Friday, May 27, 2011

ವಿಜಯನಗರದ ಪ್ರವಾಸ - ೧

ಗೆಳೆಯರೇ

ನನಗೆ ೪-೫ ತಿಂಗಳಿಗೊಮ್ಮೆ ಕುಟುಂಬದೊಡನೆ ಪ್ರವಾಸಕ್ಕೆ ಹೋಗುವುದು ವಾಡಿಕೆ.  ಹೀಗೆಯೇ ಮಾರ್ಚಿನಲ್ಲಿ ಎಲ್ಲಿ ಹೋಗುವುದೆಂದು ಯೋಚಿಸುತ್ತಿದಾಗ - ಹಂಪೆಯ ನೆನಪಾಯಿತು.  ಅಂತರ್ಜಾಲದಲ್ಲಿ ಹುಡುಕಿದಾಗ - ಚಿತ್ರಗಳನ್ನೂ ನೋಡಿದಾಗ ಇದು ಪ್ರವಾಸಕ್ಕೆ ಸೂಕ್ತ ಸ್ಥಳವೆಂದು ಖಚಿತವಾಯಿತು.

ಆದರೆ ಗೆಳೆಯರೊಂದಿಗೆ  ಚರ್ಚಿಸಿದಾಗ ತಿಳಿದ ವಿಷಯ : ಮಾರ್ಚ್ - ಮೇ ತಿಂಗಳುಗಳಲ್ಲಿ ಹಂಪೆಯ ಪ್ರವಾಸ ಕಷ್ಟ . ಬಹಳಷ್ಟು ಬಿಸಿಲಿರುತ್ತದೆ ಹಾಗು ಅಲ್ಲಿ ಹೆಚ್ಚು ತಿರುಗಾಡಬೇಕು.  ನನಗೆ ೧ ವರ್ಷದ ಮಗಳಿರುವುದರಿಂದ ಇದು ಸುಲಭವಲ್ಲ. ಅದ್ದರಿಂದ  ಕೆಮ್ಮಣ್ಣುಗುಂಡಿ, ಕುದುರೆಮುಖ, ಮುಳ್ಳಯ್ಯನಗಿರಿಗೆ ಹೋಗಿ ಬಂದೆವು.

ಆದರೆ ನಾನು ಹಂಪೆಯ ಬಗ್ಗೆ ನಾನು ತಿಳಿದು ಕೊಂಡಿದ್ದು , ಓದಿದ್ದು ಮನಸ್ಸಿನಲ್ಲಿಯೇ ಉಳಿಯಿತು. ಹಂಪೆಗೆ ಹೋಗಲು ಸ್ನೇಹಿತರನ್ನು ಹುಡುಕತೊಡಗಿದೆ.  ಮೇ ಸಮಯದಲ್ಲಿ ಸುಮಾರು ೪೦ - ೪೨ ಡಿಗ್ರಿ ಬಿಸಿಲಿರುತ್ತದೆ. ಅಂತಹ ಸಮಯದಲ್ಲಿ ೩ ದಿವಸ ತಿರುಗಾಡಲು ನನ್ನಂತೆಯೇ ಆಸಕ್ತಿಯಿರುವ ಜನರೇ ಬೇಕು.  ಏಪ್ರಿಲ್ ನಲ್ಲಿಯೇ ೪ ಜನರನ್ನು ಹುಡುಕಿ ನಮ್ಮ ರೈಲ್ವೆ ನಲ್ಲಿ ಟಿಕೆಟ್ ಬುಕ್ ಮಾಡಿದೆ. ಕೊನೆ ಘಳಿಗೆಯಲ್ಲಿ ಇಬ್ಬರು ಗೆಳೆಯರು ಕೈ ಕೊಟ್ಟ ಕಾರಣ, ನಾವು ಮೂವರು ಸ್ನೇಹಿತರು ಗುರುವಾರ ಹೊರಟೆವು.

ದಿನ  ೧:
ಅಲ್ಲಿ ಮರುದಿನ ಬೆಳಿಗ್ಗೆ ಹಂಪೆಯಿಂದ ಸುಮಾರು ೨೦ ಕಿಲೋಮೀಟರು ದೂರವಿರುವ ತೋರಣಗಲ್ಲಿನಲ್ಲಿ ಪರಿಚಯಸ್ಥರ ಮನೆಯಲ್ಲಿ ಉಳಿದು ಕೊಂಡೆವು.

ನಾವುಗಳು ಎರಡು ಬೈಕು ಗಳನ್ನೂ ಪಡೆದು ಕಮಲಾಪುರವನ್ನು ಮುಟ್ಟಿದಾಗ ೧೧ ಗಂಟೆ . ಅಲ್ಲಿಂದ ಹಂಪೆಯನ್ನು ಪ್ರವೇಶಿಸುತ್ತಿದ್ದಂತೆ ದೊಡ್ಡ ದೊಡ್ಡ ಕಲ್ಲಿನ ಕಟ್ಟಡಗಳು, ಗೋಡೆಗಳು ನಮ್ಮನ್ನು ಇನ್ನೊಂದು ಲೋಕಕ್ಕೆ ಕರೆದೊಯ್ದವು.

ವಿರೂಪಾಕ್ಷ ದೇವಸ್ಥಾನ ಮುಟ್ಟುತ್ತಿದಂತೆ guide ಗಳು ನಿಮ್ಮ ಹಿಂದೆ ಬೀಳುತ್ತಾರೆ.  ವಿರೂಪಾಕ್ಷ ದೇವಸ್ಥಾದ ಗೋಪುರ ಇತರೆ ಹೊಯ್ಸಳರ ದೇವಾಲಯದ ಗೋಪುರದಂತೆಯೇ ಇದೆ



ಒಳಗೆ ಹೊಕ್ಕ ತಕ್ಷಣ ನಿಮಗೆ ಬಲಗಡೆ - ವಿಜಯನಗರದ ರಾಜ ಲಾಂಛನ ದೊರೆಯುತ್ತದೆ . ಆಶ್ಚರ್ಯವೆಂದರೆ ಇವರ ಲಾಂಛನವು, ಬಾದಾಮಿ  ಚಾಲುಕ್ಯರ ಲಾಂಛನವನ್ನೂ ಬಹಳಷ್ಟು ಹೋಲುತ್ತದೆ.  (ಎರಡರಲ್ಲಿಯೂ ವರಾಹ, ಸೂರ್ಯ ಹಾಗು ಚಂದ್ರರಿದ್ದಾರೆ)

ವಿರೂಪಾಕ್ಷ ದೇವಾಲಯದಲ್ಲಿ ಕಾಣುವ ಲಾಂಛನ


ಎಡಕ್ಕೆ ತಿರುಗಿದರೆ ನಿಮಗೆ ಸಭಾ ಮಂಟಪ ಸಿಗುತ್ತದೆ

ದೇವಸ್ಥಾನಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಇಲ್ಲಿಯ ವಿರೂಪಕ್ಷನನ್ನು ಶ್ರೀ ರಾಮನೆ ಪೂಜಿಸಿದ್ದಾನೆ ಎನ್ನುತ್ತಾರೆ. ಪಕ್ಕದಲ್ಲಿ ಭುವನೇಶ್ವರಿಯ ದೇವಾಲಯವಿದೆ.  ಅದರ ಪಕ್ಕದಲ್ಲಿ ಸ್ವಲ್ಪ ಕೆಳಗೆ ಇಳಿದರೆ ವ್ಯಾಸರಾಯರು (ಶೈವರ ಹಾಗೂ ವೈಷ್ಣವರ ನಡುವಿನ ಸಮರಸಕ್ಕಾಗಿ ) ಸ್ಥಾಪಿಸಿದ ವಿಷ್ಣು ಹಾಗು ಶಿವ ಲಿಂಗವಿದೆ.

ವಿರೂಪಾಕ್ಷ ದೇವಾಲಯದ ಮುಂದೆ ಒಂದು ಮಂಟಪವಿದೆ.  ಆದರೆ ಮುಂದೆ ಶ್ರೀ ಕೃಷ್ಣದೇವರಾಯ ಕನ್ನಡದಲ್ಲಿ ಬರೆಯಿಸಿದೆ ಶಾಸನವಿದೆ. ಕೃಷ್ಣದೇವರಾಯ ಮೂಲತಃ ಕನ್ನಡಿಗ. ಅವನ ತಂದೆ ತುಳು ನಾಡಿನ - ನರಸ ನಾಯಕ, ಅವನು ತೆಲುಗನ್ನು ಪೋಷಿಸಿದ್ದರಿಂದ ಅವನನ್ನು ಕೆಲವರು ತೆಲುಗಿನವನೆಂದು ತಪ್ಪಾಗಿ ತಿಳಿಯುತ್ತಾರೆ. ನಮ್ಮ guide (ಅವನಿಗೆ ರೂ.೧೦೦೦ ಕೊಟ್ಟಿದ್ದೆವು ) ಕೂಡ ಕೃಷ್ಣದೇವರಾಯ ತೆಲುಗಿನವನೆಂದು ಹೇಳಿದಾಗ ಮೇಲಿನದನ್ನು ಅವನಿಗೆ ತಿಳಿಸಿದೆ.

ದೇವಾಲಯದ ಹೊರಗೆ ಬಂದ ಬಲಗಡೆ ಬೆಟ್ಟದ ಮೇಲೆ ಹಲವಾರು ದೇವಾಲಯಗಳು ಕಂಡು ಬಂದವು. ಆಸಕ್ತಿಯಿದ್ದರೂ ಕೂಡ ಸಮಯದ ಅಭಾವ ಅವುಗಳನ್ನೂ ನೋಡಲಾಗಲಿಲ್ಲ.

ನಂತರ ನಾವು ಬಲಗಡೆ ರಸ್ತೆಯಲ್ಲಿ ಮೇಲೆ ಬಂದರೆ - ಕಡಲೆ ಕಾಲು ಗಣೇಶ ದೊರೆಯುತ್ತದೆ
ಹೊರಗಿನ ದೇವಾಲಯ:

ನಮ್ಮ  ಗಜಾನನ ವಿಗ್ರಹ: ೨೧ ಅಡಿ ಎತ್ತರವಿದೆ.
  ದೇವಾಲಯದ  ಕಂಬದಲ್ಲಿ ಇದ್ದ ಚಿತ್ರ  (ಅರಬ್ಬನಂತೆ ಇದೆ)


 ದೇವಾಲಯದ ಮುಂದೆ ಬಂದು ಬಲಕ್ಕೆ ತಿರುಗಿದಾಗ ಒಂದು ದ್ವಾರ ದೊರೆಯುತ್ತದೆ. ಇಲ್ಲಿ ನೀವು ನೋಡುವ ಕಲ್ಲಿನ ಹಾಸುಗಳು ಹಳೆಯ ಕಾಲದ್ದೆ.


 ಮುಂದೆ ನಡೆದಾಗ ಕಂಡ ಶಿವನ ದೇವಾಲಯ ಹಾಗು ಅದರ ಮುಂದಿರುವ ಭಗ್ನ ಗೊಂಡ ನಂದಿ ವಿಗ್ರಹ . ಮತ್ತು ಮುಂದೆ ನಡೆದಾಗ - ಬಂಡೆಯಲ್ಲಿ ಗಣೇಶ ಸುಂದರ ಕೆತ್ತನೆಯು ಕಂಡಿತು.  ಹಂಪೆಯಲ್ಲಿ ನೀವು ಎಲ್ಲೇ ಕಣ್ಣಾಡಿಸಿದರೂ ಅಲ್ಲಿ ಕಲ್ಲಿನಲ್ಲಿ ಒಂದು ಕೆತ್ತನೆಯೋ ಅಥವಾ ಕಟ್ಟಡವೂ ಕಾಣಿಸಿಯೇ ತಿರುತ್ತದೆ. ಇಲ್ಲಿನ ಪ್ರತಿಯೊಂದು ಕಲ್ಲು ಕೂಡ ಒಂದು ಸಾಮ್ರಾಜ್ಯದ ಗತ ವೈಭಬವನ್ನು ಹೇಳುತ್ತದೆ.

ಒಂದು ಬಂಡೆಯಲ್ಲಿ ಕೆತ್ತಿದ ಗಣೇಶ ಮೂರ್ತಿ


ಮುಂದೆ  ನಾವು ಸಾಸಿವೆ ಕಾಲು ಗಣೇಶ ವಿಗ್ರಹವನ್ನು ನೋಡಿದೆವು . ಇದು ಸುಮಾರು ೯ ಅಡಿ ಎತ್ತರವಿದೆ.


ಈ ಸಾಸಿವೆ ಕಾಳು ಹಾಗೋ ಕಡಲೆ ಕಾಳು ಗಣೇಶ ವಿಗ್ರಹಗಳನ್ನು ಒಬ್ಬ ವ್ಯಾಪಾರಿಯು ಆ ಕಾಳುಗಳ ವ್ಯಾಪಾರದಿಂದ ಬಂದ ಲಾಭದಲ್ಲಿ ಕಟ್ಟಿಸಿದನೆಂದುಹೇಳುತ್ತಾರೆ.

ಗಣೇಶನ ವಿಗ್ರಹದ ಎಡಭಾಗದಲ್ಲಿ ವಿಷ್ಣುವಿನ ಪಾದದ ಗುರುತಿದೆ.   ಸಾಸಿವೆಕಾಳು ಗಣಪನ ಬಲಕ್ಕೆ ಒಂದು ಹೇಮಾ ಕೂಟ ಗುಡ್ಡವಿದ ಅದು ಸೈನಿಕರ check post ನಂತೆ ತೋರುತ್ತತೆ . ಒಳಗೆ ಹೋದಾಗ ಅಲ್ಲಿ ಒಂದು ಎರಡು ಮಹಡಿಯ ಮಂಟಪವಿದೆ.


ಆ ಮಂಟಪ ಮೇಲಿನಿಂದ ತೆಗೆದ ವೀಡಿಯೊ

ಹೇಮಕೂಟದಿಂದ ವಿರೂಪಾಕ್ಷ ದೇವಾಲಯಕ್ಕೆ ತಿರುಗಿ ಹೋಗುವ ದಾರಿಯಲ್ಲಿ ಬಹಳಷ್ಟು ಕಟ್ಟಡಗಳಿವೆ. ಅವುಗಳನ್ನೂ ನಾವು ಸಮಯದ ಅಭಾವದಿಂದ ನೋಡಲಾಗಲಿಲ್ಲ .

ಮುಂದೆ ನಾವು ಬಾಲ ಕೃಷ್ಣ ದೇವಾಲಯಕ್ಕೆ ಹೋದೆವು. ಇದನ್ನು ಕ್ರಿಷ್ಣದೆವರಾಯನು ತನ್ನ ಉತ್ಕಲದ ಸಾಮ್ರಾಜ್ಯದ ವಿಜಯದ ನೆನೆಪಿಗಾಗಿ ಕಟ್ಟಿಸಿದ್ದು. ಒಳಕ್ಕೆ ಹೋದಾಗ ಗರ್ಭ ಗುಡಿಯಲ್ಲಿ ಬಹಳ ಕತ್ತಲಿತ್ತು. ನಾವು ಸ್ನೇಹಿತರು ಚಪ್ಪಲಿಗಳನ್ನು ಬಿಟ್ಟು, ಗರ್ಭ ಗುಡಿಯೊಳಗೆ ಹೋದೆವು. ಕಾಲಿಗೆ ಪಾಚಿಯಂತೆ ಭಾಸವಾಗುತ್ತಿತ್ತು .  ಸುಮ್ಮನೆ ನಮ್ಮ ಮೊಬೈಲ್ ನ ಬೆಳಕನ್ನು ಬಿಟ್ಟು ಮೇಲೆ ನೋಡಿದಾಗೆ  ಚಾವಣಿಯನ್ನು ಬಾವುಲಿಗಳು ಪೂರ್ಣವಾಗಿ ಆವರಿಸಿದ್ದವು . ನಮ್ಮ ಕಾಲಿಗೆ ತಾಕಿದ್ದು ಪಾಚಿಯಲ್ಲ, ಅವುಗಳ ಹಿಕ್ಕೆ ಎಂದು ತಿಳಿದು ತಕ್ಷಣ ಹೊರಗೆ ಓಡಿ ಬಂದೆವು. ದೇವಾಲಯದ ಎಡಗಡೆ ,  ಧಾನ್ಯ ಸಂಗ್ರಹಾರವಿದೆ. ಇದು  ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿದೆ . ದೇವಾಲಯದ ಸುತ್ತಲು ಎತ್ತರದ ಗೋಡೆಗಳಿವೆ

ಬಾಲ ಕೃಷ್ಣನ ದೇವಾಲಯದ ದ್ವಾರದ ಗೋಪುರ

ದೇವಾಲಯದ ಮುಂದೆ - ಮಾರುಕಟ್ಟೆಯನ್ನೂ ನೋಡಬಹುದು. ಈಗಲು ಇದರ ಉತ್ಖನ ಪ್ರಗತಿಯಲ್ಲಿದೆ

ಈ ಮಾರುಕಟ್ಟೆ ಎಡಬದಿಯಲ್ಲಿ ಒಂದು  ಸುಂದರವಾದ ಪುಷ್ಕರನಿಯಿದೆ.

ನಂತರ ನಾವು ಹೋಗಿದ್ದು - ನರಸಿಂಹ ಹಾಗು ಬಡವಿ ಲಿಂಗ ನೋಡಲು. ದಾರಿಯಲ್ಲಿ ಸೋಡಾ ಕುಡಿಯಲು ಹೋದಾಗ ಗಾಡಿಯವನ ಹತ್ತಿರ, ದುಡ್ಡಿನ ಪೆಟ್ಟಿಗೆಯಲ್ಲಿ ಒಂದು ಸುಂದರವಾದ ಗಣೇಶ ಲೋಹದ ವಿಗ್ರಹವಿತ್ತು . ಮುಸ್ಲಿಮನಾದ ಅವನ ಹತ್ತಿರ ಆ ವಿಗ್ರಹವನ್ನು ಕಂಡು ಇಲ್ಲೆಯೇ ಎಲ್ಲೋ ಸಿಕ್ಕಿರಬೇಕು ಎಂದು ಕೊಂಡೆವು.

ಉಗ್ರ ನರಸಿಂಹ
ಉಗ್ರ  ನರಸಿಂಹನನ್ನು ಕೆಲವರು ಲಕ್ಷ್ಮಿ ನರಸಿಂಹ ಎನ್ನುತ್ತಾರೆ  . ಇಲ್ಲಿ ಲಕ್ಷಿ ವಿಗ್ರಹವನ್ನು ನಾಶ ಮಾಡಲಾಗಿದೆ ಎನ್ನುತ್ತಾರೆ. (ಆದರೆ ಇದು ಉಗ್ರ ನರಸಿಂಹನ ಮೂರ್ತಿ ಎನ್ನುವುದಕ್ಕೆ ನಮಗೆ ರಾಮನ ದೇವಸ್ಥಾನದಲ್ಲಿ ಇದೆ ಮೂರ್ತಿಯ ಸಣ್ಣ ಪ್ರತಿಕೃತಿ ದೊರೆಯುತ್ತದೆ )


ಸದಾ ನೀರಿನಲ್ಲಿ ಮುಳುಗಿರುವ ಬಡವಿ ಲಿಂಗ


ಇಲ್ಲಿಂದ ಮುಂದೆ ನಾವು ಅಕ್ಕ - ತಂಗಿ ಕಲ್ಲುಗಳನ್ನೂ ನೋದುವಷ್ಟರಲ್ಲಿ ಊಟದ ಸಮಯವಾಗಿತ್ತು .  ಕಮಲಾಪುರಕ್ಕೆ ಹಿಂತಿರುಗಿ ಊಟಕ್ಕೆ ಹೋದೆವು.

ಊಟದ ನಂತರ ನಾವು ಹೋಗಿದ್ದು ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋದೆವು .   ದೇವಸ್ಥಾನಕ್ಕೆ ಸುಮಾರು ೧.೫ ಕಿಲೋಮೀಟರು ದೂರದಲ್ಲಿ ಗಡಿಯನ್ನು ನಿಲ್ಲಿಸಿ ರೂ ೨೦ ಟಿಕೆಟ್ ತೆಗೆದುಕೊಂಡು ಬ್ಯಾಟರಿ ಗಡಿಯಲ್ಲ್ಲಿ ಹೋಗಬೇಕು. ದೇವಸ್ಥಾನಕ್ಕೆ ಹೋಗುವಾಗ ದಾರಿಯ ಎರಡು ಕಡೆಗಳಲ್ಲೂ ಇರುವ ಕಲ್ಲಿನ ಹಾಸುಗಳು ಹಾಗು ಕಲ್ಲಿಂದ ರಚನೆಗಳನ್ನೂ ನೋಡಿ ಇದು ಒಂದು ಪ್ರಮುಖ ಬಿದಿಯಾಗಿತ್ತೆಂದು ತೋರುತ್ತದೆ.


ವಿಜಯ ವಿಠ್ಠಲ ದೇವಾಲಯ

ವಿಜಯ ವಿಠ್ಠಲ ದೇವಾಲಯಕ್ಕೆ ಹೋಗುವ ದಾರಿ
ದೇವಾಲಯದ ಪಕ್ಕದಲ್ಲಿರುವ ಕಟ್ಟಡ 


ಒಳಗೆ ಹೋದರೆ, ಬಲದಲ್ಲಿ ಪುರಂದರ ಮಂಟಪ ಸಿಗುತ್ತದೆ, ಎಡಕ್ಕೆ ಒಂದು ಮಂಟಪವಿದೆ .  ದೇವಾಲಯದ ಮುಂದಿನ ಭಾಗ ಪೂರ್ಣ ಬಿದ್ದೆ ಹೋಗಿದೆ.  ಬಲಭಾಗದಲ್ಲಿ ಸಂಗೀತದ ಕಂಬಗಳಿವೆ. (ಅದನ್ನು ನಮಗೆ ಮುಟ್ಟಲು ಬಿಡಲಿಲ್ಲ)

ವಿಜಯ ವಿಠ್ಠಲ ದೇವಾಲಯ

ನಾನು ವಿಜಯ ವಿಠ್ಠಲ ದೇವಾಲಯದೊಳಗೆ ತೆಗೆದ ವೀಡಿಯೊ




ದೇವಾಲಯ ಹೊರಗೆ ಬಲಗಡೆ - ಇನ್ನುಎರಡು ದೇವಾಲಯಗಳಿವೆ. ಅವುಗಳ ಹೆಸರು ನಮಗೆ ಗೊತ್ತಾಗಲಿಲ್ಲ
ವಿಜಯ ವಿಠ್ಠಲ ದೇವಾಲಯದ ಬಲ ಭಾಗಕ್ಕಿರುವಇನ್ನೊಂದು ಕಟ್ಟಡ . ಇದರ ಬಲಭಾಗದಲ್ಲಿ ಮತ್ತೊಂದು ದೇವಾಲಯವಿದೆ

ಇಲ್ಲೇ ಬಳಗದೆಯೇ - ಕೃಷ್ಣ ದೇವರಾಯ ಕಾಲದ ಚಿನ್ನದ ನಿಧಿಯು ದೊರೆತ್ತಿದ್ದು (ನಾವು ಹೋಗುವುದಕ್ಕೆ ಎರಡು ವಾರಗಳ ಮುಂಚೆ )

ನವರಾತ್ರಿ ದಿಬ್ಬದ ಕಡೆಗೆ ಹೊರಟೆವು . ದಾರಿಯಲ್ಲಿ - ರಾಣಿಯ ಸ್ನಾನದ ಮನೆಯ ನೋಡಿಕೊಂಡು ಹೋದೆವು

ನವರಾತ್ರಿ ದಿಬ್ಬವು ಒಂದು ಅರಮನೆಯ ಪ್ರದೇಶವೆಂದು ಗುರುತಿಸುತ್ತಾರೆ . ಇದೊಂದು ವಿಶಾಲವಾದ ಪ್ರದೇಶ. ಇಲ್ಲಿ ಸುಮಾರು ೩ ತರಹದ ಕಲ್ಲುಗಳನ್ನೂ ನೋಡಬಹುದು - ಮೊದಲನೆಯದು ಸಮನ್ಯವಾಗಿ ಎಲ್ಲ ಕಡೆ ಸಿಗುವನ್ತಹದ್ದು . ಎರಡನೆಯದು - ಹಸಿರು ಬಣ್ಣದ್ದು ಮೂರನೆಯದು ಗ್ರಾನೈಟ್ ಬಣ್ಣದ್ದು .

ನವರಾತ್ರಿ ದಿಬ್ಬದಲ್ಲಿ ಕಾಣುವ ವಿವಿಧ ಪ್ರಾಣಿಗಳು. ಇಲ್ಲಿ ಒಂಟೆಯನ್ನೂ ಸಹ ನೋಡಬಹುದು

ದಿಬ್ಬದ ಒಂದು ನೋಟ

ಅರಮನೆಯಲ್ಲಿ ಕೇಳಿಗೆ ಇರುವ ಒಂದು ಕೊಟ್ಟಡಿಯ ದಾರಿ

ಪುಷ್ಕರಣಿ

ಅರಮನೆಯ ಒಂದು ದೃಶ್ಯಾವಳಿ

ಮತ್ತೊಂದು: ಇದರಲ್ಲಿ ಹಂಪೆಯ  ಅತೀ ದೂಡ್ಡ ಈಜು  ಕೊಳವಿದೆ



ಮಹಾನವಮಿ  ದಿಬ್ಬದ ಮುಂದೆ ಹೋದರೆ ಕಮಲ್ ಮಹಾಲಕ್ಕೆ ಮುಟ್ಟುತ್ತೇವ. ಅಲ್ಲಿನ ಕೆಲವು ಚಿತ್ರಗಳು 


ಇದೆ ಕಮಲ್ ಮಹಲ್ . ಇದರಲ್ಲಿ ಗೋಡೆಗಳಲ್ಲಿ ತಣ್ಣೀರು ಹರಿಸಿ ತಂಪಾಗಿರುತ್ತದೆ



ಕೋಟೆಯ ನಾಲ್ಕು ಮೂಲೆಗಳಲ್ಲಿರುವ "gaurd tower"

ಇನ್ನೊಂದು ಟವರ್

ಮತ್ತೊಂದು
ಅಳಿದಿರುವ ರಾಣಿಯ ಅರಮನೆ
ರಾಣಿ ಅರಮನೆಯ ಪಕ್ಕದಲ್ಲಿ ಆನೆ ಲಾಯವಿದೆ. ಇಲ್ಲಿ ಹನ್ನೊಂದು ಪಟ್ಟದ ಆನೆಗಳನ್ನು ಇಡುತ್ತಿದ್ದರು
ಆನೆ ಲಾಯ

ಕುದುರೆ ಲಾಯ
ಇಷ್ಟು ಮುಗಿಸುವುದರ ಹೊತ್ತಿಗೆ ಸಂಜೆ ಸುಮಾರು ೪ ಗಂಟೆಯಾಗಿತ್ತು. ಇಲ್ಲಿಂದ ನಾವು ಹಜಾರ ರಾಮ ದೇವಸ್ಥಾನಕ್ಕೆಬಂದೆವು.

ಇದೊಂದು ಪ್ರಶಾಂತ ವಾಗಿರುವ ಸುಂದರ ದೇವಾಲಯ. ಹೊರಗೆ ದಸರಾ ಸಮಯವನ್ನೂ ವರ್ಣಿಸುವ ಕೆತ್ತೆನೆಗಳಿವೆ. ಇಲ್ಲಿ ರಾಮಾಯಣದ ಬಹಳಷ್ಟು ಕೆತ್ತನೆಗಳಿವೆ
ದಸರಾ ವೈಭವದ ಕೆತ್ತನೆಗಳು

ದೇವಾಲಯದ ಹಿಂದಿರುವ ಮಂಟಪ

ಇದು ಏನೆಂದು ನನಗೆ ಗೊತ್ತಾಗಲಿಲ್ಲ. ಇದು ಹಂಪೆಯಲ್ಲಿ ಬಹಳಷ್ಟು ದೇವಾಲಯಗಳಲ್ಲಿ ಕಾಣಿಸುತ್ತದೆ.

ರಾಮನ ದೇವಾಲಯದ ಹಿಂದಿರುವ ಚಿತ್ರ. ಬುದ್ದನದೋ ? ಜೀನನದೋ ಗೊತ್ತಿಲ್ಲ

ಕಲ್ಕಿ ಅವತಾರದ ಚಿತ್ರ

ನಾನು ಮೇಲೆ ಹಾಕಿರುವ ಉಗ್ರ ನರಸಿಂಹನ ಸಣ್ಣ ಪ್ರತಿರೂಪ 

ಹಜಾರ ರಾಮ ಮಂದಿರದಲ್ಲಿ ಕೆಲವು ಮುಸ್ಸಲ್ಮಾನರು ಬಂದು ನಮಾಜು ಮಾಡಲು ಶುರುಮಾಡಿದ್ದರಂತೆ. ಇಲ್ಲನ ಆಡಳಿತವು ಎಚ್ಚೆತ್ತುಕೊಂಡು ಅದನ್ನು ನಿಲ್ಲಿಸಿದೆ. ಇಷ್ಡು ಮುಗಿಸಿ ನಮ್ಮ guide ಹೊರಟ. ನಾಳೆ ಕರೆದರೆ ಏನೇನು ತೋರಿಸುವನೆಂದು ಕೇಳಿ, ಬರೆಸಿಕೊಂಡು ;) ಕಳುಹಿಸಿ ಕೊಟ್ಟೆವು

ದೇವಸ್ಥಾನದ ಮುಂದೆ ಪಾನ್ ಸುಪಾರಿ ರಸ್ತೆಯಿದೆ . ಅಲ್ಲಿ ತುಂಬ ಕಟ್ಟಡಗಳ ಅವಶೇಶವನ್ನು ನೋಡಬಹುದು
ಪಾನ್ ಸುಪಾರಿ ರಸ್ತೆ
 ಮುಂದೆ ಹಾಗೆಯೇ ಹೋದಾಗ ಒಂದು ದೇವಾಲಯದಲ್ಲಿ ಮಾಂಸದ ಅಡಿಗೆ ಮಾಡುತ್ತಿರುವುದು ಕಂಡಿತು.  ಸ್ಪಷ್ಟವಾಗಿ ಬೋರ್ಡ್ ಹಾಕಿದ್ದರು ಕೂಡ, ನಿಯಮವನ್ನು ಮಿರಿದ್ದರು.  ಇದನ್ನು ನಿಲ್ಲಿಸಬೇಕೆಂದು ೧೦೦ ಗೆ ಫೋನ್ ಮಾಡಿದರ, ಆ ಮೂಲೆಯಲ್ಲಿದ್ದವರು , ಫೋನ್ ಕಟ್ ಮಾಡುತ್ತಿದರು :( .  ಹೀಗೆ ಆದರೆ ಹಂಪೆ ಉಳಿದಂತೆಯೇ ...  ಮುಂದೆ ಒಬ್ಬಕಾವಲುಗಾರನನ್ನು ಕೇಳಿದಾಗ - ಇದುಮಾಮೂಲು ಸಾಹೇಬರೇ..  ಆ ಒಂದು ದೇವಸ್ಥಾನದಲ್ಲಿ ಅವರು ಅಡುಗೆ ಮಾಡಲು ಅವಕಾಶವಿದೆ ಎನ್ನುವ ಉತ್ತರ


ಕುರಿ/ಮೇಕೆ ಮಾಂಸ ನೆತಾದುತ್ತಿರುವುದು


ಪಾನ್ ಸುಪಾರಿ ರಸ್ತೆಯ ಕೊನೆಯಲ್ಲಿ ಕಂಡ ಮಂಟಪ
 
ಇಲ್ಲಿಗೆ ನಮ್ಮ ಮೊದಲನೆಯ ದಿನದ ಪ್ರವಾಸ ಮುಗಿತು.  ಮುಂದಿನದನ್ನು ಮತ್ತೊಂದು ಬ್ಲಾಗಿನಲ್ಲಿ ಬರೆಯುವೆ.