Wednesday, February 1, 2012

Reply: RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

 ಬಳಗದವರ ಮೇಲಿನ ಬ್ಲಾಗ್ ಓದಬೇಕಾದರೆ,  ನನ್ನ ಮನಸ್ಸಿನಲ್ಲಿ ಅನಿಸಿಕೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಸಂಘದವರು ಹಾಗೂ ಬಳಗದವರಿಬ್ಬರಿಗೂ ಬೇಕಾಗಿರುವುಧು ಅಭಿವೃಧ್ಧಿ, ನಾಡನ್ನು ವೈಭವಕ್ಕೆ ತೆಗೆದುಕೊಂಡು ಹೋಗುವ ಹಂಬಲ: ಆದರೆ ವ್ಯತ್ಯಾಸ ಇಷ್ಟೇ -

Sangh: India is a country of Hindus who speak different languages, customs.

Banavasi Balaga:  Indian is an Union where Countries speaking different languagues come together.


ಸಂಘದ ಬಗ್ಗೆ ಬರೆಯುವುದಕ್ಕೆ ಅಂತ ಒಂದು ಪುಸ್ತಕವನ್ನು ಓದಿ,  ಎಲ್ಲ ತಿಳಿದುಕೊಂಡಂತೆ ಬರೆಯುವುದು:
"ನೆಲೆದ ಮೇಲೆ ಈಜಿದಂತೆ, Glossery ಓದಿ ಪುಸ್ತಕ ಬಗ್ಗೆ ಮಾತನಾಡಿದಂತೆ "   ಹೇಗೆ ನೀರಿಗೆ ಇಳಿದ ಮೇಲೆಯೇ ಈಜುವುದನ್ನು ತಿಳಿಯಬಹುದೋ ಹಾಗೆಯೇ ಸಂಘದ ಬಗ್ಗೆ  ಕೂಡ ...

ಸಂಘ ಬಗ್ಗೆ  ಈ ವಿಷಯ ನಾವು ತಿಳಿದುಕೊಳ್ಳುವುದು ಮುಖ್ಯ; "ಇಲ್ಲಿ ಯಾವುದೇ ವ್ಯಕ್ತಿ, ಒಬ್ಬನ ಚಿಂತನೆ ಮುಖ್ಯವಲ್ಲ; ಅಲ್ಲಿ ಮುಖ್ಯ ಭಾರತದ ವೈಭವ, ಉದ್ದಾರ ಅಷ್ಟೇ" !!!   ಗುರೂಜಿಯವರ ಕೆಲವು ಆಲೋಚನೆಗಳೂ ದೇಶದ ಹಿತಕ್ಕೆ ಸಹಕಾರಿಯಲ್ಲ ಎಂದರೇ ಸಂಘವು ಅದನ್ನು ಕೂಡ ಕೈ ಬಿಡುತ್ತದೇ.

ಭಾಷೆಗಳ ಬಗ್ಗ:
ಇಂದು ಸಂಘವು ಬಾರಿ ಹಿಂದಿಯನ್ನೇ ನೆಚ್ಚಿಕೊಂಡಿದ್ದಾರೆ ಎಂಬುದು ನಿಜವಾಗಿದ್ದಾರೆ - ಅದು ಭಾರತದ ಎಲ್ಲ ರಾಜ್ಯಗಳಲ್ಲಿ ಇಂದು ಬೆಳೆಯುತ್ತಿರಲಿಲ್ಲ.  ಇಂದು ನಮ್ಮ ಬನವಾಸಿ  ಬಳಗದವರು  ಕನ್ನಡದಲ್ಲಿ ಸೇವೆಯನ್ನು , ಮಾಹಿತಿ ಪಡೆಯುವ ಹಕ್ಕನ್ನು ಎಲ್ಲರಿಗೂ ತಿಳಿಸುತ್ತಿದ್ದಾರೆ. ಈ ಕೆಲಸವನ್ನು ಸಂಘ 50 ವರ್ಷಗಳ ಹಿಂದೆಯೇ ಮಾಡಿದೆ.  ಇಲ್ಲಿ ಯಾವುದೇ ಶಾಖೆ ಹಿಂದಿಯಲ್ಲಿ ನಡೆಯುವುದಿಲ್ಲ - ಕರ್ನಾಟಕದಲ್ಲಿ ಅದು ಕನ್ನಡ.

ಕೇಶವ ಕೃಪಾದಲ್ಲಿ ಉತ್ತರದಿಂದ , ಮಣಿ ಪುರದಿಂದ ಬಂದೆ ಕಾರ್ಯಕರ್ತರೂ ಕನ್ನಡ ಕಲಿತಿದ್ದನ್ನು ನಾನು ಸ್ವತಃ ಬಲ್ಲೆ.  "ಇಂದು ಸಂಘ ಕನ್ನಡಲ್ಲಿ ಪ್ರಕಟಿಸಿರುವಷ್ಟು ಪುಸ್ತಕಗಳನ್ನು ಯಾವ ಕನ್ನಡ ಪರ ಹೋರಾಟಮಾಡುವ ಸಂಸ್ಥೆಯೂ ಪ್ರಕಟಿಸಿಲ್ಲ." ಬೆಂಗಳೂರಿನಲ್ಲಿರುವ ಅನೇಕ ಬೇರೆ ರಾಜ್ಯದ ಸ್ವಯಂ ಸೇವಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವದನ್ನು ನಾನು ಕಂಡಿದ್ದೇನೆ.

ಗುರೂಜಿಯವರು ಹಿಂದೂ ರಾಷ್ಟ್ರದ ಐಕ್ಯತೆಯ ದೃಷಿಯಿಂದ: ಆಂಗ್ಲ ಭಾಷೆಗೆ ಬದಲು ಹಿಂದಿ ಬಳಸಬಹುದು ಎಂದಿದ್ದಾರೆ ಅಷ್ಟೇ.  ಅವರ ಆಶಯ ಎಲ್ಲ ಭಾರತೀಯ ಭಾಷೆಗಳು ಬೆಳೆಯಬೇಕೆಂದು. ಆದರೆ ಇಂದು ಕೇಂದ್ರ ಸರಕಾರ ಮಾಡುವ ಹಿಂದಿ ತಾರತಮ್ಯಕ್ಕೆ ಗುರೂಜಿ ಕಾರಣವಲ್ಲ.

ಸಂಸ್ಕೃತ ಭರತದಲ್ಲಿ ಎಲ್ಲರೂ ಬಳಸುತ್ತಿದರು . ಮಹಾನ್ ಗಣಿತಗ್ನನಾಗಿದ್ದ ಕನ್ನಡದ ಭಾಸ್ಕರ ಕೂಡ ಸಂಸ್ಕೃತದಲ್ಲಿ "ಸಿದ್ಧಾಂತ ಶಿರೋಮಣಿ" ರಚಿಸಿದ್ದ. ಕೇರಳದಲ್ಲಿದ್ದ "ಶಂಕರಾಚಾರ್ಯ" ಕಾಶ್ಮೀರದಲ್ಲಿದ್ದ ಪಂಡಿತರನ್ನು ಸಂಸ್ಕೃತದಲ್ಲಿ ವಾದ ಮಾಡಿ ಸೋಲಿಸಿದ್ದ.  ಅದರ ಬಗ್ಗೆ ಅಭಿಮಾನ ವಿರಬೇಕು.  ನಮಗೆ ಕನ್ನಡಕ್ಕೆ ಹೆಚ್ಕು ಪ್ರಾಶ್ಯಸ್ತ ಕೊಡಬೇಕೆಂದರೆ ನಾವು ಕೊಡಬಹುದು. ಅವರ ಒಂದು ವಿಚಾರ ನಮಗೆ ಇಷ್ಟವಾಗಲಿಲ್ಲ ಅಂತ ಬೇರೆ ಎಲ್ಲ ವಿಚಾರಗಳನ್ನು ಪರಿಗಣಿಸದಿರುವುದು ಸರಿಯಲ್ಲ.

ಇಂದು ಸಂಘ್ ಐ‌ಟಿ ಶಾಖೆಗಳ ಮೂಖಾಂತರ "ಕನ್ನಡ ಪರಿಚಯ ವರ್ಗಗಳನ್ನು" ನಡೆಸುತ್ತಿದೆ. ಇದರಲ್ಲಿ ಭಾರತದ ಎಲ್ಲ ಭಾಷೆಯ ಜನರೂ ಕೂಡ ಆಯೋಜಿಸಲೂ ಸಹಾಯಮಾಡುತ್ತಿದ್ದಾರೆ" ; (kpv2012.blogspot.com). ಇದರಲ್ಲಿ ಸಂಘದ ಮಹಾರಾಷ್ಟ್ರ ಮೂಲದ, ಒರಿಸ್ಸ ಮೂಲದ , ಕನ್ನಡ ಬಾರದ ಎಲ್ಲ ಸ್ವಯಂಸೇವಕರೂ ದುಡಿಯುತ್ತಿದ್ದಾರೆ.

ಒಕ್ಕೂಟದ ಬಗ್ಗೆ!
ಇಲ್ಲಿ  ಸಂಘದವರ ಉದ್ದೇಶ ಇಷ್ಟೇ : ಭಾರತ ಧೇಶ ಒಡೆದು - ಮತ್ತೆ ಪರಕೀಯರ ದಾಸ್ಯದಲ್ಲಿರಬಾರದು. ನಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರಿಂದಲೇ - ತುರ್ಕಿಗಳು , ಪೆರ್ಸಿಯನ್ನಾರು ದಾಳಿ ಮಾಡಿ, ನಮ್ಮ ಸಂಸ್ಕೃತಿಯನ್ನು ನಾಶಮಾಡಿದರು. ಇದರ ಚರಿತ್ರೆಯನ್ನು - ಬೀದರ್, ಗುಲ್ಬರ್ಗಾ , ಬಿಜಾಪುರ್ ಎಲ್ಲ ಕಡೆ ಈಗಲೂ ನೋಡಬಹುದು .

ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಒಂದು ಶಾಖೆ ಹೇಗೆ ನಡೆಸಬೆಂಕೆಂದು - ಅಲ್ಲಿ ಯಾರು ಮೇಲಿನವರು ಹೇಳುವುದಿಲ್ಲ, ಕೇವಲ ಸಲಹೆ ಕೊಡುತ್ತಾರೆ .  ಒಂದೇ ಕೇಂದ್ರಿತ ವ್ಯವಸ್ಥೆ ಇದ್ದರೆ ಸಂಘ ಇಷ್ಟು ದೊಡ್ಡದಾಗಿ ಬೆಳೆಯಲು ಸದ್ಯವಾಗುತ್ತಿರಲಿಲ್ಲ.

ಕಾಶ್ಮೀರವನ್ನು ಭರತದಲ್ಲಿ ಮಿಲೀನಗೊಳಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಗುರೂಜಿಯವರು, ಹಿಂದೂ ಮಹಾರಾಜ ಹರಿಸಿಂಘ್ ನೊಂದಿಗ ಮಾತನಾಡಿದ್ದರು.  ಸುಮಾರು 1950 - 60 ರಲ್ಲಿ ಪ್ರತ್ಯೇಕತಾವಾದಿಗಳ ಹುಟ್ಟದಗಿಸುವ ನಿಟ್ಟಿನಲ್ಲಿ ಇದನ್ನು ಹೇಳಿದ್ದರು. ಇದರ ಉದ್ದೇಶ ಅಭಿವೃದ್ದಿಗಾಗಿ ತೆಗೆದುಕೊಳ್ಳುವ ಸ್ವತಂತ್ರ ನಿರ್ಣಯಗಳನ್ನು ಕಟ್ಟಿಹಾಕುವುದಲ್ಲ.

 ಸಮಾಜಿಕ ಸಮಸ್ಯೆಯ ಸರಳೀಕರಣ!

ದಲಿತರ ವಿಚಾರದಲ್ಲಿ ಸಂಘಕ್ಕೆ ಭೀಮ್ ರಾವ ಅಂಬೇಡ್ಕರ್ ಅವರಿಗಿಂತ ಬೇರೆ ಸರ್ಟಿಫಿಕೇಟ್ ಬೇಕಾಗಿಲ್ಲ. ಒಮ್ಮೆ "ಸಾಮಾಜಿಕ ಕ್ರಾಂತಿ ಸೂರ್ಯ - ಡಾ! ಅಂಬೇಡ್ಕರ್" ಪುಸ್ತಕ ಓದಿ.

ಗುರೂಜಿಯವರ ಚಿಂತನೆಯಲ್ಲಿ ಸತ್ಯ ಇದೆ:
ಇಂದು ಮಾಯಾವತಿ ದಲಿತರ ಹೆಸರಿನಲ್ಲಿ ಆಡಳಿತ ನಡೆಸುತ್ತಾ ಇದ್ದರೆ ... ಆದರೆ ಉತ್ತರ ಪ್ರದೇಶದ ಉದ್ಧಾರ - ಆ ದೇವರೇ ಬಲ್ಲ. 

ಅತ್ಯಂತ ಮಡಿವಂತ ಸಮಾಜವಾದ "ಮಧ್ವ ಪೀಠದ" ಗುರುಗಳಾದ ವಿಶ್ವೇಶ ತೀರ್ಥರೂ ನಮ್ಮ ಮೇಲೂ ಗುರೂಜಿಯವರ ಪ್ರಭಾವ ಇದೆ, ನಮ್ಮ ಬದಲಾವಣೆಗೆ ಅವರು ಸಹ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅವರು ದಲಿತರ ಕೆರಿಗೆ ಹೋಗಿದ್ದು.  ಮಡಿವಂತರಾದರೆ ದಳಿತರಿಗೂ ಸಹ ದೀಕ್ಷೆ ಕೊಡುವುದಾಗಿ ಘೋಷಿಸಿದ್ದರು !!!

ಉಡುಪಿಯಲ್ಲಿ ನಡೆನ "ಪ್ರಥಮ ವಿಶ್ವ ಹಿಂದೂ ಸಮ್ಮೇಳನದಲ್ಲಿ ' - "ಅಸ್ಪೃಶ್ಯತೆಗೆ ಧರ್ಮದಲ್ಲಿ ಜಾಗವಿಲ್ಲ" ಎಂದು ಘೋಷಿಸಿದ್ದರು.

ನಮ್ಮ ದ್ರಾವಿಡ ಚಳುವಳಿಯ ನಾಯಕರು ಕೆಳ ವರ್ಗದ ಜನರನ್ನೂ ಸೇರಿಸಿ, ಹಿಂದೂ ಸಂಸ್ಕೃತಿಯನ್ನೇ ಹೀಗೆಳೆದು ಆಡಳಿತ ನಡೆಸುತ್ತಾರೆ .  ಸರಕಾರ ಎಲ್ಲರನ್ನು ಸಮನಾಗಿ ನೋಡುವುದು ಎಂದರೆ ಇದೇನೇ?

ಇಂದು ಮದುವೆ ಎನ್ನುವ ಒಂದು ವಿಚಾರ ಬಿಟ್ಟರೆ ಎಲ್ಲ ವರ್ಣದವರು ಒಟ್ಟಾಗಿ ಇದ್ದರೆ.  ಆದರೂ ಸಹ ಸಮಾಜಘಾತಕ - "ಭಾರತೀಯ ಮೂಲನಿವಾಸಿ ಸಂಘಕ್ಕೆ" ಮಲ್ಲಿಖರ್ಜುನ ಖರ್ಗೆ ಯಂತಹವರು ಸಹಾಯ ನೀಡುತ್ತಾರೆ- ಗುಲ್ಬರ್ಗಾದಲ್ಲಿ ಸಮಾವೇಶ ನಡೆಸಿ ಮುಂದಿನ ಸರ್ತಿ ಸೀಟನ್ನು ಗಟ್ಟಿ ಮಾಡಿ ಕೊಂಡಿದ್ದಾರೆ

ಇಂದು ಮೀಸಲಾಥಿ ಅವಶ್ಯಕತೆಯಿರುವುದು ಎಲ್ಲ ವರ್ಗದ ಬಡವರಿಗೆ. ಕೆಲ ವರ್ಗದ ಶ್ರೀಮಂತರಿಂದ, ಮತಕ್ಕಾಗಿ ರಾಜಕಾರಣಿಗಳಿಂದ  ಅದರ ದುರುಪಯೋಗವಾಗುತ್ತಿದೆ.


ಸಂಘದ ಧರ್ಮದೃಷ್ಟಿ!

 ಹೌದು ಇಲ್ಲಿ ಗುರೂಜಿ ಹೇಳಿರುವುದು ಸತ್ಯ.  ಕೇರಳದಿಂದ ಹಿಡಿದು, ಕಾಶ್ಮೀರದವರೆಗೆ, ಗುಜುರಾತಿನಿಂದ - ಬಂಗಾಳ, ಅಸ್ಸಾಮ್ ವರೆಗೆ ಪಾಕಿಸ್ತಾನಿಗಳು  ನಮ್ಮ ಮುಸಲ್ಮಾನರಿಗೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ.

ಅವರ ಮೂಲಕವೇ ಕೋಟ ನೋಟು ಚಳವಣೆಯಾಗುತ್ತಿದೆ.   "ಲವ್ ಜೆಹಾದ್" ನಡುಯುತ್ತಿದೆ.  ಕೇರಳದ ಉಗ್ರರು ಪಾಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿದರೆ. ಕಾಶ್ಮೀರಿ ಮುಸ್ಲಮನರು ಪಾಕಿಸ್ತಾನದೊಂದಿಗೆ ಸೇರಬೇಕು ಅನ್ನುತ್ತಿದರೆ.

ಇಂದು ಚರ್ಚ್ನ ಕುಮ್ಮಕ್ಕಿಂದ ನಾಗಗಳು ಪ್ರತ್ಯಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿದರೆ.

ಆದರೂ ಸಹ ರಾಷ್ಟ್ರೀಯರೆಂದು ಗುರುತಿಸಿದ್ಕೊಂದ ಮುಸ್ಲಮನರನ್ನು ಒಗ್ಗೂಡಿಸಲು - "ರಾಷ್ಟ್ರೀಯ ಮುಸ್ಲಿಂ ಮುಂಚ್" ಸ್ಥಾಪಿಸಿದೆ.

ವಸ್ತು ಸ್ಥಿತಿಯನ್ನು ಮರೆತು ಮಾತನಾಡುವುದಕ್ಕಿಂತಲೂ, ಸತ್ಯವನ್ನು  ಅರಿತು ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ತುಂಬಾ ಮುಖ್ಯ.

ಸಂಘ ರಾಜಕೀಯಕ್ಕಿಳಿಯಲಿ!

ಸಂಘದ  ಎಷ್ಟೂ ಅಂಗ ಸಂಸ್ಥೆಗಳಿವೇ - ವನವಾಸಿ ಕಲ್ಯಾಣ, "YOUTH FOR SEVA", ABVP,  BMS, EKAL vidyalaya, Hindu Seva Prathisthana, NELE ....

BJP ಕೂಡ ಸಂಘದ ಒಂದು ಅಂಗ ಸಂಸ್ಥೆಯೇ ಹೌದು  . ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಸಲಹೆ ಕೊಡುವ ಅಧಿಕಾರ ಅವರಿಗೆ ಇದ್ದೇ ಇದೆ.  ಅತ್ಯುತಮ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ, ವಾಜಪೇಯಿ, ಅಡ್ವಾಣಿ - "ಸಂಘದ ಪ್ರಚಾರಕರಗಿದ್ದರು",


ಕೋನೇ ಮಾತು:
ಸಮುದ್ರದಷ್ಟೂ ವಿಶಾಲವಾದ ಸಂಘ ಕಾರ್ಯದಲ್ಲಿ ನಾನು ವಿವರಿಸಿರುವುದು  ಒಂದು ಹನಿಯಷ್ಟೂ ಅಲ್ಲ. ಅಷ್ಟು ಸಮಯವೂ ನನಗಿಲ್ಲ .

ಸಿಂಧಗಿಯಲ್ಲಿ ನಡೆದ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ.  ಯಾವುದೋ ಒಂದು ಘಟನೆ ಹಿಡಿದು ದೊಡ್ಡದಾಗಿ ಮಾಡವುದು , ಸಂಘವನ್ನು ತಪ್ಪು ಎನ್ನುವುದು ಸರಿಯಲ್ಲ.

ಸಂಘವೂ 80 ವರ್ಷಗಳಿಂದ ಇಂತಹ ಎಷ್ಟೂ ಪ್ರತಿರೋಧ ಎದುರಿಸಿ ಬೆಳೆದಿದೆ. ಮುಂದೆಯೂ ಬೆಳೆಯುತ್ತದೆ.