Monday, August 9, 2010

ಭಾವಸಾರ ಕ್ಷತ್ರಿಯರು, ನನ್ನ ಸ್ನೇಹಿತ ಹಾಗೂ ಕನ್ನಡ

ನನಗೆ ಇತಿಹಾಸ ಓದುವುದು, ರಾಷ್ಟ್ರಗಳ ಬಗ್ಗೆ ತಿಳಿಯುವ ಹವ್ಯಾಸ. ಹೀಗೆಯೇ ನಾನು ಪಾಕಿಸ್ತಾನದ, ಹಿಂದೂ ಚರಿತ್ರೆಯ ಬಗ್ಗೆ ಸ್ವಲ್ಪ ಓದಿದ್ದೇನೆ.  ಅಲ್ಲಿ ಇರಾನ್ ಪಕ್ಕ ಇರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ  "ಹಿಂಗಲ್ಗಂಜ್ ಮಾತೆ" ಅನ್ನುವ ಒಂದು ಪ್ರಸಿದ್ಧ ಯಾತ್ರ ಸ್ಥಳವಿದೆ. 

ನನ್ನ ಕಚೇರಿಯಲ್ಲಿ, ನನ್ನ ಒಬ್ಬ ಸ್ನೇಹಿತನಿದ್ದ. ಕೂತೊಹಲದಿಂದ ಅವನ ಬಗ್ಗೆ ವಿಚಾರಿಸಿದಾಗ ಅವನ್ದು "ಭಾವಸಾರ ಕ್ಷತ್ರಿಯ" ಪಂಗಡ ಅಂತ ಹೇಳಿದ.  ಮುಂದೆ  ವಿಚಾರಿಸಿದಾಗ ಅವರ ಮನೆ ದೇವರು "ಹಿಂಗಲ್ಗಂಜ್ ಮಾತೆ",  ಎಂದ . 
ಒಂದು ಕ್ಷಣ ನನಗೆ ಆಶ್ಚರ್ಯ !!! .  ಇರಾನಿನ ಗಡಿಯಲ್ಲಿ, ಪಾಕಿಸ್ತಾನದಲ್ಲಿ ಇರುವ ದೇವತೆ, ಇವರ ಮನೆ ದೇವರು. ತಕ್ಷಣ ನಾನು "ಹಿಂಗಲ್ಗನ್ಜಾ ?" ಎಂದು ಜೋರಾಗಿ ಕೇಳಿದೆ.  ನಾನು ಆ ರೀತಿ ಹೇಳಿದ್ದಕ್ಕೆ ಅವನಿಗೂ ಆಶ್ಚರ್ಯವಾಯಿತು.

ಅಯ್ಯೋ ಇವರು ಸಾವಿರಾರು ಕಿಲೋಮೀಟರು ದೂರವಿರುವ ಕನ್ನಡ ನಾಡಿಗೆ, ಯಾವಗ ಎಲ್ಲಿಂದ ಬಂದರಪ್ಪ ಅಂತ ಯೋಚನೆ ಬಂತು. ಅದಕ್ಕೆ ಅವನಿಂದ ಉತ್ತರ ದೊರೆಯಲಿಲ್ಲ. ಬಹುಶಃ ೭ನೇ ಶತಮಾನದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಆಕ್ರಮಣ ಹಾಗೊ ಮತಾಂತರ ಶುರು ಮಾಡಿದಾಗೆ, ಇವರ ವಲಸೆ ಶುರುವಾಗಿರಬಹುದು ಎಂದುಕೊಂಡೆ.

ಇವರಂತೆ ದೇಶ ಬಿಟ್ಟ ಇಸ್ರೇಲಿಗಳ ನೆನಪಾಯಿತು. ಕೇಳಿದೆ "ನಿಮ್ಮ ಜನರಿಗೆ ಇಸ್ರೆಲಿಗಳಂತೆ ಪುನಃ ನಿಮ್ಮ ದೇಶಕ್ಕೆ ಮರುಳಲು ಅಸಕ್ತಿಯಿಲ್ಲವೇ, ಇಷ್ಟವಿಲ್ಲವೇ?"

ಅವನೆಂದ - "ಅದೆಲ್ಲ ನನಗೆ ಗೊತ್ತಿಲ್ಲ, ಯೋಚನೆಯೂ ಇಲ್ಲ. ಈಗ ನಾನೊಬ್ಬ ಅಪ್ಪಟ ಕನ್ನಡಿಗ"
ಆಗ ಅವನು ಕೊಟ್ಟ ಉತ್ತರ ಕೇಳಿ ನನಗೆ ಖುಷಿಯೂ ಆಯಿತು (ಎಲ್ಲಿದಲೋ ಬಂದ ವಲಸೆ ಜನರು ನಮ್ಮಲ್ಲಿ ಬೆರೆತಿರುವ ಬಗ್ಗೆ ) , ಸ್ವಲ್ಪ ಬೇಜಾರೂ ಕೂಡ ಆಯಿತು(ಅವನಿಗೆ ತನ್ನ ಪೂರ್ವಜರ ಭೂಮಿಯ ಬಗ್ಗೆ ಇರುವ ಅನಾದರ).


ಇನ್ನೊಂದು ವಿಷಯ: ಬಸವನಗುಡಿಯಲ್ಲಿಯೇ "ಭಾವಸಾರ ಕ್ಷತ್ರಿಯ ಬ್ಯಾಂಕ್" ಇದ್ದರೂ, ಅದರ ಜನರ ಬಗ್ಗೆ , ನನ್ನ ಗೆಳೆಯನೊಂದಿಗೆ ಮಾತನಾಡುವವರೆಗೂ ತಿಳಿದಿರಲಿಲ್ಲ.

No comments:

Post a Comment