂಹನ ದರ್ಶಣ ಮಾಡಬೇಕು. ದೊಡ್ಡ ಸಾಲು ಇದ್ದುದರಿಂದ ನಾನು ಒಳಗೆ ಹೋಗಲಿಲ್ಲ. 


ನರಸಿಂಹ ದೇವಸ್ಥಾನ ಬಲ ಪಕ್ಕದಲ್ಲಿ ಮಸೀದಿ


ಇಷ್ಟು ಮುಗಿಸಿ ಬಸ್ಸು ಹತ್ತಿ ಬಸವ ಕಲ್ಯಾಣದ ಕಡೆ ಪ್ರಯಾಣ ಶುರು ಮಾಡಿದೆ.