Monday, January 16, 2012

Bidar

ಮಧ್ಯ, ದಕ್ಷಿಣ, ಕರಾವಳಿ ಕರ್ನಾಟಕ ಕಂಡಿದ್ದ ನನಗೆ ಉತ್ತರ ಕರ್ನಾಟಕ ಒಂದು ಬಾಕಿ ಉಳಿದಿತ್ತು.

ಸರಿ ಬೀದರ್, ಗುಲ್ಬರ್ಗಾ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ಕೆಲವು ಜಾಗಗಳನ್ನು ರೈಲ್ವೇ ಟಿಕೆಟ್ ಬುಕ್ ಮಾಡಿದೆ

ಬೆಂಗಳೂರಿನಿಂದ ಬೀದರ್ ಗೆ ರೈಲಿನಲ್ಲಿ ಸುಮಾರು 15 ಗಂಟೆ ಪ್ರಯಾಣ. ರೈಲಿನಲ್ಲಿ ನನ್ನ ಒಂದು ಅನುಭವ. ಬೆಳಗ್ಗೆ 8 ಗಂಟೆ ಗೆ ಎದ್ದಾಗ  ನನಗೆ ಸಿಕ್ಕಿದ್ದು ಬಸವನಗುಡಿ ಯಲ್ಲಿ , ಹೋಮಿಯೋಪತಿ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ. ಅವನು ಮೂಲತಃ  ಬಿದರಿನವನು.  ಒಬ್ಬ ಕ್ರೈಸ್ತ. ಅವನೊಂದಿಗೆ ಸುಮಾರು 40 ಜನ  ಎಲ್ಲರೂ ಕ್ರಿಸ್ ಮಸ್ ಗೆ 2 ವಾರಗಳ ಕಾಲ ಹಿಂತಿರುಗುತ್ತಿದ್ದರು.  ಹಾಗೆ ಮಾತನಾಡುವಾಗ ಸ್ವಲ್ಪ ಕ್ರೈಸ್ತ ಧರ್ಮದ ಉಪದೇಶ ಮಾಡಿದ. ಮೂರ್ತಿ ಪೂಜೆ ಕೆಟ್ಟದ್ದು ಅಂತ ಹೇಳಿದ. ಈ ನನ್ನ ಪ್ರಯಾಣದಲ್ಲಿ ನಾನೇ ವಾದ ಮಾಡುವ ಇಷ್ಟವಿಲ್ಲದಿದ್ದರಿಂದ ಸುಮ್ಮನೆ ಎಲ್ಲ ಕೇಳಿದ. ಅತೀ ಬಡವ ಮನೆತನದಿಂದ ಬಂದಿದ್ದ ಅವರು, ಬೆಂಗಳೂರಿನಲ್ಲಿ ಈಗ ಅವರ ಕುಟುಂಬದವರು ಎಲ್ಲರೂ ಸರಿ  ಲಕ್ಷ - ಲಕ್ಷ ವ್ಯಾಪಾರ ಮಾಡುತ್ತರಂತೆ. ಎಷ್ಟೇ ದುಡಿದರೂ ಸಹ ಲಾಭದಲ್ಲಿ 10% ಅನ್ನು ಖಡ್ಡಾಯವಾಗಿ ತಮ್ಮೊರಿನ ಚರ್ಚ್ ಗೆ ಕೊಡುತ್ತರಂತೆ.   "ಸರಿ ನೀವು ಟಾಕ್ಸ್ ಕಟ್ಟುತೀರ ಅಂತ ಕೇಳಿದರೆ" ನಿರುತ್ತರನಾದ.   ನಮ್ಮ ದೇಶದ ಧರ್ಮ ಎಂಬುದು ಒಮ್ಮೊಮ್ಮೆ ಅಂಟಿದ ಶಾಪ ಎನಿಸುತ್ತದೆ ( ಗಾಲಿ  ರೆಡ್ಡಿ:  45 ಕೋಟಿ ಕಿರೀಟವನ್ನು ತಿರುಪತಿಗೆ ಕೊಡುತ್ತಾನೆ , ನೆಟ್ಟಿಗೆ ಕಂದಾಯ ಕಟ್ಟುವುದಿಲ್ಲ )

ಬಿಡರ್ನಲ್ಲಿ ಇಳಿದಾಗ 3 ಗಂಟೆ . ಅಲ್ಲಿಂದ ನಡೆದುಕೊಂಡು ಹೋಗಿ ಒಂದು ಹೊಟೇಲ್ ನಲ್ಲಿ ಉಳಿದುಕೊಂಡೆ.

ಹೋಟೆಲ್ನಲ್ಲಿ ಮಾತನಾಡಿ ಜಾಗಗಳ ದೊರವನ್ನು ತಿಳಿದು ಕೊಂಡು ಪ್ರಯಾಣ ಶುರು ಮಾಡಿದೆ .

ಮೊದಲು ಹೋಗಿದ್ದು - ಗುರುದ್ವಾರಕ್ಕೆ . ಇಲ್ಲಿಗೆ ಗುರು ನಾನಕ್ ಭೇಟಿ ನೀಡಿದ್ದರಂತೆ . ಇದನ್ನ ಸಿಖ್ಖರು ಮಿನಿ ಪಂಜಾಬ್ ಮಾಡಿಕೊಂಡಿದ್ದಾರೆ.


ಗುರುದ್ವಾರಕ್ಕೆ ಪ್ರವೇಶ ಮಾಡುವ ಮೊದಲು ತಲೆಗೆ ಬಟ್ಟೆ ಕಟ್ಟಿ ಕೊಳ್ಳುವುದು ಕಡ್ಡಾಯ . ಪಕ್ಕದಲ್ಲಿಯೇ ನಾನಕ ಜರಿ ಇದೆ. ಇಲ್ಲಿ ನಾನಕರು ನೀರು ಕುಡಿದ ಜಾಗ ಇದೆ.


ಒಳಗೆ ಗುರು ಗ್ರಂಥ ಸಾಹಿಬ ನ ಮುಂದೆ - ಎಲ್ಲ ರೀತಿಯ ಆಯುಧಗಳನ್ನು ಇಟ್ಟಿದ್ದಾರೆ.   ಈ ಶಸ್ತ್ರ ಪೂಜೆಯಿಂದಲೆ  ಇವರು ಮೊಘಲ್ ಸಾಮ್ರಾಜ್ಯ ಮುಗಿಸಿ, ಮತ್ತೆ ಹಿಂದೂ ರಾಷ್ಟ್ರ ಕಟ್ಟಲು ಶಕ್ತವಾದರೂ ಅಂತ ಸ್ಪಷ್ಟ.  ಪಕ್ಕದಲ್ಲಿರು ಒಂದು ಮಂದಿರದಲ್ಲಿ ಎಲ್ಲ ಸಿಖ್ ಮಹಾತ್ಮರ ಫೋಟೋ ಇಟ್ಟಿದ್ದಾರೆ.
  

                                    

ಗುರುದ್ವಾರ ಪಕ್ಕದಲ್ಲಿಯೇ ಹಜ್ರತ ಸಯೀದ್ ಅವರ ಸಮಾಧಿ ಇದೆ. ಇವರು ಬಹಮನಿ ರಾಜನೊಬ್ಬನ ರಾಜ ಗುರುವಾಗಿದ್ದಾರಂತೆ. ಇಲ್ಲಿ ಮುಸಲ್ಮಾನರಿಗೆ ಉರಸ್ ನಡೆಸುವುದಕ್ಕೆ ನಿಷೇಧವಿಧೆ.




ನಂತರ ಅಲ್ಲಿಂದ ಸುಮಾರು 1 ಕಿಲೋಮೀಟರ್ ಮುಂದೆ - ಬರೀದ್ ಶಾಹಿ ಉದ್ಯಾನ ಇದೆ. ಇಲ್ಲಿ ರಾಜ ವಂಶದವರ ಸಮಾಧಿಯಿದೆ. ಈ ರಾಜರುಗಳು ತುರ್ಕಿ (TURKEY) ಮೂಲದವರು. 

ಇಲ್ಲಿಂದ ಮುಂದೆ 2 ಕಿಲೋಮೀಟರ್ ನಡೆದು ಹೋದರೆ ಪಾಪನಾಶ ದೇವಸ್ಥಾನ ಸಿಗುತ್ತದೆ.  ಇದರ ಪಕ್ಕದಲ್ಲಿಯೂ ಸಹ ಒಂದು ನೀರಿನ ಜರಿ ಇದೆ.
 
                                       


ಸುಮಾರು 5-6 ಕಿಲೋಮೀಟರ್ ನಡೆದು ಸುಸ್ತಾಗಿತ್ತು. ಆಟೋ ಹಿಡಿದು ಹೋಟಲ್ಗೆ ಹೋದೆ.

ಬೆಳಗ್ಗೆ ಎದ್ದು ಬೀದರ್ ಕೋಟೆಗೆ ವಾಕಿಂಗ್ ಶುರು . ಬಿದರ್ನಲ್ಲಿ ಒಂದು ಭವ್ಯವಾದ ಕೋಟೆ ಇದೆ.  ಇದು ಹಿಂದೂ ರಾಜರಾದ ಕಲ್ಯಾಣಿ ಚಾಲುಕ್ಯರು,  ಕಾಕತಿಯರು ಕಟ್ಟಿದ ಈ ಕೋಟೆಯನ್ನು ದೂರದಿಂದ ಬಂದ ತುರ್ಕಿಗಳು (TURKEY) ಹಾಗೋ ಪೆರ್ಸಿಯನ್ನಾರು (persians) ಆಕ್ರಮಿಸಿ ಬಳಸಿಕೊಂಡರು. ಚಿತ್ರದುರ್ಗದ ಕೋಟೆಗೆ ಹೊಲಿಸಿದರೆ ಇದನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನು ನಿರ್ವಹಣೆ ಮಾಡುತ್ತಿದ್ದರೆ. ಕೋಟೆಯ ಸುತ್ತಲೂ ಕೊಳಚೆ ನೀರು ಹರಿಯುತ್ತದೆ. 



ಕೋಟೆಯ ಸುತ್ತಲೂ ನೀರು ಹರಿದಾಡಲೂ ದೊಡ್ಡ ಕಂದಕಗಳಿವೆ.  ಇದೇ ರೀತಿಯ ಕೋಟೆಗಳನ್ನು ನೀವು ಬಸವ ಕಲ್ಯಾಣ, ಗುಲ್ಬರ್ಗಾ ಇಲ್ಲೂ ಸಹ ನೋಡಬಹುದು





ಪ್ರಮುಖ ಬಾಗಿಲು
 ಮೇಲಿನ ಬಾಗಿಲಿನ ಮುಂದೆ ಈ ಕಲ್ಲನ್ನು ಪೂಜೆ ಮಾಡುತ್ತಾರೆ. ಕೇಳಿದಾರ ಒಬ್ಬ ದಾರಿ ಹೊಯ್ಕ ಇದನ್ನು ಪಾಂಡುರಂಗನ ವಿಗ್ರಹ ಎಂದ.  ವಿಭೂತಿಯನ್ನು ನೋಡಿದರೆ ಇದು ಶಿವಲಿಂಗದ ಭಾಗ ಎಂದು ತಿಳಿಯುತ್ತದೆ. (ಮುಹಮ್ಮದ್ ಘಜ್ನಿ ಕೂಡ ಸೋಮನಾಥ ದೇವಾಲಯದ ಶಿವಲಿಂಗವನ್ನು ಮೆಟ್ಟಿಲು ಮಾಡಿದ್ದು ಎಲ್ಲರಿಗೂ ತಿಳಿದಿದೆ)
                                    


ಕೋಟೆಯ ಒಳಗಡೆ ಇನ್ನೊಂದು ಹಳೆಯ ಕೋಟೆಯಿದೆ. ಅದರ ಚಿತ್ರ

 
ಹಳೆಯ ಕೋಟೆ
ಮುಂದೆ ಕೋಟೆಯಲ್ಲಿ ಒಂದು ಕೆರೆ ಕಾಣುತ್ತದೆ.
ಬೊಮ್ಮಗೊಂಡೈಯ್ಯ ಕೆರೆ
 ಸುಮಾರು 700 ವರ್ಷಗಳ ಕಾಲ ಇಸ್ಲಾಮಿಕ್ ಆಡಳಿತದಲ್ಲಿದ್ದರೂ ,ಕೋಟೆಯಲ್ಲಿರುವ ಈ ಕೆರೆಗೆ ಅಚ್ಚ ಕನ್ನಡ ಹೆಸರೇ ಉಳಿದುಕೊಂಡಿದೆ.





ಕನ್ನಡ ಶಾಸನ
 ಕೋಟೆಯಲ್ಲಿ ಓಡಾಡುವಾಗ ಒಂದು ಉಚ್ಚ್ಚೆ ಮಾಡುವ ಜಾಗ ಕಂಡಿತು. ಅಲ್ಲಿ ಸಿಕ್ಕ ಒಂದು ಕನ್ನಡ ಶಾಸನ. ನಾನು ಕಷ್ಟಪಟ್ಟು ತೆಗೆದ ಒಂದು ಫೋಟೋ

ಕೋಟೆಯಲ್ಲಿ ವಿಶಾಲವಾದ ಜಾಗ

ಕೋಟೆ ನೋಡಿದ ನಂತರ ಮುಸಿಯಮ್ ಗೆ ಭೇಟಿ ಕೊಟ್ಟೆ. ಒಳಗೆ ಕನ್ನಡದ ಕೆಲ್ವು ಶಾಸನಗಳು, ಗಣೇಶ, ದೇವತೆಯರ,  ಕಾಕತಿಯರ ವಿಗ್ರಹಗಳು ಕಾಣಿಸುತ್ತವೆ.
ಕೋಟೆಯ ಮುಸಿಯಮ್ ನಲ್ಲಿ ಇರುವ ಹಿಂದೂ ವಿಗ್ರಹಗಳು



ಮುಸಿಯಮ್ ಎದುರಿಗಿರುವ ಉದ್ಯಾನ ಮತ್ತು ಬಲದಲ್ಲಿ ಮಸೀದಿ 

ರಾಣಿಯ ಗೃಹಗಳು 

 ಕೋಟೆಯ ಒಳಗೆ ಇರುವ ಯಾವುದೇ ಸೆಕ್ಯೂರಿಟೀ ಗಾರ್ಡ್ ಗೆ ಕನ್ನಡ ಬರುವುದಿಲ್ಲ.  ಇಡೀ ಕೋಟೆಯಲ್ಲಿ ನಿಮಗೆ ಒಂದೇ ಒಂದು ಕನ್ನಡ ಬೋರ್ಡ್ ಸಿಕ್ಕರೆ ಪುಣ್ಯ.  ನನಗೆ ಇಬ್ಬರು ಬಾಲಕರು ಒಳಗೆಸಿಕ್ಕಿದರು. ಒಬ್ಬನೊಂದಿಗೆ ನಾನು ಕನ್ನಡಲ್ಲಿ ಮಾತನಾಡುತ್ತಿರುವಾಗ, ಇನ್ನೊಬ್ಬ ಅವನಿಗೆ - "ಹಿಂದಿ ಮೇ ಬಾತ್ ಕಾರ್" (ಅವನೂ ನಂತರ ಕನ್ನಡಲ್ಲಿ ಮಾತನಾಡಿದ) ಅಂತ ಉಪಾದೇಶ  ನೀಡಿದ. ಈ ಬಾಲಕನೇ ಹೀಗೆ ಮಾತನಾಡಿದರೆ, ಇಲ್ಲಿನ ಮುಸ್ಲಮನರೆ ಮನಸ್ಥಿತಿ ಹೇಗಿರಬೇಡ ಅಂದುಕೊಂಡೆ.


ಇಲ್ಲಿಂದ ಮುಂದೆ ಮಹಮ್ಮದ್ ಗವನ್ ಅರಬಿಕ್ ಯೂನಿವರ್ಸಿಟೀ (ಅಂತ ನಾನು ಓದಿದ್ದು) ನೋಡಲು ಹೋದೆ . ಇದು ಪೂರ್ಣ ಮುಸ್ಲಿಂ ಬಡವಣೆಯಲ್ಲಿದೆ. ಇಲ್ಲಿ ನೀವು ಮಾತನಾಡಿಸಿದರೂ ಕೂಡ ಯಾವುದೇ ಮುಸ್ಲಿಂ ಕನ್ನಡ ಮಾತನಾಡುವುದಿಲ್ಲ. ಸ್ಟೇಷನ್ ಹತ್ತಿರ ಸಿಕ್ಕ ಮತ್ತೊಬ್ಬ ಮುಸಲ್ಮಾನನು ಕನ್ನಡ ಮಾತನಾಡಲಿಲ್ಲ.

ಇಲ್ಲಿನ ಮುಸ್ಲಮನರಲ್ಲಿ ಇನ್ನೊ ಬಹಮನಿ, ನಿಜಾಮ್, ಗತ ಕಾಲದ ನೆನೆಪಿನಲ್ಲಿದ್ದಾರೆ ಅಂತ ಅನಿಸುತ್ತದೆ.  ನಿಜಮಾನ ಆಳ್ವಿಕೆಯಲ್ಲಿದ್ದ ತೆಲಂಗಾಣ ಪ್ರದೇಶವೇನಾದರೂ ಬೇರೆ ರಾಜ್ಯವಾದರೆ - ಇಲ್ಲಿನ ಮುಸಲ್ಮಾನರೂ ಕೂಡ ನಮ್ಮನೂ ತೆಲಂಗಣಕ್ಕೆ ಸೇರಿಸಿ ಅಂತ ಒತ್ತಾಯಿಸುವುದರಲ್ಲಿ ಆಶ್ಚರ್ಯವಿಲ್ಲ. (ತೆಲಂಗಾಣ ಪ್ರದೇಶ ನಿಜಮಾನ ಅಧಿಕಾರದಲ್ಲಿತ್ತು. ಅಲ್ಲಿ ಮುಸಲ್ಮಾನರೂ ಹೆಚ್ಚಿನ ಸಂಕ್ಯೆಯಲ್ಲಿದ್ದಾರೆ. ಆದಕ್ಕಾಗಿ ಮುಸಲ್ಮಾನರು ಹೋರಾಟ ಮಾಡುತ್ತಿರುವುದು, ಮುಸಲ್ಮಾನರು ಬಹುಸಂಕ್ಯತರಿರುವ ರಾಜ್ಯ ಸ್ಥಾಪಿಸುವುದಕ್ಕೆ)

ದಾರಿಯಲ್ಲಿ 3 ಗೋಮಾಂಸದ ಅಂಗಡಿಗಳನ್ನು ರಾಜ ರೋಷವಾಗಿ ನಡೆಸುಟ್ಟಿದುದು ಕಂಡು ಬಂತು.  ಮುಂದೆ ಕಟ್ಟಡವನ್ನು ನೋಡಿದ ಮೇಲೆಯೇ ನನಗೆ ತಿಳಿದಿದ್ದು - ಅದು ಯೂನಿವರ್ಸಿಟೀ ಅಲ್ಲ ಕೇವಲ ಮದ್ರಸ ಎಂದು . ಇಷ್ಟು ಸಣ್ಣ ಕಟ್ಟಡವನ್ನು ಹೇಗೆ ಯೂನಿವೇರ್ಸಿಟಿ ಅಂತ ಕರೆದರೋ ತಿಳಿದಿಲ್ಲ



 ಗವನ್ ಮದ್ರಸ ಮುಗಿಸಿ ನರಸಿಂಹ ಝರಿ ನೋಡಲು ಹೋದೆ . ಇದು ಜನ ನರಸಿಂಹ ಜರ್ನ ಅಂತ ಹಿಂದಿ ಹೆಸರು ಇತ್ತು ಕರೆಯುತ್ತಾರೆ.  ಇಲ್ಲಿ ಎದೆಯ ಮಟ್ಟದವರೆಗೂ ನೀರಿನಲ್ಲಿ ನಡೆದುಕೊಂಡು ನರಸಿಂಹನ ದರ್ಶಣ ಮಾಡಬೇಕು. ದೊಡ್ಡ ಸಾಲು ಇದ್ದುದರಿಂದ ನಾನು ಒಳಗೆ ಹೋಗಲಿಲ್ಲ. 


ನರಸಿಂಹ ದೇವಸ್ಥಾನ ಬಲ ಪಕ್ಕದಲ್ಲಿ ಮಸೀದಿ


ಇಷ್ಟು ಮುಗಿಸಿ ಬಸ್ಸು ಹತ್ತಿ ಬಸವ ಕಲ್ಯಾಣದ ಕಡೆ ಪ್ರಯಾಣ ಶುರು ಮಾಡಿದೆ. 

No comments:

Post a Comment