Monday, March 14, 2011

ಇನ್ನು ಆಸೆ ಬಿಡದ ಅಡ್ವಾಣಿ

ಅಯೋಧ್ಯ ಚಳುವಳಿಯಲ್ಲಿ ಅಡ್ವಾಣಿ ಅವರ ಪಾತ್ರ ಎಲ್ಲರಿಗೂ ಗೊತ್ತಿದೆ . ಅವರ ರಥ ಯಾತ್ರೆಯಿಂದ ದೇಶದೆಲ್ಲೆಡೆ ಹಿಂದುಗಳಲ್ಲಿ ಮೂಡಿದ ಸಂಚಲನ ತಿಳಿದಿದೆ. ಜನ್ಮಸ್ಥಾನ ಮಸಿದಿಯನ್ನು (ಬಾಬ್ರಿ ಮಸಿದಿ)  ಉದುರಿಸುವಾಗಲು ಕೂಡ ಅವರು ಎಲ್ಲರನ್ನು ಉತ್ತೆಜಿಸುತ್ತಿದ್ದರು ...

ಲಿಬೇರ್ಹಾನ್ ಕಮಿಟಿ ಮುಂದೆ ನೀವು - "ಬಾಬ್ರಿ ಮಸಿದಿ ಉರುಳಿಸಿದ್ದು ದುಃಖಕರ ವಿಷಯ" ಎಂದಾಗ ಆರೋಪಿ ಸ್ಥಾನದಿಂದ ತಪ್ಪಿಸಿಕೊಳ್ಳಲು ನೀವು ಮಾಡುತ್ತಿರುವ ಉಪಾಯ ಎಂದುಕೊಂಡೆ.

ಸರಿ ಬಿಡಿ !!! ಈ ನಡುವೆ(ಸುಮಾರು ೪-೫ ವರ್ಷಗಳಿಂದ ) ಅಡ್ವಾಣಿ ಅವರು ಇದೆ ವಿಷಯವನ್ನೂ ಮತ್ತೆ, ಮತ್ತೆ  ಪ್ರಸ್ತಾಪಿಸಿದ್ದಾರೆ .

ಇತ್ತಿಚೀಗೆ ಟ್ವಿಟ್ವಿರ ನಲ್ಲಿಯೂ ಅವರದ್ದು ಇದೆ ಗೋಳು . ಜೊತೆಗೆ ಇನ್ನೊಂದು ಜ್ಞಾನೋದಯ - "ಇದರಿಂದ ಭ.ಜ.ಪ ಪಕ್ಷದ ಪ್ರತಿಷ್ಟೆಗೆ ದಕ್ಕೆ ಬಂದಿದೆ "


ಅಲ್ಲ ಅಡ್ವಾಣಿಯವರೇ ನಿಮಗೆ ಯಾಕೆ - ಪಾಪ ಪ್ರಜ್ಞೆ ?  ಮಸಿದಿ ಮೇಲೆ ಇದ್ದಕ್ಕಿದ್ದ ಹಾಗೆ ಏಕೆ ಪ್ರೀತಿ ?  ಒಂದು ವಿಷಯವನ್ನೂ ಮರೆಯಬೇಡಿ - ಮಸಿದಿ ವಿಷಯದಿಂದಲೇ ನಿಮ್ಮ ಪಕ್ಷವು ಅಧಿಕಾರಕ್ಕೆ ಬಂತು. ನೀವು ರಾಷ್ಟ್ರೀಯ ನಾಯಕರಾದಿರಿ .

ಹೌದು ಮಸಿದಿ ದ್ವಂಸದಿಂದ ಪಕ್ಷಕ್ಕೆ ಲಾಭವಾದರೂ, ನಿಮಗೆ ನಷ್ಟವಾಯಿತು .... ಮಿತ್ರ ಪಕ್ಷಗಳು ಸೌಮ್ಯವಾದಿಯಾದ ವಾಜಪೆಯಿಯನ್ನು ಪ್ರಧಾನಿಯಾಗಿ ಆರಿಸಿದರು.  ಇದರಿಂದ ನಿಮಗೆ ಉಗ್ರವಾದದ ತಪ್ಪು ಅರಿವಾಗಿ ಹೀಗೆ ಮಾಡುತ್ತಿದ್ದಿರಾ?

 ಅಥವಾ ಪಾಕಿಸ್ತಾನದಲ್ಲಿ ಪ್ರವಾಸದಲ್ಲಿ ದೊರೆತ ಆತಿಥ್ಯ ಕಂಡು ಮನಸ್ಸು ಬದಲಾಯಿತೆ?

ನೀವು ಎಷ್ಟೇ ಪಶ್ಚಾತಾಪ ಪಟ್ಟರು - ನಿಮ್ಮ ಮುಂದೆ ಪ್ರಧನಿಯಾಗುವುದಿಲ್ಲ ಅಥವಾ ಇತಿಹಾಸದಲ್ಲಿ ಹಿಂದೂ-ಮುಸಲ್ಮಾನರ ಐಕ್ಯತೆಗೆ ನಿಮ್ಮನ್ನು ಸ್ಮರಿಸುವುದಿಲ್ಲ