Sunday, June 19, 2011

ವಿಜಯನಗರದ ಪ್ರವಾಸ - ೨

ಮತ್ತೆ ಬಂದ್ರಾ, ಸರಿ ಹಾಗಾದ್ರೆ ಪ್ರಯಾಣ ಶುರು ಮಾಡೋಣ ...

 ಎರಡನೇ ದಿವಸ ನಾವು ಹಂಪೆಯ ಹೊರಗೆ ಸುತ್ತುಮುತ್ತಲಿನ ಜಾಗಗಳನ್ನು ನೋಡಲು ಹೊರಟ್ವಿ.  ಮತ್ತೆ ಬೈಕು ಗಳನ್ನ ಹಿಡಿದು ೯.೩೦ ಗೆ ತೋರಣಗಲ್ಲನ್ನು ಬಿಟ್ಟು ಕಮಲಪುರವನ್ನು ಸೇರಿದೆವು.  ಕಮಲಾಪುರದಲ್ಲಿ ಮ್ಯೂಸಿಯಂನ  ಹತ್ತಿರ ಒಳ್ಳ ಇಡ್ಲಿ-ಪುರಿ ತಿಂಡಿ ಮುಗಿಸಿದೆವು .  ನಂತರ ಆನೆಗುಂದಿಯ ಕಡೆಗೆ ನಮ್ಮ ಪ್ರಯಾಣ ಶುರು.

ನಂತರ ವಿಜಯ ವಿಠ್ಠಲ ದೇವಸ್ಥಾನದ ಮುಂದಿನ ದಾರಿಯಲ್ಲೇ ಹೊರಟರೆ ಹಾಳಾಗಿ ಕುಸಿದಿರುವ ಆನೆಗುಂದಿ ಸೇತುವೆ ಸಿಗುತ್ತದೆ. (ಈ ಚಿತ್ರವನ್ನೂ ನೋಡಿ,  ಇದು ಕೂಡ ಕೃಷ್ಣದೇವ ರಾಯನ ಕಾಲದ್ದು ಎಂದು  ಕೊಳ್ಳಬೇಡಿ ;)) 
ಸೇತುವೆಯ ಎಡಭಾಗದಲ್ಲಿ ನೋಡಿದರೆ, ಅಲ್ಲಿ ಒಂದು ಮಂಟಪ ಕಾಣುತ್ತದೆ

ಇದನ್ನು ಕೊಪ್ಪಳ ಹಾಗು ಬೆಳ್ಳಾರಿ ನಡುವಿನ ಸಂಪರ್ಕಕ್ಕಾಗಿ ಕಟ್ಟಲಾಗುತ್ತಿತ್ತು. (ಇದು ಹಂಪೆಯ ಮೂಲ ಸೌಂದರ್ಯಕ್ಕೆ ಧಕ್ಕೆ ತರುತ್ತದೆ ಎಂದು UNESCO ದ ತೀವ್ರ ವಿರೋಧವಿತ್ತು ). ಕೋರ್ಟ್ ನಲ್ಲಿ   ಪ್ರಕರಣ ನಡೆಯುತ್ತಿದ್ದರಿಂದ ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ನಂತರ ಇದರ ಕಬ್ಬಿಣಕ್ಕೆ ತುಕ್ಕು ಹಿಡಿದು ಬಿದ್ದುಹೋಗಿದೆ.



ನಡಿಯನ್ನು ದಾಟುವಾಗ ತುಂಗಾಭದ್ರೆಯ ಕೆಲವು ನೋಟಗಳು






ನದಿಯನ್ನು ದಾಟಿದ ತಕ್ಷಣ ನಮಗೆ ಸಿಗುವುದೇ ಆನೆಗುಂದಿ...

ಅನೆಗುಂದಿಗೆ  ವಿಜಯನಗರಕ್ಕಿಂತಲೂ ಹಳೆಯದಾದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಹಕ್ಕ ಬುಕ್ಕರು ಆನೆಗುಂದಿಯಲ್ಲಿ ತುಘಲಕನ ಸೈನ್ಯವನ್ನು ಹಿಮ್ಮೆಟ್ಟಿಸಿದರು.



ನದಿಯನ್ನು ಸ್ವಲ್ಪ ದಾಟಿ ಮುಂದೆ ಹೋಗುವಾಗ ಕಾಣುವ ಮಂಟಪ. ಗುಡ್ಡದ ಮೇಲೆ ಕೂಡ ಇನ್ನೊಂದು ಮಂಟಪವಿದೆ
  ಮುಂದೆ ಹೋಗುವಾಗ ದಾರಿಯಲ್ಲಿ ಒಂದು ಹಳ್ಳಿ ಸಿಗುತ್ತದೆ .  ಎಡಕ್ಕೆ ಮುಂದೆ ಹೋದಾಗ ಒಂದು ಮಠ ಸಿಗುತ್ತದೆ.

ಇಲ್ಲಿ ನೋಡುವಂತಹದ್ದು ಹೆಚ್ಚಿನದೇನು ಇಲ್ಲ. ಮತ್ತೆ ಹಳ್ಳಿಗೆ ಬರುವಾಗ ದಾರಿಯಲ್ಲಿ ಒಂದು ಸಣ್ಣ ಸ್ಮಾರಕವೊಂದು ಸಿಗುತ್ತದೆ .
ಸೂಚನೆಗಳು ಇದ್ದರು ಕೂಡ - ಅದನ್ನು ಜನರು ಕೊಟ್ಟಿಗೆಯಂತೆ ಉಪಯೋಗಿಸುತ್ತಿದರು
ಕೊಟ್ಟಿಗೆಯಾದ ಸ್ಮಾರಕ
 ಇದರಿಂದ ಈ ಜನರಿಗೆ ಪುರಾತನ ಸ್ಮಾರಕಗಳ ಬಗೆಗಿನ ನಿಷ್ಕಾಳಜಿ, ಅನಾದರ, ಅಜ್ಞಾನ ಸ್ಪಷ್ಟವಾಗುತ್ತದೆ

ನಂತರ ನವ ವೃಂದಾವನಕ್ಕೆ ಹೊರಟೆವು. ನವ ವೃಂದಾವನಕ್ಕೆ ಹೋಗಲು ತುಂಗಭಾದ್ರೆಯನ್ನು ಮತ್ತೆ ಸಣ್ಣ ದೋಣಿಯಲ್ಲಿ ದಾಟಬೇಕು. ದಡದಲ್ಲಿ ಇನ್ನು ಅನೇಕ ಸ್ಮರಕಗಳನ್ನು ನೋಡಬಹುದು .


ಇನ್ನೊಂದು ಸ್ಮಾರಕ + ಕೊಟ್ಟಿಗೆ

ವ್ಯಕ್ತಿ ಒರಗಿಕೊಂಡಿರುವ ಕಲ್ಲಿನ ಕೆತ್ತನೆಗಳನ್ನು ನೋಡಿ

ಹುಲ್ಲಿನ ಕಣಜವಾಗಿರು ಕಟ್ಟಡ


ನವ ಬೃಂದಾವನಕ್ಕೆ ಹೆಚ್ಚಿನ ತಮಿಳರು ಬರುತ್ತಾರೆಂದು ಕಾಣಿಸುತ್ತದೆ. ಇಲ್ಲಿನ ದೋಣಿಯವನು ಕೂಡ ತಮಿಳನ್ನು ಅಚ್ಚುಕಟ್ಟಾಗಿ ಕಲಿತಿದ್ದ . ಬೃಂದಾವನದಲ್ಲಿ ಒಂಬತ್ತು ಯತಿಗಳ ಸಮಾಧಿಯಿದೆ. ಅಲ್ಲಿ ಹೋದ ಕೂಡಲೇ ನಿಮ್ಮ ಕಣ್ಣಿಗೆ ರಾಚುವುದು ತಮಿಳೇ . ಅವರ ಭಾಷಾಭಿಮಾನ ನಮ್ಮ ಕನ್ನಡಿಗರಿಗೆ ಒಳ್ಳೆಯ ಪಾಠ. ನನ್ನಲ್ಲಿ ಪ್ರಶ್ನೆ ಬಂತು - ತಮಿಳುನಾಡಿನಿಂದ ಇಲ್ಲಗೆ ತಮಿಳರು ಬರುತ್ತಿರಬೇಕಾದರೆ - ತಮಿಳರಲ್ಲೂ ಕೂಡ ಮಧ್ವಾಚಾರ್ಯರ ಪ್ರಭಾವ ಅಷ್ಟು ಇತ್ತೇ? ಒಬ್ಬ ತಮಿಳು ಗುರು ಇಲ್ಲಿ  ಬೃಂದಾವನಸ್ಥರಗಿರಬಹುದೇ ?



ಬಲಕ್ಕೆ ಒಳಗೆ ಕಾಣುತ್ತಿರುವುದು ಕೂಡ ತಮಿಳೇ

ಬೃಂದಾವನದಲ್ಲಿ ನನಗೆ ಪೂಜೆ/ನಮಸ್ಕಾರ ಮಾಡುವ ರೀತಿ, ಮಂತ್ರ ತಿಳಿದಿಲ್ಲ . ಹೊರಗಿನಿಂದಲೇ ನಮಸ್ಕಾರ ಮಾಡಿ,
ಏಳನೀರಿನವನೊಂದಿಗೆ ಹರಟುತ್ತ ಕುಳಿತೆ. "ಆನೆಗುಂದಿಯ ಹಿರಿಯ ರಾಜ ಮನೆತನದವ - ಅಚ್ಯುತದೇವರಾಯ ಸ್ವಲ್ಪ ದಿನಗಳ ಹಿಂದೆ ತೀರಿಕೊಂಡರು . ಈಗ ಆನೆಗುಂಡಿ ಅರಮನೆಯಲ್ಲಿರುವುದು - ಅವರ ತಮ್ಮ ರಾಮದೇವರಾಯಣ್ಣ" ಎಂದ.


ತಿರುಗಿ  ಬಂದ ನನ್ನ ಸ್ನೇಹಿತರ,ಮಾತನಾಡುತ್ತಿದರು - ಒಬ್ಬ ಯತಿಗಳ ಬೃಂದಾವನದ ಪೂಜೆಗಾಗಿ ಎರಡು ಮಠಗಳ ನಡುವೆ ಕಲಹವಾಗಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದರಂತೆ. ಅಲ್ಲಿ ೩ ದಿವಸಗಳ ಪೂಜೆಯಲ್ಲ್ಲಿ ೧.೫ ದಿವಸ ಒಬ್ಬರಿಗೆ,  ಇನ್ನು ೧.೫ ದಿವಸ ಇನ್ನೊಬ್ಬರಿಗೆ ಅಂತ ನಿಶ್ಚಯವಾಯಿತು .  ಆಲ್ಲಿ ಸ್ವಾಮಿ ಈ ನಿರ್ಧಾರಕ್ಕೆ ಕೋರ್ಟ್ ಗೆ ಹೋಗಬೇಕಿತ್ತ?  ಸ್ವಲ್ಪ ಕಣ್ಣಗಲಿಸಿ ನೋಡಿ - ಇಡೀ ಹಂಪೆಯಲ್ಲಿ ಎಷ್ಟು ದೇವಾಲಯಗಳು ನಾಶವಾಗಿವೆ (ವೈಷ್ಣವ ದೇವಾಲಯಗಳನ್ನೇ ತೆಗೆದುಕೊಳ್ಳಿ) ? ಒಗ್ಗಟ್ಟಿಲ್ಲದಿದ್ದರೆ ನಾಳೆ ಈ ಬೃಂದಾವನವು ಕೂಡ ಉಳಿಯುವುದಿಲ್ಲ . ಹಜಾರ ರಾಮ ಮಂದಿರದಲ್ಲಿ ನಮಾಜ್ ನಡೆಯುತ್ತಿರುವಾಗ, ಪುರಂದರ ಮಂಟಪದ ಸಮೀಪ ದರ್ಗಾ ಕಟ್ಟಿದಾಗ ಇವರುಗಳು ಎಲ್ಲಿದ್ದರು ಅಂತ ಯೋಚನೆ ಬಂತು ?

ಇಲ್ಲಿಂದ ನಾವು ಅರಮನೆ ಕಡೆ ಹೊರಟೆವು .





ಒಳಗಡೆ ಹೋದರೆ ನಿಮಗೆ ದೊಡ್ಡ ವರಾಂಡ ಕಾಣಿಸುತ್ತದೆ . ಎಡದಲ್ಲಿ ಮತ್ತು ಬಲದಲ್ಲಿ ಎರಡು ಕಡೆ ಕಟ್ಟಡವು ಪೂರ್ಣವಾಗಿ ಕಾಲನ  ಪ್ರಕೋಪಕ್ಕೆ ಸಿಲುಕಿ ಕುಸಿದು ಹೋಗಿದೆ. ನೋಡುತ್ತಿದರೆ ಯಾವುದೋ ಒಂದು ಪಾಳು ಬಂಗಲೆಗೆ ಬಂದಂತೆ ಅನಿಸುತ್ತದೆ . ಮುಂದೆ ಹೋದರೆ ಎಡಗಡೆ ಹಾಗು ಬಲಗಡೆ ಒಂದೊಂದು ಮನೆ ಕಾಣಿಸುತ್ತದೆ. ಬಲಗಡೆ  ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು ಅನಿಸುತ್ತದೆ . ಎಡಗಡೆ ಮನೆಯಲ್ಲಿ ರಾಮದೇವರಾಯರು ಸಿಕ್ಕಿದರು. ಅವರು ಎತ್ತರವಾಗಿ, ಬೆಳ್ಳಗೆ ಇದ್ದು ವಯಸ್ಸಾದರೂ ಕೂಡ ರಾಜ ಪರಿವಾರದವರಂತೆ ಕಾಣಿಸುತ್ತಿದ್ದರು .

 ಹಾಗೆಯೆ ಸುಮಾರು ೧೫-೨೦ ನಿಮಿಷ ಅವರೊಂದಿಗೆ ಮಾತನಾಡಿದೆವು . ಅವರ ಮಾತಿನಲ್ಲಿ ವಿಷಾದವಿತ್ತು . - "ಹಂಪೆಯ ಬಗ್ಗೆ ಸರಿಯಾಗಿ ಸಂಶೋಧನೆಗುತ್ತಿಲ್ಲ .... ನಮ್ಮ ದೇಶದ ಯಾವ ಒಬ್ಬ ಸಂಶೋಧಕ ಕೂಡ ಬಂದಿಲ್ಲ (ಒಬ್ಬ ಮೇಲೆಯಾಳಿ ಬಿಟ್ಟು) ಪರದೆಶಗಳಿಂದ ಬಹಳಷ್ಟು ಜನರು ಬರುತ್ತಾರೆ.  ಕೃಷ್ಣದೇವರಾಯನ ವಿಗ್ರಹವನ್ನು ಎಲ್ಲಿ ನೋಡಿದರು ರಾಜಕುಮರನಂತೆ ಕಾಣಿಸುತ್ತದೆ ,  ಅವನ ಒಂದು ಸರಿಯಾದ ಚಿತ್ರವಿಲ್ಲ. ಕೃಷ್ಣದೇವರಾಯನನ್ನು ಬಿಟ್ಟು ಸುಮರ ೨೦ ಮಹಾರಾಜರುಗಲಿದ್ದರು . ಅವರ ಬಗ್ಗೆ ಯಾರಿಗೂ ಗೊತ್ತಿಲ್ಲ." ವಿಜಯನಗರದ ಅರಸರು ಬೆಂಗಳೂರಿನ ಕೆಂಪೇಗೌಡನನ್ನು ಹೊಸ ರೀತಿಯ ನಾಣ್ಯಗಳನ್ನು ಟಂಕಿಸಿದಕ್ಕಾಗಿ  ಬಂದಿಸಿಟ್ಟದ್ದ ತಿಳಿಸಿದರು.  ಆ ಬಿಸಿಲಲ್ಲಿ ಹಂಪೆಯನ್ನು ನೋಡಲು ಬಂದ ನಮ್ಮನ್ನು ಕಂಡು ಆಶ್ಚರ್ಯಗೊಂಡರು . ಇಷ್ಟು ಮಾತನಾಡಿ ಹೊರಟೆವು. ಅರಮನೆಯಾ ಒಬ್ಬರು ಗಂಗಾವತಿಯಲ್ಲಿ ಶಾಸಕರಗಿದ್ದರಂತೆ .
ಸರಕಾರವನ್ನು ಬಿಡಿ, ಇಷ್ಟು ಸೌಲಭ್ಯವಿದ್ದರೂ ಕೂಡ ಇವರುಗಳೇ ಇನ್ನು ಯಾಕೆ ಇನ್ನು ಅರಮನೆಯನ್ನು ರಿಪೇರಿ ಮಾಡಿಸಿಲ್ಲ ಎಂದು ತಿಳಿಯಲಿಲ್ಲ.


                                        

ಅರಮನೆಯ ವೀಡಿಯೊ.

ಅರಮನೆಯ ನಂತರ ನಾವು ಅಂಜನಾದ್ರಿ ಬೆಟ್ಟದ ಕಡೆಗೆ ಹೊರಟೆವು.  ದಾರಿಯಲ್ಲಿ ದುರ್ಗೆಯ ದೇವಸ್ಥಾನ ಕಾಣಿಸುತ್ತದೆ .


 ಅಂಜನಾದ್ರಿ ಬೆಟ್ಟದ ನೋಟ



ಆ ಬೆಟ್ಟದ ಮೆಟ್ಟಿಲನ್ನು ಹತ್ತುತ್ತಲೇ ಹೆಚ್ಚಾಗಿ ಹಿಂದಿ ಮತ್ತು ಇಂಗ್ಲಿಷನಲ್ಲಿ ಬರದ ರಾಮನ ಹೆಸರುಗಳು ಕಾಣುತ್ತವೆ. ಮೇಲೆ ಹೋದಾಗ ಅಂಜನೇಯನ ದೇವಸ್ಥಾನವಿದೆ. ಆ ದೇವಸ್ಥಾನವನ್ನು ಉತ್ತರ ಭಾರತೀಯರು ನಡೆಸುತ್ತಿದ್ದಾರೆ.  ನೀವು ಆನೆಗುಂಡಿಯಲ್ಲಿ ಎಲ್ಲೇ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವನ್ನೂ ನೋಡಿದರೆ - ಅಲ್ಲಿ ಉತ್ತರ ಭಾರತದವರು ದೇವಸ್ಥನವನ್ನು ನಡೆಸುತ್ತಾರೆ .

ನಂತರ ನಾವು ಪಂಪ ಸರೋವರಕ್ಕೆ ಹೋದೆವು  ಇಲ್ಲಿಯೇ ರಾಮನು ಸುಗ್ರೀವ, ಹನುಮಂತನನ್ನು ಸಂಧಿಸಿದ್ದು.




ಪಂಪ ಸರೋವರದ ಒಂದು ವೀಡಿಯೊ


ಇದಾದ ಮೇಲೆ - ಆನೆಗುಂಡಿಯ ಹತ್ತಿರ ಸುಮಾರು ೧೦-೨೦ ಸಾವಿರ ವರ್ಷಗಳು ಹಳೆಯದಾದ ಆದಿ ಮಾನವನ ಗುಹೆ ಹಾಗು ಚಿತ್ರ ರಚನೆಗಳಿವೆ . ಅಲ್ಲಿಗೆ ಹೊರಟೆವು.  ಹಂಪೆಯ ಸುತ್ತಮುತ್ತಲು ಬಂದೆ ಒಡೆಯುವುದು ನಿಷೆದವಿದ್ದರು - ಅದನ್ನು ಉಲ್ಲಂಘಿಸುತ್ತಿರುವ ದೃಶ್ಯ



ಇಲ್ಲಿಂದ ಸ್ವಲ್ಪ ಮುಂದೆ ಹೋಗಿ ರಸ್ತೆಯಲ್ಲಿ ಗಾಡಿ ನಿಲ್ಲಿಸಿದೇವು . ಹೊಲವನ್ನು ದಾಟಿ, ಬಂಡೆಗಳ ಹಿಂದಿನ ಕಿರಿದಾದ ದಾರಿಯಲ್ಲಿ  ಹೋದರೆ ಒಂದು ವಿಶಾಲವಾದ ಪ್ರದೇಶ ಕಾಣಿಸುತ್ತದೆ. ಸ್ವಲ್ಪ ಹುಡುಕಿದರೆ ಆದಿ ಮಾನವನ ಗುಹೆ ಸಿಗುತ್ತದೆ.



ಇದನ್ನು ಮುಗಿಸಿಕೊಂಡು, ಸಣಾಪುರದ ಕೆರೆಗೆ ಹೋಗಿ ಈಜಡಿದೆವು



ಇದಾದ ಮೇಲೆ ಗಂಗಾವತಿಗೆ ಹೋಗಿ ಹುಲಿಗೆಯಮ್ಮ ದೇವಸ್ಥಾನ ನೋಡಿ ತೋರಣಗಲ್ಲಿಗೆ ಹೋದೆವು . ದಾರಿಯಲ್ಲಿ ಹೋಗುವಾಗ ಒಂದು ಹಳ್ಳಿಯಲ್ಲಿ" ಸೂಪರ್ ಸ್ಟಾರ್ ಉಪೇಂದ್ರ " ಅಂತ ಹೋಟೆಲ್ ಸಿಕ್ತು  ;)

ಇಲ್ಲಿಗೆ ಎರಡನೆಯ ದಿನದ ಪ್ರವಾಸ ಮುಗಿಯಿತು. ಇಲ್ಲಿ ಬೇಸರ ತರುವ ಒಂದು ಸಂಗತಿ ಎಂದರೆ ನಾವು ಕೃಷ್ಣ ದೇವ ರಾಯನ ಸಮಾಧಿಯನ್ನು ನೋಡಲು ಮರೆತದ್ದು :(